ಬೇಂಡಿನವರು

ಬರುತಾರೆಂದರೆ ಬೇಂಡಿನವರು
ಎಲ್ಲರೆದೆಯು ಢುಂ ಢುಂ
ಮದುವೆಯಾದರು ಮುಂಜಿಯಾದರು
ಬಾರಿಸುವರು ಢಂ ಢಂ

ಜರಿ ರುಮಾಲು ತಲೆಯ ಮೇಲೆ
ಗರಿ ಗರಿಯ ತುರಾಯಿ
ನೋಡುತಾರೆ ನೋಡುವವರು
ಬಿಟ್ಟು ಬಾಯಿ ಬಾಯಿ

ಜಗ ಜಗಿಸುವ ಕೆಂಪು ಕೋಟು
ಹಿತ್ತಾಳಿಯ ಗುಂಡಿ
ಮಹಾರಾಜರಂಥದರ
ಇನ್ನೆಲ್ಲಿ ಕಂಡಿ

ಮಂಡಿ ಹರಿದ ಪ್ಯಾಂಟು ನಿಜ
ಕಾಲಿಗಿಲ್ಲ ಚಪ್ಪಲಿ
ಆದರೇನು ಸದ್ದಿನ ಮಜ
ಯಾರು ಬಿಡಲಿ ಒಪ್ಪಲಿ

ಬಂದು ಮನೆಗೆ ಬಂದು ಬೀದಿಗೆ
ಬೆಳಗಿನಿಂದಲು ಹೀಗೆ
ಊದುತಾರೆ ಹೊಡೆಯುತಾರೆ
ಆಕಾಶವೆ ಹರಿದ ಹಾಗೆ!

ಬರುತಾರೆಂದರೆ ಬೇಂಡಿನವರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಯಮಾಲಿ ಅಥವಾ ಮುತ್ತಿನ ಬೆಂಡವಾಲಿ
Next post ೧೧ ವಸಂತಗಳು

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಮೇಷ್ಟ್ರು ವೆಂಕಟಸುಬ್ಬಯ್ಯ

    ಪ್ರಕರಣ ೧೨ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು.… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…