Home / ಕವನ / ಕವಿತೆ / ಗೂನುಬೆನ್ನಿನ ತರುಣಿ

ಗೂನುಬೆನ್ನಿನ ತರುಣಿ

 

ಬಗ್ಗಿ ನಡೆಯುತ್ತಾಳೆ ಬೀಳಿಸಿಕೊಂಡು ವ್ಯಸನಗಳನ್ನು,
ಗೂನು ಬೆನ್ನಿನ ತರುಣಿ
ಖಾಲಿ ರಸ್ತೆಯಲ್ಲಿ ಭಂಗಿ ಸೇದಿಕೊಂಡು.

ಮೋಟು ಕೈ ಕಾಲುಗಳನ್ನು ಬಂಧಿಸುತ್ತಾಳೆ,
ತಿವಿಯುತ್ತಾಳೆ
ಕಾದ ಕಬ್ಬಿಣದ ಸಲಾಖೆಯಿಂದ ಮುಗ್ಧ ರಕ್ತವನ್ನು,
ಸುಡುತ್ತಾಳೆ ಬಂದೂಕಿನಿಂದ ಹುಣಸೆಮರಕ್ಕೆ ನೇತಾಕಿದ
ಹಂದಿಗೊಡ್ಡನ್ನು.

ಕ್ರೂರ ಆಶೆಗಳನ್ನು ಸೊಂಟದಲ್ಲಿರಿಸಿಕೊಂಡು ತಿಂದು ಮುಗಿಸುವಳು,
ಕೂರೆಹೇನುಗಳಂತೆ ಗಾಢ ನಿದ್ರೆಯಲ್ಲಿ.

ಕೋಣೆ ತುಂಬಿಕೊಳ್ಳಬಲ್ಲ, ಲಕ್ವಾ ಹೊಡೆದ ಗಡಿಯಾರವನ್ನು
ಬಡಿದೆಬ್ಬಿಸುವ ನಿತ್ಯ ಕಾಯಿಲೆ.

ಇಸ್ತ್ರಿಗೆ ಕೊಟ್ಟಿದ್ದ ಜೀನ್ಸ್‌ಗೌನ್ ಸುಟ್ಟುಹೋದದ್ದರ ಕುರಿತು
ಗ್ರಾಮದ ಕೌನ್ಸಿಲರ್‌ಗೊಂದು ಅಹವಾಲು ಮುಟ್ಟಿಸಲು
ತನ್ನ ನರೆಗೂದಲ ಸಂಗ್ರಹದಿಂದ ಚಂದದ ತುರುಬೊಂದನ್ನು
ಹೆಣೆದಿಟ್ಟುಕೊಂಡಿದ್ದಾಳೆ.

ಹುಳುಕಡ್ಡಿ ಮುಖದ ಪಾದ್ರಿಗೆ
ತನ್ನ ಗದ್ದೆ ಬದುವಿನ ಹಾದಿ ಬಿಟ್ಟುಕೊಡುತ್ತಾಳೆ.
ಅನ್ವನೋ ಮೂತ್ರ ಹೊಯ್ಯುತಾ ಬರುತ್ತಿರುತ್ತಾನೆ,
ಬಿಳಿನಿಲುವಂಗಿಯನ್ನು ಕೊಡವುತಾ ಕುತ್ತಿಗೆಯನ್ನು
ಆಗಸಕ್ಕೆ ತೂರಿ.

ಹಿಮದ ಮಳೆ:
ಗೋಡೆ ಬಿರುಕೊಡೆದಿದೆ, ಗೊಣಗಾಡಿಕೊಂಡು ಮೂಲೆ ಸೇರುತ್ತಾಳೆ,
ಮಾತೃಪ್ರೇಮದ ನಶೆಯಲ್ಲಿ ನೂರಾರು ಹಂದಿಗಳೆನ್ನೆರಬಲ್ಲ
ಯಂತ್ರವಾಗುತ್ತಾಳೆ.

*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...