Home / ಕವನ / ಕವಿತೆ / ಶೂನ್ಯದ ಮೋಹ

ಶೂನ್ಯದ ಮೋಹ

ಅದೆಷ್ಟೋ ಸಣ್ಣ ದೊಡ್ಡ ಚಿತ್ರ ವಿಚಿತ್ರ
ಆಕಾರದ ಸಂಖ್ಯೆಗಳು ಮುಖಬಲೆಗಳು,
ಸ್ಥಾನಬೆಲೆಗಳು ಗೋಜಲಿನ ಗೂಡನ್ನು
ಕಂಡಾಗಲೆಲ್ಲಾ ವತರ್‍ತುಲಾಕಾರದ ಭೂಮಿತೂಕದ
ಶೂನ್ಯಕ್ಕೆ ಶರಣಾಗುತ್ತದೆ ಮನ.

ಅಸ್ಮಿತೆಯ ಹಂಗೇ ಇಲ್ಲದೇ
ಮನೆಯಂಗಳದ ಮೂಲೆಯಲ್ಲಿ
ಅಡಿಕೆ ಸಿಪ್ಪೆ ಸುಲಿಸುಲಿದು
ಒಟ್ಟುಮಾಡುವ ಪಾರೋತಿ,
ನೆನಪಾಗುತ್ತ ನೆಲದ ಚಿಗುರೇ
ಅವಳಾದಂತೆ ಕನಸು
ಅಪ್ಪಟ ಮುಖವನ್ನೊಮ್ಮೆ ಮುದ್ದಿಸಬಯಸುತ್ತದೆ ಮನ.

ತ್ರಿಕರಣ ಶುದ್ಧತೆ ಪದ ಕೇಳದೆಯೂ
ಅದರ ತಾದ್ಯಾತ್ಮಸ್ವರೂಪಿಯೇ
ಆದ ಮಾದ
ತೆಂಗಿನಕಾಯಿ ಸಿಪ್ಪೆ ಸುಲಿಸುಲಿದು
ತೆಗೆಯುತ್ತಾ ಆಗಾಗ ಹೂಂಕರಿಸುತ್ತಾ
ಕತ್ತಿಯ ಸಿದ್ಧಿಯಲ್ಲಿ ತನ್ಮಯನಾಗುತ್ತಿದ್ದುದು
ನೆನಪಾಗುತ್ತ
ಅವನೆಂದರೆ ಬೆಳಕಿನ ಪುಂಜ ಎನ್ನಿಸುತ್ತದೆ.
ಆ ಕತ್ತಿಯ ಸಿದ್ಧಿಯ ಕರಗತಕ್ಕೆಳೆಸುತ್ತದೆ ಮನ

ಕೊಡಲೇನೂ ಇಲ್ಲ,
ಕಣ್ಣ ಮಧುರ ಮೈತ್ರಿಯ ಕಂಪು ಬಿಟ್ಟು
ಇಲ್ಲದ ಕಡೆಗಳಲ್ಲಿ ಅರಳುವ ಹೃದಯದ ಪರಿಮಳ
ಚಕ್ಷುವಿನ ಕಾಂತಿಗೆ ಬೆರಗಾಗುತ್ತದೆ ಮನ.

ತಳತಳಿಸುವ ಬೂಟು ಶೂಗಳ
ತೊಟ್ಟ ಪಾರಿನ್ ರಿಟರ್ನ್‍ಡ್ಗಳ
ವಿಚಿತ್ರ ಅಕ್ಸೆಂಟ್ಗಳ ಭಯಂಕರ ಹಾವಭಾವದ
ಮೈಕುಣಿತದ ಭಾಷೆಗಳ ನೋಡುತ್ತಾ
ಸುಖಾತೀಸುಖದ ಸಂಭ್ರಮ ಹೊತ್ತ
ಮುಖಗಳ ಒಳಮುಖದ ಅಡಿಯಲ್ಲಿ
ಮೂಡುವ ಜಂಬದ ಬೀಜ
ಬೃಹದಾಕಾರವಾಗುತ್ತ
ಸಹನೆಯ ಕಟ್ಟೆ
ಒಡೆದುಹೋದ ಆಣೆಕಟ್ಟಾಗುತ್ತದೆ.

ಅವರವರ ಭಂಗಿಯ
ಭಂಗಿತನಕ್ಕೆ ಕೆರಳುತ್ತಲೇ
ಅಪ್ಪಟ ದೇಸಿ, ದೈನೇಸಿಗಾಗಿ ಹಂಬಲಿಸುತ್ತದೆ ಮನ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...