Home / ಲೇಖನ / ಸಾಹಿತ್ಯ / ಎಮಿಲಿ ಡಿಕಿನ್ಸಸನ್ ಕವಿತೆಗಳು ಭಾಗ – ೨

ಎಮಿಲಿ ಡಿಕಿನ್ಸಸನ್ ಕವಿತೆಗಳು ಭಾಗ – ೨

ಅದೊಂದು ಸಾವಿನ ಮನೆ. ಜೀವವೊಂದು ಎದುಸಿರು ಬಿಡುತ್ತ ಕೊನೆಯ ಕ್ಷಣದ ಗಣನೆಯಲ್ಲಿದೆ. ಕೊನೆ ಕ್ಷಣದವರೆಗೂ ಬದುಕಿಗಾಗಿ ಆತ್ಮದ ಹೋರಾಟ ನಡೆದಿದೆ ಸಾವಿನ ಕೊನೆಯ ದೃಶ್ಯ ನೋಡಲು ಜನ ಸುತ್ತುವರೆದಿದ್ದಾರೆ. ಅಕ್ಷರಶಃ ಸ್ಥಂಭಿತರಾಗಿದ್ದಾರೆ. ಅಲ್ಲಿ ಹತಾಶೆ ಇದೆ. ಕ್ರಮೇಣ ಆತ್ಮ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಅದೇ ಕ್ಷಣ ನೊಣವೊಂದರ ಗುಂಯ್ಗುಡುವಿಕೆ ಸಾವನ್ನು ಅಂಗೀಕರಿಸಿದ ಆತ್ಮವನ್ನು ಗಲಿಬಿಲಿಗೊಳಿಸಿದೆ. ಮರಣ ಮಾರ್ಗದಲ್ಲಿ ಭಂಗ ಎಂದೆನ್ನಿಸಿದೆ. ಆದರದು ಸಾವಿನ ಮುನ್ನುಡಿ ಎಂದು ಅರಿಯಲಾಗಲಿಲ್ಲ. ಸಾವಿನ ದರ್ಶನಕ್ಕೆ ಆ ಜೀವ ಹಂಬಲಿಸಿತು. ಆದರೆ ಸಾವು ಬಂದಾಗ ಗ್ರಹಿಸಲಾಗಲಿಲ್ಲ. ಇದು ಸಾವಿನ ಚಮತ್ಕಾರ. ಅಗೋಚರ, ಅನಿರೀಕ್ಷಿತ ಆಗಂತುಕನೆಂದರೆ ಸಾವು. “ಐ ಹರ್ಡ್ ಎ ಫ್ಲಾಯ್ ಬಜ್ಜ್ ವ್ಹೆನ್ ಐ ಡೈಡ್” ಕವಿತೆಯಲ್ಲಿ ಸಾವಿನ ನೈಜ ಸಂಭವನೀಯತೆಗಳ ನಡುವೆಯೂ ಜೀವದ ನಿರೀಕ್ಷೆಗಳನ್ನು ಎಮಿಲಿ ವ್ಯಕ್ತಪಡಿಸಿದ್ದು ಹೀಗೆ.

ಸಾವಿನ ಬಾಗಿಲನ್ನು ತನ್ನ ಕವನಗಳ ಮೂಲಕ ತಟ್ಟಿ ತಟ್ಟಿ ಬಡಿದವಳು ಎಮಿಲಿ ಡಿಕಿನ್ಸಸನ್. ಸಾವು ಆಕೆಯನ್ನು ಕಾಡಿದಷ್ಟೂ ಬೇರಾವ ಸಂಗತಿಗಳು ಕಾಡಲಿಲ್ಲ. ಮರಣ ಶಯ್ಯೆಯಲ್ಲಿ ಆತ್ಮ ಹನಿ ಉಸಿರವರೆಗೂ ಬಡಿದಾಡುತ್ತದೆ. ಜೀವಂತವಿರೂವರೆಗೂ ಸಂಧಿಸಲಾಗದ ಸರದಾರ ಅವನು. ಸಂಧಿಸಿದಾಗ ನಾವೇ ಇರುವುದಿಲ್ಲ. ಸಾವು ಹತಾಶೆಯ ಸಂಕೇತ. ಒಂದರ್ಥದಲ್ಲಿ ಎಮಿಲಿಯ ಈ ಕವಿತೆ ಸಾವು ಬದುಕಿನ ಎಲ್ಲ ಒತ್ತಡಗಳಿಂದ ಮುಕ್ತಗೊಳಿಸಿ, ದಿವ್ಯ ಅಮರತ್ವದೆಡೆಗೆ, ಶಾಶ್ವತ ಆನಂದದೆಡೆಗೆ ಕೊಂಡೊಯ್ಯುತ್ತದೆ ಎಂಬ ಸಂಪ್ರದಾಯಸ್ಥ ಕ್ರೈಸ್ಥ ನಂಬಿಕೆಯನ್ನು, ಕಲ್ಪನೆಯನ್ನು ಅಣಕಿಸಿ ನಗುತ್ತವೆ.

ಸಾವನ್ನು ಎರಡು ಭಿನ್ನ ರೂಪಕಗಳಲ್ಲಿ ಹಿಡಿದಿಡುತ್ತಾಳೆ ಎಮಿಲಿ. ಒಂದು- ವಾಸ್ತವಿಕ ಸಂಗತಿಯಾಗಿ, ಬದುಕೇ ಸಾವಾಗಿ. ಇನ್ನೊಂದು- ಕಾಲ್ಪನಿಕ ಅನುಭವವಾಗಿ, ಬದುಕಿನ ಬಗ್ಗೆ ನಿರಾಕರಣದ ಸಂಕೇತವಾಗಿ. ಆಕೆಯ “ಬಿಕಾಜ್ ಐ ಕುಡ್ ನಾಟ್ ಸ್ಟಾಪ್ ಫಾರ್ ಡೆತ್” ಕವಿತೆ ಈ ಎರಡು ಕಲ್ಪನೆಗಳಿಗೆ ಸಾಕಾರವಾಗಿ ನಿಲ್ಲುತ್ತದೆ.

“ದಿ ಸೋಲ್ ಸೆಲೆಕ್ಟ್ಸ್ ಹರ್ ವೋನ್ ಸೋಸಾಯಿಟಿ”ಯಲ್ಲೂ ಎಮಿಲಿ ತಾನೆ ಕವನದ ಪಾತ್ರವಾಗುತ್ತಾಳೆ. ಆಕೆಯ ಜೀವನ ಚಿತ್ರಣ ಹೂರಣಗೊಂಡಿದೆ ಇಲ್ಲಿ. ಆಕೆಗೆ ಬದುಕು ಕೊಟ್ಟಿದ್ದಕ್ಕಿಂತ ಕಿತ್ತುಕೊಂಡಿದ್ದೇ ಹೆಚ್ಚು. ಪ್ರೇಮ ವೈಪಲ್ಯ, ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಳ್ಳಲಾಗದ ವಿಫಲತೆ, ಸಂಪ್ರದಾಯಶೀಲ ಬದುಕಿನತ್ತ ತೋರಿದ ವಿಮುಖತೆಯ ಕಾರಣ ಧಾರ್‍ಮಿಕ ನಂಬಿಕೆಯ ನಾಶ. ಇವೆಲ್ಲವೂ ಆಕೆಯ ಬದುಕಿನಲ್ಲಿ ವಿಷಣ್ಣತೆಯನ್ನು ತೇಪೆ ಹಚ್ಚಿದವು. ಸಾವನ್ನು ಈಕೆ ಬಣ್ಣಿಸಿದಷ್ಟು ಪರಿಣಾಮಕಾರಿಯಾಗಿ ಯಾರಿಂದಲೂ ಬಣ್ಣಿಸಲಾಗದು. ತನ್ನ ಕವನಗಳಲ್ಲಿ ಸಾವಿಗಾಗಿ ಆಕೆ ಬದುಕನ್ನು ತ್ಯಾಗ ಮಾಡುತ್ತಾಳೆ. ವಿಸ್ತೃತ ಕಲ್ಪನೆಗಳು, ಸಾವಿಗೆ ಉಪಮೆಗಳಾಗಿ ರೂಪಕಗಳಾಗಿ ನಿಲ್ಲುತ್ತವೆ. ಸಾವನ್ನು ಆರಾಧಿಸಿದಳು. ಬದುಕನ್ನು ತಿರಸ್ಕರಿಸಿ, ಅದನ್ನು ಗೆದ್ದಳು. ಪ್ರೀತಿಯನ್ನು ತ್ಯಾಗಮಾಡಿ ಪಡೆದಳು. ಕ್ಷುಲಕ ಬಾಹ್ಯ ಜಗತ್ತಿನ ಬಾಗಿಲನ್ನು ಮುಚ್ಚಿ ತನ್ನೊಳಗಿನ ಜಗತ್ತಿಗೆ ತೆರೆದುಕೊಂಡಳು.

