ಉಪ್ಪರಿಗೆ ಕೆಳಗೆ

ಗೆಳತಿ,
ಅಂದು ಅಮವಾಸ್ಯೆ ಕಳೆದು
ಹುಣ್ಣಿಮೆ ಬರುತ್ತಿತ್ತು
ಹೊಳೆವ ಚಿಕ್ಕಿಗಳ ಮಧ್ಯ
ಚಂದ್ರನ ಹಾಲು ಬೆಳದಿಂಗಳು,
ಹೊಗಳಿ ವಣ್ಣಿಸುತ್ತಿದ್ದೆ-
ಚುಕ್ಕೆ ಚಂದ್ರಮನು,
ಭಾವುಕಳಾಗಿದ್ದೆ,
ಮೈಮರೆತು ನೋಡುತ್ತಿದ್ದೆ.

ಏನು ಹೊಳೆಯಿತೋ ನಿನಗೆ
ಚುಚ್ಚಿ ಎಬ್ಬಿಸಿ ನನ್ನ
ಉಪ್ಪರಿಗೆ ಕೆಳಗಿದ್ದ
ಕಪ್ಪು ಜನಗಳ ತೋರಿದ್ದೆ ನನ್ನ.

ಆಕಾಶದಡಿಯಲ್ಲಿ ಅಂಗಾತ
ಮಲಗಿದ್ದ ನನ್ನಕ್ಕ ತಂಗಿಯರು
ತೊಟ್ಟ ಸೀರೆ-ಕುಪ್ಪಸಗಳಿಗೆ
ನೂರೆಂಟು ತೇಪೆಗಳ
ತೆರೆದು ತೋರಿದೆ ನನ್ನ,
ಕೊರೆವ ಚಳಿ, ಬಿರುಗಾಳಿ
ಬಿರುಸಾಗಿ ಬೀಳುವ
ಮಳೆಯಾಲಿ ಕಲ್ಲುಗಳಿಗೆ
ನಡುಗಿ – ನರಳಾಡಿ
ಉರುಳಿ – ಬೀಳುವ ನನ್ನವರ
ಜೋಪಡಿಯ ಸಾಲುಗಳನ್ನು,
ಊರ ಮುಂದುಗಡೆ
ಉಳ್ಳವರ ದನಗಳಿಗೆ ಮೇವಾಗಿ
ಬೆಳೆದಂಥ ಜನಗಳನು
ದಣಿಯ ಗದ್ದೆಯ ಒಳಗೆ
ದುರಿದು ಹಣ್ಣಾದಂಥ
ಹೂತು ಹೋಗಿರುವಂಥ
ಮೂಳೆಗಳನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾಣಾ ನಾವಾಗದಿದೇನೆಲ್ಲದಕು ತಜ್ಞರವಲಂಬನೆಯೊ?
Next post ಯಾಕೆ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

cheap jordans|wholesale air max|wholesale jordans|wholesale jewelry|wholesale jerseys