ಕಣ್ಣು

ಕತ್ತಲು ಆವರಿಸಿದ ಕೋಣೆಯಲಿ
ಕಪ್ಪನೆ ಕಣ್ಣಗೊಂಬೆಯ ಕರಿನೆರಳ
ತುಂಬ ಅರಗಿಸಿಕೊಳ್ಳದ ನಿನ್ನ ಮುಖ
ಅಂಚಿನಲಿ ಬಸಿತು ಬೀಳಲು
ಕಾತರಿಸಿ ದಿಗಿಲುಗೊಂಡ ಸಣ್ಣಹನಿ.

ಕಾಳರಾತ್ರಿಯಲ್ಲು ಪ್ರೀತಿ ಬೆಳಕು ಚೆಲ್ಲದ
ಪ್ರಣತಿ ಬಾಚಿ ತಬ್ಬುವ ಅಲೆಗಳ ನೆನಪು
ಒಳಗೊಳಗೆ ತೊಳಲಾಡುವ ಮಿಡಿತ
ಕರಗಿ ಹನಿ ಹನಿಯಾಗಿ ಇಳಿದು ತಬ್ಬಿದ
ಬಿಳಿ ಮೊಂಬತ್ತಿ, ಹಾಡು ಹೇಳುವ ಸಂತ ಕವಿ.

ಬಾಹು ಬಂಧನಕೆ ಸಿಲುಕದ ನೀಲಿ ಆಕಾಶ
ಕನವರಿಸುವ ರಾತ್ರಿಯಲ್ಲಿ ಚೆಲ್ಲವೆ ಚಿಕ್ಕಿಗಳ
ತಲೆತುಂಬ ರಾಶಿರಾಶಿ, ಅಲ್ಲಿ ನಿನ್ನ ಕಣ್ಣೋಟ
ಬೆಳದಿಂಗಳು ಪಸರಿಸಿ ತಣ್ಣನೆಯ ಅನುಭವ
ಬೀಸಿದ ಗಾಳಿಗೆ ಕಣ್ಣ ರೆಪ್ಪೆ ದಪ್ಪ, ಎದೆ ಪದಗಳ ಕಾವ್ಯ.

ಗುಂಗು ಹಿಡಿದ ಪ್ರೇಮದ ದಾರಿ ಮರಳು
ಅಲೆಗಳಲಿ ಅಪ್ಪಳಿಸಿ ಹಾಯಿ ಹರಸಿದ ದೋಣಿ
ಕಣ್ಣತೆರೆಗೆ ಬಯಲ ಕೆರೆ ಕೊಳಲೂದಿದ ಕೃಷ್ಣ
ಸಾವಿರ ದಿನವೂ ಮೀಯಲಿ ಮನವು ನಿನ್ನೊಳಗೆ
ಗೋಪಿಯರು ಹಾಡಲಿ, ಕಣ್ಣಲ್ಲಿ ಇಳಿಯಲಿ ಪ್ರೇಮದಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಬ್ದ ಶಕ್ತಿಯಿಂದ ಯಂತ್ರ ಚಾಲನೆ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೫೦

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

cheap jordans|wholesale air max|wholesale jordans|wholesale jewelry|wholesale jerseys