ದೇವರೆಂದರೇನು ಅಜ್ಜ?

“ದೇವರೆಂದರೇನು ಅಜ್ಜ, ದೇವರೆಂದರೇನು ?
ಹೇಳು ಅವನು ಯಾರು, ಏನು, ತಿಳಿಯಬೇಕು ನಾನೂ”

“ಬಾನು ಬುವಿಯ ಕೈಗೆ ಕೊಟ್ಟ ಬೆಳಕಿನೂರೆಗೋಲು,
ಜೀವ ಎಂದೊ ಕುಡಿದು ಮರೆತ ತಾಯಿಯೆದೆಯ ಹಾಲು,
ಕಲ್ಲು ಮಣ್ಣು ಬಳಸದೇನೆ ಕಟ್ಟಿಕೊಂಡ ಮನೆ.
ಏಸು, ಗಾಂಧಿ ಜೀವಜಲವ ಸುರಿಸಿ ಬೆಳೆದ ತೆನೆ.
ಎಂಥ ಮಾರುಕಟ್ಟೆಯಲ್ಲೂ ಸಿಗದ ಸರಕು ಮಗೂ,
ತಾಯ ಕಣ್ಣ ಬೆಳಕಿನಲ್ಲಿ ಹೊಳೆವ ತಾರೆ ಅದು.

“ದೇವರನ್ನೆ ಹೋಲುವುದು ರಾತ್ರಿ ತೆರೆದ ಬಾನು,
ತಲೆಯನೆತ್ತಿ ನೋಡಿದವರಿಗೆಲ್ಲ ಕಂಡರೂನು
ಮುಟ್ಟಬರದು, ಬೆನ್ನನಟ್ಟಿ ಹೋದರೂನು ಸಿಗದು,
ಇದೆ, ಇಲ್ಲ ಎರಡೂ ನಿಜ ತೆಕ್ಕೆಯೊಳಗೆ ಬರದು.
ಬಿತ್ತದೊಳಗೆ ಮಲಗಿರುವ ವೃಕ್ಷದಂತೆ ಅದು,
ಹೂವಿನೆದೆಯ ಮಾರ್ದವದಲಿ ಹರಿವ ಹಾಗೆ ಮಧು.

“ಎಷ್ಟೇ ಮಳೆ ಸುರಿದೂ ಅದು, ಗಾಳಿಯ ಥರ, ನೆನೆಯದು,
ಗಾಳಿ ಎಷ್ಟೆ ಬೀಸಿದರೂ, ಬೆಳಕಿನ ಥರ, ಅಲುಗದು,
ಮತ್ತೆ ಮತ್ತೆ ಮೊಗೆದರೂ ಕುಳಿ ಬೀಳದ ನೀರು,
ಕತ್ತಲ ಪಡೆ ಸೀಳಿ ನಡೆವ ತಂಬೆಳಕಿನ ತೇರು.
ನಮ್ಮ ಸುತ್ತ ಇದ್ದೂ ಅದು ನಮಗೆ ಸಿಗುವುದಲ್ಲ,
ಸಿಕ್ಕವರಿಗೆ ಕೂಡ ಆದನು ತಿಳಿಸಬರುವುದಿಲ್ಲ.

“ಮುಗಿಲ ರೆಕ್ಕೆ ಮಡಚಿ ಕುಂತ ಕಾಲವೆಂಬ ಹಕ್ಕಿ,
ಗ್ರಹ ತಾರಗಳದಕೆ ತಿನ್ನಲೆರಚಿದಂಥ ಅಕ್ಕಿ.
ಮ್ಮೆತುದಿಗಳೆ ಕಾಣದಂಥ ಮಹದಾಕೃತಿ ಅದು,
ಅಣುವಿನೆದುರ ಬೆಟ್ಟದಂತೆ ನಮ್ಮೆದುರಲಿ ಅದು.
ಹೀಗಿದ್ದೂ ಅದು ಸಣ್ಣನೆ ಕಣಕೂ ಕಿರಿದಂತೆ,
ಕೇಳುವ ನಮ್ಮೊಳಗಿನೊಳಗೆ ಅಣುವಾಗಿದೆಯಂತೆ!

“ದೇವರೆನುವುದೆಲ್ಲಕಿಂತ ತುಂಬ ಸರಳ ಮಗೂ.
ಆದರದನು ತಿಳಿದವರು ತುಂಬ ವಿರಳ ಮಗೂ”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನೆ
Next post ಎದ್ದು ಬಾರಯ್ಯ ರಂಗ

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

cheap jordans|wholesale air max|wholesale jordans|wholesale jewelry|wholesale jerseys