Home / ಕವನ / ಕವಿತೆ / ಹೀಗೆ ನೀನು ನನ್ನ ಬಿಟ್ಟು ಹೋಗಬೇಡ

ಹೀಗೆ ನೀನು ನನ್ನ ಬಿಟ್ಟು ಹೋಗಬೇಡ

ಹೀಗೆ ನೀನು ನನ್ನ ಬಿಟ್ಟು ಹೋಗಬೇಡ.
ಹೋಗಲ್ಲ ಅನ್ನು, Please, ಹೋಗೋದಿಲ್ಲ ಅನ್ನು.
ನಿನ್ನ ಮೃದುವಾದ ರೆಕ್ಕೆಗೆ ಬಿಸಿಲು ತಗುಲದ ಹಾಗೆ,
ನಿನ್ನ ಕಣ್ಣಿಗೆ ಗಾಳಿಯಿಂದ ಧೂಳು ಬೀಳದ ಹಾಗೆ,
ನಿನಗೆ ರಾತ್ರಿ ಹೊತ್ತು ಚಳಿ ಆಗದ ಹಾಗೆ,
ಯಾವುದೂ ಭಯ ಆಗದ ಹಾಗೆ
ನಾನು ನಿನ್ನ ಸುತ್ತಲೂ ಕೋಟೆಯಾಗಿ ನಿಂತು
ನಿನ್ನನ್ನು ಕಾಪಾಡಿಕೊಂಡಿದ್ದೇನೆ.

ನೀನು ಹೋದರೆ ನಿನ್ನನ್ನು ಬೇಟೆ ಆಡಿ
ಬೇಯಿಸಿ ತಿಂದು ಬಿಡುತ್ತಾರೆ. ಪ್ರಪಂಚ ಕೆಟ್ಟದ್ದು,
ನಾನು ನಿನಗೆ ಸಿಗುವ ಮುಂಚೆ ನೀನು ಹೇಗಿದ್ದೆ,
ಜ್ಞಾಪಿಸಿಕೋ. ನಿನಗೆ ಇನ್ನೇನು ಬೇಕು ಹೇಳು-
ನಾನು ನಿನ್ನದೇ ಕನಸು ಕಾಣುತ್ತೇನೆ
ನಿನ್ನನ್ನು ಉಸಿರಾಡುತ್ತೇನೆ
ನಿನ್ನನ್ನು ಪ್ರೀತಿಸುತ್ತೇನೆ
ನೀನು ಇಲ್ಲೇ ಇರಬೇಕು.

ನಿನಗೋಸ್ಕರ ನಾನು ನನ್ನನ್ನೂ ಲೆಕ್ಕಿಸದೆ, ನನ್ನನ್ನೂ
ಲೆಕ್ಕಿಸದ ಹಾಗೆ ತ್ಯಾಗ ಮಾಡಿದ್ದೇನೆ, ತ್ಯಾಗ-ಗೊತ್ತಾ ?
ನಿನ್ನ ಕಾಡಿನ ಬೋಳುಮರಕ್ಕಿಂತ ಈ ಅರಮನೆ ದೊಡ್ಡದಲ್ಲವಾ ?
ನೀನು-ಹೋಗಲ್ಲ ನಿಮ್ಮನ್ನು ಬಿಟ್ಟು ಹೋಗೋದೇ ಇಲ್ಲ
ಅಂತಲೇ ಅನ್ನಬೇಕು ತಿಳಿಯಿತಾ ?

ಅದು ನನ್ನ ಹತ್ತಿರವೇ ಇರಲಿ ಅಂತ ನಾನು
ತೆಳ್ಳನೆದಾರ,
ತೆಳ್ಳನೆ ಕೆಂಪು ಸಿಲ್ಕಿನ ದಾರದಲ್ಲಿ
ಅದರ ಕಾಲು ಕಟ್ಟಬಾರದಾಗಿತ್ತಾ ?
ನಾನು ಹಗಲೂ ಸಂಜೆ ನನ್ನ ಕೈಯಿಂದಲೇ ಕೊಟ್ಟ ಕಾಳು
ಅದಕ್ಕೆ ಬೇಡ ಅನ್ನಿಸಿತಾ ; ಈ ಅರಮನೆಗಿಂತ
ಇನ್ನು, ಯಾವ ಸುಖಬೇಕಾಗಿತ್ತು ಅದಕ್ಕೆ ? ಆ ಪಾರಿವಾಳ
ದಿನಾ ದಿನಾ ಜಾಸ್ತಿ ಅಳುತ್ತಿದ್ದದ್ದು ಯಾಕೆ?
ಅದು ಸತ್ತು ಹೋಗಿದ್ದು ಯಾಕೆ ಅಂತ ಯಾರಿಗಾದರೂ ಗೊತ್ತಾ? ಗೊತ್ತಾ?

ಅದು ನನ್ನ ಬಿಟ್ಟು ಹೋಗುತ್ತಲ್ಲಾ ಅಂತ
ಸಹಿಸುವುದಕ್ಕೆ ಆಗದೆ, ಪ್ರೀತಿಯಿಂದ,
ತುಂಬಾ ಪ್ರೀತಿಯಿಂದ ನಾನೇ ಕೊಂದು ಹಾಕಿದೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...