ಉಪ್ಪರಿಗೆ ಕೆಳಗೆ

ಗೆಳತಿ,
ಅಂದು ಅಮವಾಸ್ಯೆ ಕಳೆದು
ಹುಣ್ಣಿಮೆ ಬರುತ್ತಿತ್ತು
ಹೊಳೆವ ಚಿಕ್ಕಿಗಳ ಮಧ್ಯ
ಚಂದ್ರನ ಹಾಲು ಬೆಳದಿಂಗಳು,
ಹೊಗಳಿ ವಣ್ಣಿಸುತ್ತಿದ್ದೆ-
ಚುಕ್ಕೆ ಚಂದ್ರಮನು,
ಭಾವುಕಳಾಗಿದ್ದೆ,
ಮೈಮರೆತು ನೋಡುತ್ತಿದ್ದೆ.

ಏನು ಹೊಳೆಯಿತೋ ನಿನಗೆ
ಚುಚ್ಚಿ ಎಬ್ಬಿಸಿ ನನ್ನ
ಉಪ್ಪರಿಗೆ ಕೆಳಗಿದ್ದ
ಕಪ್ಪು ಜನಗಳ ತೋರಿದ್ದೆ ನನ್ನ.

ಆಕಾಶದಡಿಯಲ್ಲಿ ಅಂಗಾತ
ಮಲಗಿದ್ದ ನನ್ನಕ್ಕ ತಂಗಿಯರು
ತೊಟ್ಟ ಸೀರೆ-ಕುಪ್ಪಸಗಳಿಗೆ
ನೂರೆಂಟು ತೇಪೆಗಳ
ತೆರೆದು ತೋರಿದೆ ನನ್ನ,
ಕೊರೆವ ಚಳಿ, ಬಿರುಗಾಳಿ
ಬಿರುಸಾಗಿ ಬೀಳುವ
ಮಳೆಯಾಲಿ ಕಲ್ಲುಗಳಿಗೆ
ನಡುಗಿ – ನರಳಾಡಿ
ಉರುಳಿ – ಬೀಳುವ ನನ್ನವರ
ಜೋಪಡಿಯ ಸಾಲುಗಳನ್ನು,
ಊರ ಮುಂದುಗಡೆ
ಉಳ್ಳವರ ದನಗಳಿಗೆ ಮೇವಾಗಿ
ಬೆಳೆದಂಥ ಜನಗಳನು
ದಣಿಯ ಗದ್ದೆಯ ಒಳಗೆ
ದುರಿದು ಹಣ್ಣಾದಂಥ
ಹೂತು ಹೋಗಿರುವಂಥ
ಮೂಳೆಗಳನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾಣಾ ನಾವಾಗದಿದೇನೆಲ್ಲದಕು ತಜ್ಞರವಲಂಬನೆಯೊ?
Next post ಯಾಕೆ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…