ಉದಯಿಸು ರವಿತೇಜನೇ ನೀನು

ಉದಯಿಸು ರವಿತೇಜನೇ ನೀನು
ಹೊಂಗಿರಣವ ಹೊರ ಸೂಸುತ|
ನಿನ್ನ ಸ್ವಾಗತಿಸೆ ಕಾದಿಹಳು ಇಬ್ಬನಿ
ತಬ್ಬಿಕೊಂಡು ಬಾಹುಬಂಧನದಿ
ಕರಗಿ ನೀರಾಗಲು
ಹುಲ್ಲ ಹಾಸಿಗೆಮೇಲೆ ಮಲಗಿ||

ಉದಯಿಸು ರವಿತೇಜನೇ ನೀನು
ಹಕ್ಕಿಗಳ ಇಂಚರವನಾಲಿಸುತ|
ಉದಯಿಸು ರವಿತೇಜನೇ ನೀನು
ಝುಳು ಝುಳು ಹರಿವ ನದಿಯ
ನಿನಾದವನು ಕೇಳುತ||

ಉದಯಿಸು ರವಿತೇಜನೇ ನೀನು
ಕರ್ಮವೀರ ನೇಗಿಲಯೋಗಿಯ
ಪ್ರಣಾಮವನು ಸ್ವೀಕರಿಸುತ|
ಉದಯಿಸು ರವಿತೇಜನೇ ನೀನು
ಹಸುವು ಕರುವಿಗೆ ಪ್ರೀತಿಯಿಂದ
ಹಾಲುಣಿಸುವುದನು ನೋಡುತ||

ಉದಯಿಸು ರವಿತೇಜನೇ ನೀನು
ಗುಡಿಯ ಘಂಟಾನಾದವ ಸೇವಿಸುತ|
ಉದಯಿಸು ರವಿತೇಜನೇ ನೀನು
ದೇಗುಲದ ಕಳಸ ಗೋಪುರ ಬೆಳಗಿಸುತ|
ಉದಯಿಸು ರವಿತೇಜನೇ ನೀನು
ಮಂಗಳಕರ ಸುಪ್ರಭಾತವನಾಲಿಸುತ
ಉದಯಿಸು ಸೂರ್ಯಪ್ರಕಾಶನೇ ನೀನು
ಕೋಟ್ಯಾನುಕೋಟಿ ಜೀವರಾಶಿಯ
ಜೀವನವ ಹೊನ್ನ ಕಿರಣದಿ ಬೆಳಗಲು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂಗವಿಕಲರಿಗೆ ದಾರಿದೀಪ : ಅಂಗ ಸಾಧನ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೬

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…