ಎದ್ದು ಬಾರಯ್ಯ ರಂಗ

ಎದ್ದು ಬಾರಯ್ಯ ರಂಗ
ಎದ್ದು ಬಾರಯ್ಯ ಕೃಷ್ಣ
ಎದ್ದು ಬಂದು ನಿನ್ನ ಮುದ್ದು
ಮೊಗವ ತೋರೋ |

ಹಾಲ ಕಡಲ ಮಥಿಸಿ
ಮಜ್ಜನ ಮಾಡಿಸಿ ನಿನ್ನ
ಗಂಧವ ತೇದು ಪೂಸಿ
ತುಳಸಿಮಾಲೆ ಕೊರಳೊಲು
ಶೃಂಗಾರ ಮಾಡುವರೋ ರಂಗ ||

ಮುದ್ದು ಮೊಗಕೆ ನಿನ್ನ
ಮುತ್ತನ್ನು ಕೊಟ್ಟು ದೃಷ್ಟಿಯಾಗಿತ್ತೆಂದು
ಕಾಡಿಗೆ ಇಟ್ಟು ಗಲ್ಲಕೆ
ಒಂದಿಷ್ಟು ಇಷ್ಟು ಬೆಣ್ಣೆಯ
ಕೊಡವಳೋ ಯಶೋದಾ ||

ಕೊಳಲನೂದಲು ನೀನು
ಬರುವರು ಗೋಪಿಕೆಯರು
ಲೋಕವ ಮರೆತು ಕುಣಿಕುಣಿದು
ನಲಿಯುವರೋ ಗೋಪಾಲ ||

ಅಕ್ಕರೆಯ ತೋರಿ ಸಕ್ಕರೆ ನೀಡಿ
ಗೋಪಮ್ಮ ಕರೆದಾಳೊ ಹೋಗದಿರು
ಮತ್ತೆ ಕಾಡದಿರು ಅಂಗನೆಯರ
ಗುಮ್ಮ ಬರುವನೋ ಕಂದ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರೆಂದರೇನು ಅಜ್ಜ?
Next post ಸಮಯ ನನ್ನದೇ ಅನ್ನಿಸಿದಾಗ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…