ಕಣ್ಣು

ಕತ್ತಲು ಆವರಿಸಿದ ಕೋಣೆಯಲಿ
ಕಪ್ಪನೆ ಕಣ್ಣಗೊಂಬೆಯ ಕರಿನೆರಳ
ತುಂಬ ಅರಗಿಸಿಕೊಳ್ಳದ ನಿನ್ನ ಮುಖ
ಅಂಚಿನಲಿ ಬಸಿತು ಬೀಳಲು
ಕಾತರಿಸಿ ದಿಗಿಲುಗೊಂಡ ಸಣ್ಣಹನಿ.

ಕಾಳರಾತ್ರಿಯಲ್ಲು ಪ್ರೀತಿ ಬೆಳಕು ಚೆಲ್ಲದ
ಪ್ರಣತಿ ಬಾಚಿ ತಬ್ಬುವ ಅಲೆಗಳ ನೆನಪು
ಒಳಗೊಳಗೆ ತೊಳಲಾಡುವ ಮಿಡಿತ
ಕರಗಿ ಹನಿ ಹನಿಯಾಗಿ ಇಳಿದು ತಬ್ಬಿದ
ಬಿಳಿ ಮೊಂಬತ್ತಿ, ಹಾಡು ಹೇಳುವ ಸಂತ ಕವಿ.

ಬಾಹು ಬಂಧನಕೆ ಸಿಲುಕದ ನೀಲಿ ಆಕಾಶ
ಕನವರಿಸುವ ರಾತ್ರಿಯಲ್ಲಿ ಚೆಲ್ಲವೆ ಚಿಕ್ಕಿಗಳ
ತಲೆತುಂಬ ರಾಶಿರಾಶಿ, ಅಲ್ಲಿ ನಿನ್ನ ಕಣ್ಣೋಟ
ಬೆಳದಿಂಗಳು ಪಸರಿಸಿ ತಣ್ಣನೆಯ ಅನುಭವ
ಬೀಸಿದ ಗಾಳಿಗೆ ಕಣ್ಣ ರೆಪ್ಪೆ ದಪ್ಪ, ಎದೆ ಪದಗಳ ಕಾವ್ಯ.

ಗುಂಗು ಹಿಡಿದ ಪ್ರೇಮದ ದಾರಿ ಮರಳು
ಅಲೆಗಳಲಿ ಅಪ್ಪಳಿಸಿ ಹಾಯಿ ಹರಸಿದ ದೋಣಿ
ಕಣ್ಣತೆರೆಗೆ ಬಯಲ ಕೆರೆ ಕೊಳಲೂದಿದ ಕೃಷ್ಣ
ಸಾವಿರ ದಿನವೂ ಮೀಯಲಿ ಮನವು ನಿನ್ನೊಳಗೆ
ಗೋಪಿಯರು ಹಾಡಲಿ, ಕಣ್ಣಲ್ಲಿ ಇಳಿಯಲಿ ಪ್ರೇಮದಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಬ್ದ ಶಕ್ತಿಯಿಂದ ಯಂತ್ರ ಚಾಲನೆ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೫೦

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…