Home / ಕವನ / ಕವಿತೆ / ಶೂನ್ಯದ ಮೋಹ

ಶೂನ್ಯದ ಮೋಹ

ಅದೆಷ್ಟೋ ಸಣ್ಣ ದೊಡ್ಡ ಚಿತ್ರ ವಿಚಿತ್ರ
ಆಕಾರದ ಸಂಖ್ಯೆಗಳು ಮುಖಬಲೆಗಳು,
ಸ್ಥಾನಬೆಲೆಗಳು ಗೋಜಲಿನ ಗೂಡನ್ನು
ಕಂಡಾಗಲೆಲ್ಲಾ ವತರ್‍ತುಲಾಕಾರದ ಭೂಮಿತೂಕದ
ಶೂನ್ಯಕ್ಕೆ ಶರಣಾಗುತ್ತದೆ ಮನ.

ಅಸ್ಮಿತೆಯ ಹಂಗೇ ಇಲ್ಲದೇ
ಮನೆಯಂಗಳದ ಮೂಲೆಯಲ್ಲಿ
ಅಡಿಕೆ ಸಿಪ್ಪೆ ಸುಲಿಸುಲಿದು
ಒಟ್ಟುಮಾಡುವ ಪಾರೋತಿ,
ನೆನಪಾಗುತ್ತ ನೆಲದ ಚಿಗುರೇ
ಅವಳಾದಂತೆ ಕನಸು
ಅಪ್ಪಟ ಮುಖವನ್ನೊಮ್ಮೆ ಮುದ್ದಿಸಬಯಸುತ್ತದೆ ಮನ.

ತ್ರಿಕರಣ ಶುದ್ಧತೆ ಪದ ಕೇಳದೆಯೂ
ಅದರ ತಾದ್ಯಾತ್ಮಸ್ವರೂಪಿಯೇ
ಆದ ಮಾದ
ತೆಂಗಿನಕಾಯಿ ಸಿಪ್ಪೆ ಸುಲಿಸುಲಿದು
ತೆಗೆಯುತ್ತಾ ಆಗಾಗ ಹೂಂಕರಿಸುತ್ತಾ
ಕತ್ತಿಯ ಸಿದ್ಧಿಯಲ್ಲಿ ತನ್ಮಯನಾಗುತ್ತಿದ್ದುದು
ನೆನಪಾಗುತ್ತ
ಅವನೆಂದರೆ ಬೆಳಕಿನ ಪುಂಜ ಎನ್ನಿಸುತ್ತದೆ.
ಆ ಕತ್ತಿಯ ಸಿದ್ಧಿಯ ಕರಗತಕ್ಕೆಳೆಸುತ್ತದೆ ಮನ

ಕೊಡಲೇನೂ ಇಲ್ಲ,
ಕಣ್ಣ ಮಧುರ ಮೈತ್ರಿಯ ಕಂಪು ಬಿಟ್ಟು
ಇಲ್ಲದ ಕಡೆಗಳಲ್ಲಿ ಅರಳುವ ಹೃದಯದ ಪರಿಮಳ
ಚಕ್ಷುವಿನ ಕಾಂತಿಗೆ ಬೆರಗಾಗುತ್ತದೆ ಮನ.

ತಳತಳಿಸುವ ಬೂಟು ಶೂಗಳ
ತೊಟ್ಟ ಪಾರಿನ್ ರಿಟರ್ನ್‍ಡ್ಗಳ
ವಿಚಿತ್ರ ಅಕ್ಸೆಂಟ್ಗಳ ಭಯಂಕರ ಹಾವಭಾವದ
ಮೈಕುಣಿತದ ಭಾಷೆಗಳ ನೋಡುತ್ತಾ
ಸುಖಾತೀಸುಖದ ಸಂಭ್ರಮ ಹೊತ್ತ
ಮುಖಗಳ ಒಳಮುಖದ ಅಡಿಯಲ್ಲಿ
ಮೂಡುವ ಜಂಬದ ಬೀಜ
ಬೃಹದಾಕಾರವಾಗುತ್ತ
ಸಹನೆಯ ಕಟ್ಟೆ
ಒಡೆದುಹೋದ ಆಣೆಕಟ್ಟಾಗುತ್ತದೆ.

ಅವರವರ ಭಂಗಿಯ
ಭಂಗಿತನಕ್ಕೆ ಕೆರಳುತ್ತಲೇ
ಅಪ್ಪಟ ದೇಸಿ, ದೈನೇಸಿಗಾಗಿ ಹಂಬಲಿಸುತ್ತದೆ ಮನ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...