ನೋವಿನ ಬಿರುಗಾಳಿ
ಬಾಳಲಿ ಬೀಸುತಲಿ
ಬರೆ ನೀಡುತ…
ಬಡಿದು-ನೋಯಿಸುತ
ತನು-ಮನ ಕಲುಕುತಿಹದು
ಪ್ರತಿಭೆ-ಪ್ರಸನ್ನತೆಗಳ
ಭ್ರಮನಿರಸನದ ಆದರ್ಶ
ಬವಣೆಯಲಿ ಬಳಲುತಿಹದು
ಅನಾಚಾರ… ಕಂದಾಚಾರ
ರಾರಾಜಿಸುತ… ರಂಜನೆಯಲಿ
ಎಲ್ಲೆಡೆ ಹರಡಿಹವು
ಏಕನಾದದಿ ಮಿಡಿಯುತ
ಮಾರಕ ಯಾತನೆಯಲಿ
ಗಹ… ಗಹಿಸುತಿಹವು
ಸುಪ್ತ ಮನಸ್ಸುಗಳ
ಆಳದಿ ತುಂಬಿ…
ಬದುಕಿನ ಪ್ರಶ್ನೆಗಳೇ…
ಕೇಳುತಲಿ ಹಲವು
ಜೀವಂತ ಹೆಣವಾಗಿಸುವ
ಹುನ್ನಾರದಿ ಆತ್ಮ ಸ್ಥೈರ್ಯ
ಅಂತರಾಳದಿ ಎಚ್ಚರಗೊಳಿಸುತಿಹವು
ಏಳಬೇಕು… ಎಚ್ಚರದಿ
ಎದ್ದೇಳಬೇಕು… ಮನಸ್ಸು
ಆತ್ಮ – ಗುಂಡಾಗಿಸಿ…
ಸಿಡಿಯುತಲಿ ಉರುಳಬೇಕು
ಕತ್ತಲೆ ಸೀಳುವ ಮಿಂಚಾಗಿ
ದೀವಿಗೆಯ ಬೆಂಕಿ ಬೆಳಕಾಗುತ
*****
Latest posts by ರವಿ ಕೋಟಾರಗಸ್ತಿ (see all)
- ಅಮರ ಕಲಾವಿದ ಸಪ್ದರ - October 23, 2020
- ಪ್ರತಿಭಾವಂತ ಜಾದೂಗಾರ - August 7, 2020
- ಮಧುರ ಬಾಂಧವ್ಯದ ಭಾವಜೀವಿ - April 24, 2020