Home / ಕವನ / ಕವಿತೆ / ಬೆಳ್ಳಾನೆ ಬೆಳದಿಂಗಳು

ಬೆಳ್ಳಾನೆ ಬೆಳದಿಂಗಳು

ಬೆಳ್ಳಾನೆ ಬೆಳದಿಂಗಳು
ಬೆಳ್ಳಿಯ ಕೋಲ್ ಮಿಂಚು
ಬೆಳ್ಳಿ ಕುದುರೆ ಏರಿ ಬಂದಾನೆ
ನನ್ನ ಸರದಾರ||ಽಽಽಽ

ಮನಸು ಲಲ್ಲೆಯಾಡಕೊಂಡ್ಯಾವೆ
ಅವನ ನೋಡಿ||ಽಽಽಽ
ಅಂಬರದ ಹೊಂಬೆಳಕಲ್ಲಿ
ಇಬ್ಬನಿಯ ತಂಪಲ್ಲಿ ಜೊತೆಗೂಡಿ
ಆಡಿದ ಆಟದಾಗ
ನಾಚಿ ಮೊಗ್ಗಾದೆನೆ||ಽಽಽಽ

ಗಂಡು: ತಾಸು ಹೊತ್ತಿನ ಚೋರಿ
ಕಣ್ಣ ಮುಚ್ಚಾಲೆ ಆಡಿ
ಕಣ್ಣ್‌ಸನ್ನೆ ನೋಟವ ಬೀರಿ
ಕರೆದಾಳೆ ನನ್ನ ಗೆಳತಿ
ಸುಂಕದ ಕೋಯ್ಲ ಬೆಡಗಿ
ನನ್ನವಳೇಽಽಽಽ ನನ್ನ ಗೆಳತಿ||

ಹೆಣ್ಣು: ತೊಟ್ಟ ಜರಿಯ ಪೇಟ
ಉಟ್ಟ ಪಂಚೆ ರೇಶಿಮೆ
ಕೆಂಪಾನೆ ಹಣೆಯ ತಿಲಕವನಿರಿಸಿ
ಚಿಗುರ ಮೀಸೆ ತಿರುವಿದಾಗ ನನ್ನ ಸರದಾರ
ರಾಜಠೀವಿ ದುಂಡು ಮೊಗದಾಗಽಽಽಽ
ಬಳಿಗೆ ಬಂದಾನೆ ನನ್ನ ಸೆಳೆದಾನೆ
ಮಲ್ಲಿಗೆ ದಂಡೆಯ ಮುಡಿಸ್ಯಾನೆ
ನನ್ನ ನಲ್ಲಾಽಽಽಽ
ಮೆಲ್ಲನೆ ಕೈಯ ಹಿಡಿದ್ಯಾನೆಽಽಽಽ

ಗಂಡು: ಪಚ್ಚೆ ಹಸಿರ ಹಾಸಿಗೆ
ಹೆಜ್ಜೆ ಹೆಜ್ಜೆಯಂದವ ಕೂಡಿ
ಲಜ್ಜೆಯಿಂದಲಿ ಬಳುಕುವ ಪೋರಿ
ಮುದ್ದು ಮೊಗ್ಗ ಅರಳಿ ಲತೆಯಂತೆ
ಮೈದೋರಿಽಽಽಽ
ಮುಂಗುರುಳ ನಗೆ ಬೀರಿ ಸೆಳೆದಾಳೆ
ಸಗ್ಗದ ಸಿರಿಯ ತೋರ್‍ಯಾಳೆ
ಕಾಲ್‌ಗೆಜ್ಜೆ ಹಿಗ್ಗನ್ನು ತಂದು ಮೆರೆಸ್ಯಾಳೇಽಽಽಽ

ಹೆಣ್ಣು: ಸುಗ್ಗಿಯ ಸಿರಿದೋರಿ
ನಡು ಕಟ್ಟೆ ನಗೆ ಬೀರಿ
ರಾಶಿ ರಾಶಿ ಭಾಗ್ಯವ ತಂದಾನೆ
ಮುತ್ತಿನ ಹಾರ ತೊಡಿಸ್ಯಾನೆ
ಸಿರಿದೇವಿವೆ||ಽಽಽಽ
ನನ್ನ ಮನವ ತಣಿಸ್ಯಾನೆ
ತಂದಾನಾನಿ ತಾನಿ ಕುಣಿಸ್ಯಾನೆ

ಗಂಡು: ನಡು ಗೆಜ್ಜೆಡಾಬಿನ ಬಿಂಕದ ಗೆಳತಿ ಬಿನ್ನಾಣಗಿತ್ತಿ
ಸಾಕು ಸಾಕೆಲೆ ಮಾಟಗಾತಿ ಅಂದಗಾತಿ
ಸಂಕರಮಣ ಚಪ್ಪರದಾಗೆ ಮದುವಣಗಿತ್ತಿ
ಹಸನಾದ ಹಸೆ ಮೇಲೆ ನಿಂದವಳೆ
ಹಸಿರಾದ ಬಾಳಿಗೆ ಉಸಿರಾಗು ನನ್ನವಳೆ
ತುಂಬಿದ ಬಾಳಿಗೆ ಹೊನ್ನ ಕಳಶವ ಇಟ್ಟವಳೆಽಽಽಽ

ಹೆಣ್ಣು: ನಿನ್ನ ಮಾತಿಗೆ ಮನ ಸೋತು ನಿಂದೆನೋ
ಹಸೆ ಮಣೆಯ ಏರಿ ಹೊಸತನದ ಬಾಳ್ವೆಗೆ
ಉಷೆಯಾಗಿ ಶಶಿ ನಿನ್ನಲ್ಲಿ ನಾ ಒಂದಾಗಿ ಬರುವೆನೋ
ಬೆಳ್ಳಿ ಕುದರಿ ಏರಿ ಚೈತ್ರದಾ ಹೊನಲಿಗೆ
ನಾ ಮಿಂದು ಬರುವೆನೋಽಽಽಽ
ಭೂ ತಾಯ ಮಡಿಲ ಹೂವಾಗಿ ನಲಿಯುವೆನೋಽಽಽಽ
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...