ಎದ್ದು ಬಾರಯ್ಯ ರಂಗ

ಎದ್ದು ಬಾರಯ್ಯ ರಂಗ
ಎದ್ದು ಬಾರಯ್ಯ ಕೃಷ್ಣ
ಎದ್ದು ಬಂದು ನಿನ್ನ ಮುದ್ದು
ಮೊಗವ ತೋರೋ |

ಹಾಲ ಕಡಲ ಮಥಿಸಿ
ಮಜ್ಜನ ಮಾಡಿಸಿ ನಿನ್ನ
ಗಂಧವ ತೇದು ಪೂಸಿ
ತುಳಸಿಮಾಲೆ ಕೊರಳೊಲು
ಶೃಂಗಾರ ಮಾಡುವರೋ ರಂಗ ||

ಮುದ್ದು ಮೊಗಕೆ ನಿನ್ನ
ಮುತ್ತನ್ನು ಕೊಟ್ಟು ದೃಷ್ಟಿಯಾಗಿತ್ತೆಂದು
ಕಾಡಿಗೆ ಇಟ್ಟು ಗಲ್ಲಕೆ
ಒಂದಿಷ್ಟು ಇಷ್ಟು ಬೆಣ್ಣೆಯ
ಕೊಡವಳೋ ಯಶೋದಾ ||

ಕೊಳಲನೂದಲು ನೀನು
ಬರುವರು ಗೋಪಿಕೆಯರು
ಲೋಕವ ಮರೆತು ಕುಣಿಕುಣಿದು
ನಲಿಯುವರೋ ಗೋಪಾಲ ||

ಅಕ್ಕರೆಯ ತೋರಿ ಸಕ್ಕರೆ ನೀಡಿ
ಗೋಪಮ್ಮ ಕರೆದಾಳೊ ಹೋಗದಿರು
ಮತ್ತೆ ಕಾಡದಿರು ಅಂಗನೆಯರ
ಗುಮ್ಮ ಬರುವನೋ ಕಂದ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರೆಂದರೇನು ಅಜ್ಜ?
Next post ಸಮಯ ನನ್ನದೇ ಅನ್ನಿಸಿದಾಗ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

cheap jordans|wholesale air max|wholesale jordans|wholesale jewelry|wholesale jerseys