Home / ಕವನ / ಕವಿತೆ / ಬೆಳ್ಳಾನೆ ಬೆಳದಿಂಗಳು

ಬೆಳ್ಳಾನೆ ಬೆಳದಿಂಗಳು

ಬೆಳ್ಳಾನೆ ಬೆಳದಿಂಗಳು
ಬೆಳ್ಳಿಯ ಕೋಲ್ ಮಿಂಚು
ಬೆಳ್ಳಿ ಕುದುರೆ ಏರಿ ಬಂದಾನೆ
ನನ್ನ ಸರದಾರ||ಽಽಽಽ

ಮನಸು ಲಲ್ಲೆಯಾಡಕೊಂಡ್ಯಾವೆ
ಅವನ ನೋಡಿ||ಽಽಽಽ
ಅಂಬರದ ಹೊಂಬೆಳಕಲ್ಲಿ
ಇಬ್ಬನಿಯ ತಂಪಲ್ಲಿ ಜೊತೆಗೂಡಿ
ಆಡಿದ ಆಟದಾಗ
ನಾಚಿ ಮೊಗ್ಗಾದೆನೆ||ಽಽಽಽ

ಗಂಡು: ತಾಸು ಹೊತ್ತಿನ ಚೋರಿ
ಕಣ್ಣ ಮುಚ್ಚಾಲೆ ಆಡಿ
ಕಣ್ಣ್‌ಸನ್ನೆ ನೋಟವ ಬೀರಿ
ಕರೆದಾಳೆ ನನ್ನ ಗೆಳತಿ
ಸುಂಕದ ಕೋಯ್ಲ ಬೆಡಗಿ
ನನ್ನವಳೇಽಽಽಽ ನನ್ನ ಗೆಳತಿ||

ಹೆಣ್ಣು: ತೊಟ್ಟ ಜರಿಯ ಪೇಟ
ಉಟ್ಟ ಪಂಚೆ ರೇಶಿಮೆ
ಕೆಂಪಾನೆ ಹಣೆಯ ತಿಲಕವನಿರಿಸಿ
ಚಿಗುರ ಮೀಸೆ ತಿರುವಿದಾಗ ನನ್ನ ಸರದಾರ
ರಾಜಠೀವಿ ದುಂಡು ಮೊಗದಾಗಽಽಽಽ
ಬಳಿಗೆ ಬಂದಾನೆ ನನ್ನ ಸೆಳೆದಾನೆ
ಮಲ್ಲಿಗೆ ದಂಡೆಯ ಮುಡಿಸ್ಯಾನೆ
ನನ್ನ ನಲ್ಲಾಽಽಽಽ
ಮೆಲ್ಲನೆ ಕೈಯ ಹಿಡಿದ್ಯಾನೆಽಽಽಽ

ಗಂಡು: ಪಚ್ಚೆ ಹಸಿರ ಹಾಸಿಗೆ
ಹೆಜ್ಜೆ ಹೆಜ್ಜೆಯಂದವ ಕೂಡಿ
ಲಜ್ಜೆಯಿಂದಲಿ ಬಳುಕುವ ಪೋರಿ
ಮುದ್ದು ಮೊಗ್ಗ ಅರಳಿ ಲತೆಯಂತೆ
ಮೈದೋರಿಽಽಽಽ
ಮುಂಗುರುಳ ನಗೆ ಬೀರಿ ಸೆಳೆದಾಳೆ
ಸಗ್ಗದ ಸಿರಿಯ ತೋರ್‍ಯಾಳೆ
ಕಾಲ್‌ಗೆಜ್ಜೆ ಹಿಗ್ಗನ್ನು ತಂದು ಮೆರೆಸ್ಯಾಳೇಽಽಽಽ

ಹೆಣ್ಣು: ಸುಗ್ಗಿಯ ಸಿರಿದೋರಿ
ನಡು ಕಟ್ಟೆ ನಗೆ ಬೀರಿ
ರಾಶಿ ರಾಶಿ ಭಾಗ್ಯವ ತಂದಾನೆ
ಮುತ್ತಿನ ಹಾರ ತೊಡಿಸ್ಯಾನೆ
ಸಿರಿದೇವಿವೆ||ಽಽಽಽ
ನನ್ನ ಮನವ ತಣಿಸ್ಯಾನೆ
ತಂದಾನಾನಿ ತಾನಿ ಕುಣಿಸ್ಯಾನೆ

ಗಂಡು: ನಡು ಗೆಜ್ಜೆಡಾಬಿನ ಬಿಂಕದ ಗೆಳತಿ ಬಿನ್ನಾಣಗಿತ್ತಿ
ಸಾಕು ಸಾಕೆಲೆ ಮಾಟಗಾತಿ ಅಂದಗಾತಿ
ಸಂಕರಮಣ ಚಪ್ಪರದಾಗೆ ಮದುವಣಗಿತ್ತಿ
ಹಸನಾದ ಹಸೆ ಮೇಲೆ ನಿಂದವಳೆ
ಹಸಿರಾದ ಬಾಳಿಗೆ ಉಸಿರಾಗು ನನ್ನವಳೆ
ತುಂಬಿದ ಬಾಳಿಗೆ ಹೊನ್ನ ಕಳಶವ ಇಟ್ಟವಳೆಽಽಽಽ

ಹೆಣ್ಣು: ನಿನ್ನ ಮಾತಿಗೆ ಮನ ಸೋತು ನಿಂದೆನೋ
ಹಸೆ ಮಣೆಯ ಏರಿ ಹೊಸತನದ ಬಾಳ್ವೆಗೆ
ಉಷೆಯಾಗಿ ಶಶಿ ನಿನ್ನಲ್ಲಿ ನಾ ಒಂದಾಗಿ ಬರುವೆನೋ
ಬೆಳ್ಳಿ ಕುದರಿ ಏರಿ ಚೈತ್ರದಾ ಹೊನಲಿಗೆ
ನಾ ಮಿಂದು ಬರುವೆನೋಽಽಽಽ
ಭೂ ತಾಯ ಮಡಿಲ ಹೂವಾಗಿ ನಲಿಯುವೆನೋಽಽಽಽ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...