ಗುರುತಿಸಬೇಕೋ ಪಕ್ಷಿಜಾತಿ

ಗುರುತಿಸಬೇಕೋ ಪಕ್ಷಿಜಾತಿ ಬಲ್ಲವರು ನೀವು
ಗುರುತು ಹೇಳೋ ಪಕ್ಷಿಜಾತಿ ಗುರುವಿನ ಜ್ಞಾನಮಾಡುತಿದೆ     |ಪ|

ಅಡವೀಪಲ್ಲೆ ಮಡಿಯ ನೀರು
ಒಡಲ ಒಳಗ ಸಲ್ಲಿಸಿಕೊಂಡು
ಅಡವಿ ತಿರುಗುವವರ ಕೂಡ
ದುಡುಕಿನಿಂದ ಹೋಗುವದು                                 |೧|

ಒಂದು ಕಣ್ಣು ಒಂದು ನಾಲಿಗೆ ಬಾಯಿ ಎರಡು
ಅದರ ದೇಹ ಮೂರು ಕಲ್ಲು ತಿಂಬುವದು
ಮೋಡ ಮುಸುಕು ಗುಡುಗು ಸೇರಿ
ಛಾಯ ಮಿ೦ಚು ಗಗನಕಡರಿ
ಸಾಯಲಾರದ ಹೆಣವ ತಂದು
ಗಾಯ ಮಾಡಿ ಪೋಗುವದು                                  |೨|

ಪಕ್ಕವಿಲ್ಲದೆ ಅಂತರಾಡ್ವದು
ಇದು ಎಂಥಾದು ನೋಡೋ
ಊರ ಅಗಸಿಯೊಳಗ ಇರುವದು
ತಾನು ಹಡೆದ ಮಕ್ಕಳ ಕರೆದು
ಮುಂದಕ್ಕೋಡುವುದು ಗುರುವು ತಾನೇ ಬಲ್ಲ                 |೩|
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏಪ್ರಿಲ್ ತಿಂಗಳ ಮೂರು ರಾತ್ರೆಗಳು
Next post ಅಧಿಕಾರ ಕೈನಲ್ಲಿದ್ದಿದ್ದರೆ ರಾಮಮಂದಿರ ಎಂದೋ ಕಟ್ಟುತ್ತಿದ್ದೆ

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…