ಸಾಯುತ್ತಿರುವ ಕವಿಯ ಸಂದೇಶ, ಯುವಕರಿಗೆ

ಬರಲಿರುವ ಕಾಲದ ಯುವಕರೇ,
ಇನ್ನೂ ಕಟ್ಟದಿರುವ ನಗರಗಳಲ್ಲಿ
ಹುಟ್ಟದಿರುವ ಎಳೆಯ ಜೀವಗಳೇ,
ಕ್ಷುದ್ರವಾಗಿ ಸತ್ತ ಈ ಮುದುಕನ ಮಾತನ್ನು ಕೇಳಿ.

ತನ್ನ ಹೊಲವನ್ನು ಉತ್ತು ಬಿತ್ತದ ರೈತನಂತೆ.
ಮನೆಯ ಚಾವಣಿಗೆ ತೊಲೆ ಕೂಡಿಸಿವುದನ್ನು ಅರ್‍ಧಕ್ಕೇ ಬಿಟ್ಟು ಓಡಿದ ಬಡಗಿಯಂತೆ

ನಾನೂ ಕಾಲ ದಂಡಮಾಡಿದೆ,
ದಿನಗಳನ್ನು ಸುಮ್ಮನೇ ಕಳೆದೆ.
ಹೇಳದೆ ಉಳಿದಿರುವುದನ್ನೆಲ್ಲ ನೀವು ಹೇಳಿ.
ಮಾಡದೆ ಉಳಿದಿರುವುದನ್ನೆಲ್ಲ ನೀವು ಮಾಡಿ.
ನನ್ನನ್ನು ಮರೆತುಬಿಡಿ. ನನ್ನ ನಿದರ್ಶನ
ನಿಮ್ಮ ದಾರಿ ತಪ್ಪಿಸದಿರಲಿ.

ಬಿತ್ತದ ಬೆಳೆಯದ ಜನರೊಂದಿಗೆ ಕೂತು
ಅವರು ಬೇಯಿಸದ ಔತಣವನ್ನು ಮೆಚ್ಚಿಮೆಚ್ಚಿ ಉಂಡೆ, ಏಕೆ?
ನನ್ನ ಸುಂದರ ಸೂಕ್ತಿಗಳನ್ನು ಅವರ ಹರಟೆಗೆ
ಉಪ್ಪಿನಕಾಯಿ ಹಾಗೆ ಒದಗಿಸಿದೆ, ಏಕೆ?
ಅಕ್ಷರಕ್ಕಾಗಿ ಹಸಿದವರು, ಕವಿತೆಗೆ ಬಾಯಾರಿದವರು
ಬೀದಿಯಲ್ಲಿ ಸುಮ್ಮನೇ ಸುತ್ತುತ್ತಿದ್ದರು.

ಊರುಗಳನ್ನು ಕಟ್ಟುವ ಎಡೆಯಲ್ಲಿ ನನ್ನ ಕವಿತೆಯೇಕೆ ಚಿಗುರುವುದಿಲ್ಲ?
ವೇಗವಾಗಿ ಓಡುವ ಸಿಟಿಯ ರೈಲುಗಳ ಹೊಗೆ
ಆಕಾಶದಲ್ಲಿ ಒಂದಷ್ಟು ಕಾಲ ಉಳಿಯುವಂತೆ
ನನ್ನೆ ಕವಿತೆಯೇಕೆ ಉಳಿಯುವುದಿಲ್ಲ?

ದುಡಿವವರ ಪಾಲಿಗೆ ನನ್ನ ಮಾತು
ಬಾಯಿಗೆ ಹೊಯ್ದ ಬೂದಿಯಂತೆ,
ಕುಡುಕನ ತೊದಲಿನಂತೆ.

ಯುವಕರೇ, ನಿಮಗೆ ಒಂದು ನುಡಿಯನ್ನೂ ಕಲಿಸಲಾರೆ.
ನಡುಗುವ ಬೆರಳೆತ್ತಿ ಇಗೋ ಈ ದಾರಿ ಸರಿ ಎವ್ನಲಾರೆ.
ಎಂದೂ ಎಲ್ಲೂ ಹೋಗದವನು ದಾರಿ ಹೇಗೆ ತೋರಬಲ್ಲ?

ಬದುಕು ದಂಡ ಮಾಡಿದವನು ನಾನು ಹೇಳುವುದಿಷ್ಟೆ-
ನಮ್ಮ ಕೊಳೆತ ಬಾಯಿ ಮುಕ್ಕಳಿಸುವ ಯಾವ ಮಾತನ್ನೂ ಕೇಳಬೇಡಿ.
ಸೋತ ಬೇಸತ್ತ ನಮ್ಮ ಯಾವ ಆದೇಶವನ್ನೂ ಪಾಲಿಸಬೇಡಿ.

ನಾವು ಹಾಳು ಮಾಡಿದ ಹೊಲ ಮತ್ತೆ ವಸುಂಧರೆಯಾಗಲು,
ನಾವು ವಿಷ ತುಂಬಿದ ನಗರ ಜನ ಬದುಕಲು ಯೋಗ್ಯವಾಗಲು
ಏನು ಮಾಡಿದರೆ ಒಳಿತೆಂದು ನಿಮಗೆ ತೋರುವುದೋ ಹಾಗೆ ಮಾಡಿ.
*****
ಮೂಲ: ಬೆರ್ಟಾಲ್ಟ್ ಬ್ರೆಖ್ಟ್ / Bertolt Brecht

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವ ಭಾವ ಬೆರೆತ ಗಾನ
Next post ಸೆರಗು ಸರಿಸುವ ಸರ್ಕಾರಿ ನೀತಿ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

cheap jordans|wholesale air max|wholesale jordans|wholesale jewelry|wholesale jerseys