ಉರುಳಿತ್ತು ಒಂದೂವರೆ ವರುಷ

ಉರುಳಿತ್ತು ಒಂದೂವರೆ ವರುಷ
ಹರುಷ ಕಳೆಯಿತು ಕಳೆದು ಕೂಡಿ
ಅಳೆದು ಅದರದರ ಭಾವನೆ
ಭಾಗಿಸುವಂತೆ ಹರುಷ ಕಳೆಯಿತು||

ನೆನಪೆಂಬ ಶೇಷ ಉಳಿದು
ಮನವ ತುಂಬಿ ಒಲಿದು ಪ್ರೀತಿ
ಎಂಬ ಪಕಳೆ ಉದುರಿ ಇಳೆಗೆ
ನವನನೀನತೆಯ ಭಾಗಿಸುವಂತೆ ಹರುಷ ಕಳೆಯಿತು ||ಉ||

ನಾನು ನನ್ನದೆಯ ಕಾಮನೆ
ಮೇಘಗಳೆ ನಿಮ್ಮೊಡೆಯ ದಿಶೆಗೆ
ಕುಂಚವು ಚಿತ್ರ ಬಿಡಿಸಿ ತುಡಿತಗಳ
ಭಾಗಿಸುವಂತೆ ಕಳಿಸಿರುವೆ ಸಂದೇಶ ||ಉ||

ಎಂದೂ ಬರುವುದೋ ಸಂದೇಶ
ಹೇಳಿ ತಿಳಿ ಹೇಳಿ ಕೇಳಿ ಮೇಘಗಳೆ
ಕರಗದೇ ಪ್ರತಿಕ್ಷಣ ಆಶಾನಿರಾಶಾ ಕೂಡಿ ಕಳೆದು
ವಿಶ್ವಾಸ ಶೇಷ ಉಳಿಯುವಂತೆ ಹರಿಸಿ ಪ್ರೀತಿಯ ||ಉ||

ಒಂದೂವರೆ ವರುಷ ನೂರು ಹರುಷ
ಕಳೆದ ನೆನೆಪು ಇನಿಯನೆದೆಯ ತೆರೆಯ
ಗೋಧೂಳಿ ಬಣ್ಣದ ಓಕುಳಿ ಸ್ವಂದನದೆ
ಹುಣ್ಣಿಮೆ ಚಂದ್ರ ಶೇಷ ಉಳಿಸಿ ಪ್ರೀತಿಯ ಹರಸಿತು ||ಉ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಹಿತ್ಯದಲ್ಲಿ ಸೃಜನಶೀಲ ಹಾಸ್ಯ
Next post ಯತಿ (ಸನ್ಯಾಸಿ)

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…