ನಗೆ ಡಂಗುರ – ೯೭

ಅವರು: “ತಾವು ಸಿಗರೇಟು ಸೇದುತ್ತೀರಾ?”
ಇವರು: “ಇಲ್ಲಪ್ಪ.”
ಅವರು: “ಬೀಡಿ ಚುಟ್ಟ ಇತ್ಯಾದಿ?”
ಇವರು: “ಛೇ, ಛೇ ಅವಾವುದೂ ಇಲ್ಲ”
ಅವರು: “ಕುಡಿಯುವ ಅಭ್ಯಾಸ?”
ಇವರು: “ಅಯ್ಯೋ ಅದರ ಗಂಧವೇ ಗೊತ್ತಿಲ್ಲ”
ಅವರು: “ಆಯ್ತು. ಇಸ್ಪೀಟು, ಜೂಜು ವಗೈರೆ?”
ಇವರು: “ಎಲ್ಲಾದರೂ ಉಂಟೆ? ಅಂತಹ ದುರಭ್ಯಾಸಗಳು ಇಲ್ಲವೇ ಇಲ್ಲ.”
ಅವರು: “ಪರವಾಗಿಲ್ಲವೆ. ಯಾವೊಂದು ದುಶ್ಚಟವೂ ನಿಮಲ್ಲಿ ಬಳಿಸುಳಿದಿಲ್ಲ. ನಿಜಕ್ಕೂ ನಿಮ್ಮದು ಅದ್ಭುತ!”
ಇವರು: “ಆದರೆ ಒಂದೇ ಒಂದು ಅಭ್ಯಾಸ ನನಗೆ ಪರಂಪರಾನುಗತವಾಗಿ ಬಂದಿದೆ. ಅಷ್ಟೆ.”
ಅವರು: “ಅದೇನು ಅಂತ ಬೇಗ ಹೇಳಿಪ್ಪ ಕೇಳೋಣ.”
ಇವರು: “ಸುಳ್ಳು ಹೇಳೋದು!”
***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದುಕು ಹೀಗೇಕೆ !
Next post ದೀಪ ಮಾತಾಡಿತು

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

cheap jordans|wholesale air max|wholesale jordans|wholesale jewelry|wholesale jerseys