ಬೆರಳು

ಮೊಗ್ಗಿನ ಹಾಗೆ ಬಾಲ್ಯದ ಬೆರಳು
ಮದಗಜದಂತೆ ಮಧ್ಯದ ಬೆರಳು
ಮಾಗಿತು ಬಾಗಿತು ಮುಪ್ಪಿನ ಬೆರಳು
ಯಾವುದು ಹಿರಿದು? ಯಾವುದು ಕಿರಿದು?
ಹುಟ್ಟಿನ ಬೆರಳು? ಸಾವಿನ ಬೆರಳು?

ಕಣ್ಣನು ಉರಿಸಿತು ಬೆಂಕಿಯ ಬೆರಳು
ಮೂಗನು ಇರಿಸಿತು ಗಾಳಿಯ ಬೆರಳು
ತುಟಿಯನು ತಿದ್ದಿತು ನೀರಿನ ಬೆರಳು
ಕಿವಿ ನಾಲಗೆಯನು ನಭದಾ ಬೆರಳು
ಮೈಯ ಮೂಡಿಸಿತು ಭೂಮಿಯ ಬೆರಳು

ಮೋಹ ಮದ ಮತ್ಸರಗಳನೂ
ಪ್ರೀತಿ ಕರುಣೆ ಕಾಮನೆಗಳನೂ
ಸಂಚು ವಂಚನೆ ಛಲ ಬಲಗಳನೂ
ಹಿಡಿಹಿಡಿ ಅಂದಿತು ಮಾಯೆಯ ಬೆರಳು

ಚಿಮ್ಮಿತು ಚಾಚಿತು ಚಲಿಸಿತು
ಬೀಜದ ಬೆರಳು
ತತ್ತಿಯನಪ್ಪಿತು ತುತ್ತನು ಉಣಿಸಿತು
ತಟ್ಟಿ ಮಲಗಿಸಿತು ತಾಯಿಯ ಬೆರಳು

ಚಂದ್ರನ ಕರೆಯಿತು ಚಪ್ಪಾಳೆ ತಟ್ಟಿತು
ತುತ್ತೂರಿ ಹಿಡಿಯಿತು ಪುಟವದು ತೆರೆಯಿತು
ಚಿತ್ರವ ಬರೆಯಿತು ಮಗುವಿನ ಬೆರಳು

ಮಲ್ಲನ ಮಣಿಸಿತು ಮಲ್ಲಿಗೆ ಮುಡಿಸಿತು
ಕೆನ್ನೆಯ ಸವರಿತು ಕಣ್ಣೀರ ಒರೆಸಿತು
ಕನಸನು ಹೆಣೆಯಿತು ಕವಿತೆಯ ಬರೆಯಿತು
ಬಿನ್ನಾಣ ಮಾಡಿತು ಪ್ರೇಮಿಯ ಬೆರಳು

ಕೋವಿಯ ಹಿಡಿಯಿತು ಮದ್ದನು ಸಿಡಿಸಿತು
ತಕ್ಕಡಿ ಹಿಡಿಯಿತು ತಿಜೋರಿ ತುಂಬಿತು
ಮಕುಟವ ಕಸಿಯಿತು ಮರಳನು ಅಳೆಯಿತು
ಯೌವನದರಳನು ಹುರಿಯಿತು ಬೆರಳು

ಮಣಿಯನು ಎಣಿಸಿತು ಕಪ್ಪರ ಹಿಡಿಯಿತು
ತಾಳವ ಹಾಕಿತು ತಂತಿಯ ಮೀಟಿತು
ಗೀತೆಯ ನುಡಿಸಿತು ಧೂಪವ ಹಚ್ಚಿತು
ನಡುಗಿತು ನರಳಿತು ಮಾಗಿಯ ಬೆರಳು

ಹುಟ್ಟದು ಸವೆಯಿತು ಹಾಯಿಯು ಹರಿಯಿತು
ಹತ್ತೂ ದಿಕ್ಕಿಗೆ ಬೊಂಬಿನ ನೆರಳು
ಕಾಣದ ಬೆರಳೊಂದು ಕೊಳಲನು ನುಡಿಸಿತು
ಹಂಸೆಯ ಹಿಡಿದೆತ್ತಿ ಗಗನಕೆ ಚಿಮ್ಮಿತು
ಝಗ್ಗೆಂದು ಹೊಳೆಯಿತು ಮಿಂಚಿನ ಬೆರಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡಕ್ಕಾಗಿ ಕಂಠ ಕಟ್ಟಿದರು
Next post ವ್ಯಾಮೋಹ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…