ಅಧಿಪತಿಯು ನೀನೇ

ಅಧಿಪತಿಯು ನೀನೇ ಅಂತಿಜನಾಭನೇ
ಎನ್ನಾಧಿಪತಿಯು ನೀನೇ|
ನೀ ಕೈಯ ಬಿಟ್ಟರೆ ಅಧಃಪತನು ನಾನೇ
ಅಕಳಂಕ ಚರಿತನೆ ಕೈಬಿಡದೆನ್ನನು
ಕಾಪಾಡೊ ಹರಿಯೇ||

ನನ್ನ ಇತಿಯು ನೀನೇ ಮತಿಯು ನೀನೇ
ಗತಿ ಕಾಣಿಸುವ ಸ್ಮೃತಿಯು ನೀನೇನೇ|
ನನ್ನ ಪಾಪಪುಣ್ಯದ ಫಲಾನುಫಲ ನೀನೇ
ನನ್ನ ಜನ್ಮ ಜನ್ಮಾಂತರದ ಗುರುದೈವ ನೀನೇ||

ಆಡಿಸುವವನು ನೀನೇ ಅಳಿಸುವವನೂ ನೀನೇ
ಆದಿನಾರಾಯಣನೆ ಅನಂತನಾಭನೇ
ಮಂಗಳಕರನೆ ಸುಮಂಗಳಕಾರಣನೇ|
ಪಾಲಿಸೊ ಎನ್ನ ಓ ಪಾರ್ಥಪ್ರೀಯನೇ
ವಸುದೇವಸುತನೆ ದೇವಕಿಕಂದನೇ|
ಶಿಲೆಗಳಿಗೊಲಿದವನೆ ಸರಸಿಜಾಕ್ಷನೇ
ಈ ನರನಿಗೊಲಿಯೋ ಪದುಮನಾಭನೇ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿದ್ರೆ… ನಿದ್ರೆ… ನಿದ್ರೆ…
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೩

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys