Home / ಕವನ / ಕವಿತೆ / ಬೆಳ್ಳಾನೆ ಬೆಳದಿಂಗಳು

ಬೆಳ್ಳಾನೆ ಬೆಳದಿಂಗಳು

ಬೆಳ್ಳಾನೆ ಬೆಳದಿಂಗಳು
ಬೆಳ್ಳಿಯ ಕೋಲ್ ಮಿಂಚು
ಬೆಳ್ಳಿ ಕುದುರೆ ಏರಿ ಬಂದಾನೆ
ನನ್ನ ಸರದಾರ||ಽಽಽಽ

ಮನಸು ಲಲ್ಲೆಯಾಡಕೊಂಡ್ಯಾವೆ
ಅವನ ನೋಡಿ||ಽಽಽಽ
ಅಂಬರದ ಹೊಂಬೆಳಕಲ್ಲಿ
ಇಬ್ಬನಿಯ ತಂಪಲ್ಲಿ ಜೊತೆಗೂಡಿ
ಆಡಿದ ಆಟದಾಗ
ನಾಚಿ ಮೊಗ್ಗಾದೆನೆ||ಽಽಽಽ

ಗಂಡು: ತಾಸು ಹೊತ್ತಿನ ಚೋರಿ
ಕಣ್ಣ ಮುಚ್ಚಾಲೆ ಆಡಿ
ಕಣ್ಣ್‌ಸನ್ನೆ ನೋಟವ ಬೀರಿ
ಕರೆದಾಳೆ ನನ್ನ ಗೆಳತಿ
ಸುಂಕದ ಕೋಯ್ಲ ಬೆಡಗಿ
ನನ್ನವಳೇಽಽಽಽ ನನ್ನ ಗೆಳತಿ||

ಹೆಣ್ಣು: ತೊಟ್ಟ ಜರಿಯ ಪೇಟ
ಉಟ್ಟ ಪಂಚೆ ರೇಶಿಮೆ
ಕೆಂಪಾನೆ ಹಣೆಯ ತಿಲಕವನಿರಿಸಿ
ಚಿಗುರ ಮೀಸೆ ತಿರುವಿದಾಗ ನನ್ನ ಸರದಾರ
ರಾಜಠೀವಿ ದುಂಡು ಮೊಗದಾಗಽಽಽಽ
ಬಳಿಗೆ ಬಂದಾನೆ ನನ್ನ ಸೆಳೆದಾನೆ
ಮಲ್ಲಿಗೆ ದಂಡೆಯ ಮುಡಿಸ್ಯಾನೆ
ನನ್ನ ನಲ್ಲಾಽಽಽಽ
ಮೆಲ್ಲನೆ ಕೈಯ ಹಿಡಿದ್ಯಾನೆಽಽಽಽ

ಗಂಡು: ಪಚ್ಚೆ ಹಸಿರ ಹಾಸಿಗೆ
ಹೆಜ್ಜೆ ಹೆಜ್ಜೆಯಂದವ ಕೂಡಿ
ಲಜ್ಜೆಯಿಂದಲಿ ಬಳುಕುವ ಪೋರಿ
ಮುದ್ದು ಮೊಗ್ಗ ಅರಳಿ ಲತೆಯಂತೆ
ಮೈದೋರಿಽಽಽಽ
ಮುಂಗುರುಳ ನಗೆ ಬೀರಿ ಸೆಳೆದಾಳೆ
ಸಗ್ಗದ ಸಿರಿಯ ತೋರ್‍ಯಾಳೆ
ಕಾಲ್‌ಗೆಜ್ಜೆ ಹಿಗ್ಗನ್ನು ತಂದು ಮೆರೆಸ್ಯಾಳೇಽಽಽಽ

ಹೆಣ್ಣು: ಸುಗ್ಗಿಯ ಸಿರಿದೋರಿ
ನಡು ಕಟ್ಟೆ ನಗೆ ಬೀರಿ
ರಾಶಿ ರಾಶಿ ಭಾಗ್ಯವ ತಂದಾನೆ
ಮುತ್ತಿನ ಹಾರ ತೊಡಿಸ್ಯಾನೆ
ಸಿರಿದೇವಿವೆ||ಽಽಽಽ
ನನ್ನ ಮನವ ತಣಿಸ್ಯಾನೆ
ತಂದಾನಾನಿ ತಾನಿ ಕುಣಿಸ್ಯಾನೆ

ಗಂಡು: ನಡು ಗೆಜ್ಜೆಡಾಬಿನ ಬಿಂಕದ ಗೆಳತಿ ಬಿನ್ನಾಣಗಿತ್ತಿ
ಸಾಕು ಸಾಕೆಲೆ ಮಾಟಗಾತಿ ಅಂದಗಾತಿ
ಸಂಕರಮಣ ಚಪ್ಪರದಾಗೆ ಮದುವಣಗಿತ್ತಿ
ಹಸನಾದ ಹಸೆ ಮೇಲೆ ನಿಂದವಳೆ
ಹಸಿರಾದ ಬಾಳಿಗೆ ಉಸಿರಾಗು ನನ್ನವಳೆ
ತುಂಬಿದ ಬಾಳಿಗೆ ಹೊನ್ನ ಕಳಶವ ಇಟ್ಟವಳೆಽಽಽಽ

ಹೆಣ್ಣು: ನಿನ್ನ ಮಾತಿಗೆ ಮನ ಸೋತು ನಿಂದೆನೋ
ಹಸೆ ಮಣೆಯ ಏರಿ ಹೊಸತನದ ಬಾಳ್ವೆಗೆ
ಉಷೆಯಾಗಿ ಶಶಿ ನಿನ್ನಲ್ಲಿ ನಾ ಒಂದಾಗಿ ಬರುವೆನೋ
ಬೆಳ್ಳಿ ಕುದರಿ ಏರಿ ಚೈತ್ರದಾ ಹೊನಲಿಗೆ
ನಾ ಮಿಂದು ಬರುವೆನೋಽಽಽಽ
ಭೂ ತಾಯ ಮಡಿಲ ಹೂವಾಗಿ ನಲಿಯುವೆನೋಽಽಽಽ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...