ಉದಯಿಸು ರವಿತೇಜನೇ ನೀನು

ಉದಯಿಸು ರವಿತೇಜನೇ ನೀನು
ಹೊಂಗಿರಣವ ಹೊರ ಸೂಸುತ|
ನಿನ್ನ ಸ್ವಾಗತಿಸೆ ಕಾದಿಹಳು ಇಬ್ಬನಿ
ತಬ್ಬಿಕೊಂಡು ಬಾಹುಬಂಧನದಿ
ಕರಗಿ ನೀರಾಗಲು
ಹುಲ್ಲ ಹಾಸಿಗೆಮೇಲೆ ಮಲಗಿ||

ಉದಯಿಸು ರವಿತೇಜನೇ ನೀನು
ಹಕ್ಕಿಗಳ ಇಂಚರವನಾಲಿಸುತ|
ಉದಯಿಸು ರವಿತೇಜನೇ ನೀನು
ಝುಳು ಝುಳು ಹರಿವ ನದಿಯ
ನಿನಾದವನು ಕೇಳುತ||

ಉದಯಿಸು ರವಿತೇಜನೇ ನೀನು
ಕರ್ಮವೀರ ನೇಗಿಲಯೋಗಿಯ
ಪ್ರಣಾಮವನು ಸ್ವೀಕರಿಸುತ|
ಉದಯಿಸು ರವಿತೇಜನೇ ನೀನು
ಹಸುವು ಕರುವಿಗೆ ಪ್ರೀತಿಯಿಂದ
ಹಾಲುಣಿಸುವುದನು ನೋಡುತ||

ಉದಯಿಸು ರವಿತೇಜನೇ ನೀನು
ಗುಡಿಯ ಘಂಟಾನಾದವ ಸೇವಿಸುತ|
ಉದಯಿಸು ರವಿತೇಜನೇ ನೀನು
ದೇಗುಲದ ಕಳಸ ಗೋಪುರ ಬೆಳಗಿಸುತ|
ಉದಯಿಸು ರವಿತೇಜನೇ ನೀನು
ಮಂಗಳಕರ ಸುಪ್ರಭಾತವನಾಲಿಸುತ
ಉದಯಿಸು ಸೂರ್ಯಪ್ರಕಾಶನೇ ನೀನು
ಕೋಟ್ಯಾನುಕೋಟಿ ಜೀವರಾಶಿಯ
ಜೀವನವ ಹೊನ್ನ ಕಿರಣದಿ ಬೆಳಗಲು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂಗವಿಕಲರಿಗೆ ದಾರಿದೀಪ : ಅಂಗ ಸಾಧನ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೬

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys