ಗೂಂಕುರು ಕಪ್ಪೆ

ಎಲ್ಲ ಕಪ್ಪೆಗಳಂತಲ್ಲ
ನಮ್ಮ ಗೂಂಕುರು ಕಪ್ಪೆ
ಇನ್ನುಳಿದ ಕಪ್ಪೆಗಳೆಲ್ಲ
ಇದುರೆದುರು ಬರಿಯ ಸಪ್ಪೆ

ಹೆಬ್ಬಂಡೆಯಂತೆ ಹೇಗೆ
ಕುಳಿತು ಬಿಟ್ಟಿದೆ ನೋಡಿ ಹೀಗೆ
ನಾವು ನಡೆವ ದಾರಿಗಡ್ಡ
ಎಲ್ಲಿಂದ ಬಂತೊ ಈ ಗುಡ್ಡ!

ಮೇಲೆಲ್ಲ ಕಣಿವೆ ಕೊಳ್ಳ
ಅಲ್ಲಿಲ್ಲಿ ಕೆಲವು ಹಳ್ಳ
ಮೂಡಿದರೆ ಕಾಮನಬಿಲ್ಲು
ಪ್ರತಿಫಲಿಸುವುದು ಇರದ ಮೈಯಲ್ಲು?

ಕಣ್ಣುಗಳು ಒಂದೊಂದು ಹವಳ
ಅದರೊಳಗೆ ಬೆಳಕುಗಳು ಬಹಳ
ಎವೆಯಿಕ್ಕದಂಥ ಬಿಡುನೊಟ
ಇಕ್ಕಿದರೆ ಭೂತಗಳ ಕಾಟ

ಯಾವ ದೊರೆ ಮಗನಯ್ಯ ನೀನು?
ದೊರಕೊಂಡ ಶಾಪವಾದರು ಏನು?
ಅಡ್ಡಹಾಯ್ದರೆ ಎಂಥ ಚೆಲುವೆ
ನಿಜ ರೂಪಕೆ ನೀನು ಬರುವೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವಾಮಿ ವಿವೇಕಾನಂದರು ಹಿಂದೂವೆ !?!
Next post ಪ್ರಾಣ ತಿನ್ನುತ್ತಾನೆ

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

cheap jordans|wholesale air max|wholesale jordans|wholesale jewelry|wholesale jerseys