Home / ಕವನ / ಕವಿತೆ / ಹೀಗೆ ನೀನು ನನ್ನ ಬಿಟ್ಟು ಹೋಗಬೇಡ

ಹೀಗೆ ನೀನು ನನ್ನ ಬಿಟ್ಟು ಹೋಗಬೇಡ

ಹೀಗೆ ನೀನು ನನ್ನ ಬಿಟ್ಟು ಹೋಗಬೇಡ.
ಹೋಗಲ್ಲ ಅನ್ನು, Please, ಹೋಗೋದಿಲ್ಲ ಅನ್ನು.
ನಿನ್ನ ಮೃದುವಾದ ರೆಕ್ಕೆಗೆ ಬಿಸಿಲು ತಗುಲದ ಹಾಗೆ,
ನಿನ್ನ ಕಣ್ಣಿಗೆ ಗಾಳಿಯಿಂದ ಧೂಳು ಬೀಳದ ಹಾಗೆ,
ನಿನಗೆ ರಾತ್ರಿ ಹೊತ್ತು ಚಳಿ ಆಗದ ಹಾಗೆ,
ಯಾವುದೂ ಭಯ ಆಗದ ಹಾಗೆ
ನಾನು ನಿನ್ನ ಸುತ್ತಲೂ ಕೋಟೆಯಾಗಿ ನಿಂತು
ನಿನ್ನನ್ನು ಕಾಪಾಡಿಕೊಂಡಿದ್ದೇನೆ.

ನೀನು ಹೋದರೆ ನಿನ್ನನ್ನು ಬೇಟೆ ಆಡಿ
ಬೇಯಿಸಿ ತಿಂದು ಬಿಡುತ್ತಾರೆ. ಪ್ರಪಂಚ ಕೆಟ್ಟದ್ದು,
ನಾನು ನಿನಗೆ ಸಿಗುವ ಮುಂಚೆ ನೀನು ಹೇಗಿದ್ದೆ,
ಜ್ಞಾಪಿಸಿಕೋ. ನಿನಗೆ ಇನ್ನೇನು ಬೇಕು ಹೇಳು-
ನಾನು ನಿನ್ನದೇ ಕನಸು ಕಾಣುತ್ತೇನೆ
ನಿನ್ನನ್ನು ಉಸಿರಾಡುತ್ತೇನೆ
ನಿನ್ನನ್ನು ಪ್ರೀತಿಸುತ್ತೇನೆ
ನೀನು ಇಲ್ಲೇ ಇರಬೇಕು.

ನಿನಗೋಸ್ಕರ ನಾನು ನನ್ನನ್ನೂ ಲೆಕ್ಕಿಸದೆ, ನನ್ನನ್ನೂ
ಲೆಕ್ಕಿಸದ ಹಾಗೆ ತ್ಯಾಗ ಮಾಡಿದ್ದೇನೆ, ತ್ಯಾಗ-ಗೊತ್ತಾ ?
ನಿನ್ನ ಕಾಡಿನ ಬೋಳುಮರಕ್ಕಿಂತ ಈ ಅರಮನೆ ದೊಡ್ಡದಲ್ಲವಾ ?
ನೀನು-ಹೋಗಲ್ಲ ನಿಮ್ಮನ್ನು ಬಿಟ್ಟು ಹೋಗೋದೇ ಇಲ್ಲ
ಅಂತಲೇ ಅನ್ನಬೇಕು ತಿಳಿಯಿತಾ ?

ಅದು ನನ್ನ ಹತ್ತಿರವೇ ಇರಲಿ ಅಂತ ನಾನು
ತೆಳ್ಳನೆದಾರ,
ತೆಳ್ಳನೆ ಕೆಂಪು ಸಿಲ್ಕಿನ ದಾರದಲ್ಲಿ
ಅದರ ಕಾಲು ಕಟ್ಟಬಾರದಾಗಿತ್ತಾ ?
ನಾನು ಹಗಲೂ ಸಂಜೆ ನನ್ನ ಕೈಯಿಂದಲೇ ಕೊಟ್ಟ ಕಾಳು
ಅದಕ್ಕೆ ಬೇಡ ಅನ್ನಿಸಿತಾ ; ಈ ಅರಮನೆಗಿಂತ
ಇನ್ನು, ಯಾವ ಸುಖಬೇಕಾಗಿತ್ತು ಅದಕ್ಕೆ ? ಆ ಪಾರಿವಾಳ
ದಿನಾ ದಿನಾ ಜಾಸ್ತಿ ಅಳುತ್ತಿದ್ದದ್ದು ಯಾಕೆ?
ಅದು ಸತ್ತು ಹೋಗಿದ್ದು ಯಾಕೆ ಅಂತ ಯಾರಿಗಾದರೂ ಗೊತ್ತಾ? ಗೊತ್ತಾ?

ಅದು ನನ್ನ ಬಿಟ್ಟು ಹೋಗುತ್ತಲ್ಲಾ ಅಂತ
ಸಹಿಸುವುದಕ್ಕೆ ಆಗದೆ, ಪ್ರೀತಿಯಿಂದ,
ತುಂಬಾ ಪ್ರೀತಿಯಿಂದ ನಾನೇ ಕೊಂದು ಹಾಕಿದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...