Home / ಕವನ / ಕವಿತೆ / ಗೂನುಬೆನ್ನಿನ ತರುಣಿ

ಗೂನುಬೆನ್ನಿನ ತರುಣಿ

 

ಬಗ್ಗಿ ನಡೆಯುತ್ತಾಳೆ ಬೀಳಿಸಿಕೊಂಡು ವ್ಯಸನಗಳನ್ನು,
ಗೂನು ಬೆನ್ನಿನ ತರುಣಿ
ಖಾಲಿ ರಸ್ತೆಯಲ್ಲಿ ಭಂಗಿ ಸೇದಿಕೊಂಡು.

ಮೋಟು ಕೈ ಕಾಲುಗಳನ್ನು ಬಂಧಿಸುತ್ತಾಳೆ,
ತಿವಿಯುತ್ತಾಳೆ
ಕಾದ ಕಬ್ಬಿಣದ ಸಲಾಖೆಯಿಂದ ಮುಗ್ಧ ರಕ್ತವನ್ನು,
ಸುಡುತ್ತಾಳೆ ಬಂದೂಕಿನಿಂದ ಹುಣಸೆಮರಕ್ಕೆ ನೇತಾಕಿದ
ಹಂದಿಗೊಡ್ಡನ್ನು.

ಕ್ರೂರ ಆಶೆಗಳನ್ನು ಸೊಂಟದಲ್ಲಿರಿಸಿಕೊಂಡು ತಿಂದು ಮುಗಿಸುವಳು,
ಕೂರೆಹೇನುಗಳಂತೆ ಗಾಢ ನಿದ್ರೆಯಲ್ಲಿ.

ಕೋಣೆ ತುಂಬಿಕೊಳ್ಳಬಲ್ಲ, ಲಕ್ವಾ ಹೊಡೆದ ಗಡಿಯಾರವನ್ನು
ಬಡಿದೆಬ್ಬಿಸುವ ನಿತ್ಯ ಕಾಯಿಲೆ.

ಇಸ್ತ್ರಿಗೆ ಕೊಟ್ಟಿದ್ದ ಜೀನ್ಸ್‌ಗೌನ್ ಸುಟ್ಟುಹೋದದ್ದರ ಕುರಿತು
ಗ್ರಾಮದ ಕೌನ್ಸಿಲರ್‌ಗೊಂದು ಅಹವಾಲು ಮುಟ್ಟಿಸಲು
ತನ್ನ ನರೆಗೂದಲ ಸಂಗ್ರಹದಿಂದ ಚಂದದ ತುರುಬೊಂದನ್ನು
ಹೆಣೆದಿಟ್ಟುಕೊಂಡಿದ್ದಾಳೆ.

ಹುಳುಕಡ್ಡಿ ಮುಖದ ಪಾದ್ರಿಗೆ
ತನ್ನ ಗದ್ದೆ ಬದುವಿನ ಹಾದಿ ಬಿಟ್ಟುಕೊಡುತ್ತಾಳೆ.
ಅನ್ವನೋ ಮೂತ್ರ ಹೊಯ್ಯುತಾ ಬರುತ್ತಿರುತ್ತಾನೆ,
ಬಿಳಿನಿಲುವಂಗಿಯನ್ನು ಕೊಡವುತಾ ಕುತ್ತಿಗೆಯನ್ನು
ಆಗಸಕ್ಕೆ ತೂರಿ.

ಹಿಮದ ಮಳೆ:
ಗೋಡೆ ಬಿರುಕೊಡೆದಿದೆ, ಗೊಣಗಾಡಿಕೊಂಡು ಮೂಲೆ ಸೇರುತ್ತಾಳೆ,
ಮಾತೃಪ್ರೇಮದ ನಶೆಯಲ್ಲಿ ನೂರಾರು ಹಂದಿಗಳೆನ್ನೆರಬಲ್ಲ
ಯಂತ್ರವಾಗುತ್ತಾಳೆ.

*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...