“ಮೈ ಲೈಫ್ ಕ್ಲೋಸ್ಡ್ ಟ್ವೈಸ್ ಬಿಫೋರ್ ಇಟ್ಸ್ ಕ್ಲೋಸ್” ಕವಿತೆಯಲ್ಲೂ ಕೂಡ ಬದುಕಿನ ಬಗ್ಗೆ ಗಟ್ಟಿಯಾದ ನಿರಾಕರಣ ಎದ್ದು ಕಾಣುತ್ತದೆ. ತನ್ನ ಹತ್ತಿರದ ಆತ್ಮೀಯರ ಸಾವು, ಅಗಲಿಕೆ ಆಕೆಗೆ ತನ್ನದೇ ಸಾವಾದಂತಾಗಿದೆ.

ಕೊನೆಯವರೆಗೂ ಅವಿವಾಹಿತೆಯಾಗೇ ಉಳಿದ ಏಮಿಲಿ ರಾಲ್ಫ್ ವಾಲ್ಡೋ ಎಮರಸನ್‍ನ ನೈತಿಕತೆಯ ಉತ್ಕೃಷ್ಠ ಪ್ರಜ್ಞೆ, ಸ್ವಾವಲಂಬಿ ಬದುಕು ಸಿದ್ಧಾಂತಗಳಿಂದ ಪ್ರಭಾವಿತಗೊಂಡಿದ್ದಳು. ತನ್ನ ಕವಿತೆಗಳ ಮೂಲಕ ಅಳಿಸಲಾಗದ ಗುರುತನ್ನು ಬಿಟ್ಟುಹೋದ ಎಮಿಲಿ ಅಮೇರಿಕಾದ ಸಾಹಿತ್ಯ ಲೋಕದ ಪ್ರಥಮ ಮಹಿಳಾ ಸಾಹಿತಿ ಎಂಬ ಖ್ಯಾತಿಗೆ ಪಾತ್ರಳು. ಆಕೆಯೊಬ್ಬ ಖಾಸಗಿ ಕವಿ. ತನ್ನೊಳಗಿನ ತುಡಿತ ಮಿಡಿತಗಳ ಅಭಿವ್ಯಕ್ತಿಗೆ ಆಕೆ ಕವನಗಳ ಮೊರೆಹೋದಳು. ಸಾರ್ವಜನಿಕ ಬದುಕಿನ ಯಾವ ಶೋಕಗಳು ಆಕೆಗೆ ತಟ್ಟಲೇ ಇಲ್ಲ. ಹೀಗಾಗೇ ಎಮಿಲಿಯ ಕಾವ್ಯದ ಅಂತಃಸತ್ವ ಎಂದರೆ ಮರಣ ಮತ್ತು ಅಮರತ್ವ. ೧೫ ಮೇ ೧೮೮೬ರಲ್ಲಿ ಎಮಿಲಿಯ ಕೊನೆದಿನ. ಹುಟ್ಟಿದ ಅದೇ ಆಮ್ಹರ್‍‍ಸ್ಟ್ ನಗರದಲ್ಲಿ ತೀರಿಕೊಂಡಳು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...