ಬೆರಳು

ಮೊಗ್ಗಿನ ಹಾಗೆ ಬಾಲ್ಯದ ಬೆರಳು
ಮದಗಜದಂತೆ ಮಧ್ಯದ ಬೆರಳು
ಮಾಗಿತು ಬಾಗಿತು ಮುಪ್ಪಿನ ಬೆರಳು
ಯಾವುದು ಹಿರಿದು? ಯಾವುದು ಕಿರಿದು?
ಹುಟ್ಟಿನ ಬೆರಳು? ಸಾವಿನ ಬೆರಳು?

ಕಣ್ಣನು ಉರಿಸಿತು ಬೆಂಕಿಯ ಬೆರಳು
ಮೂಗನು ಇರಿಸಿತು ಗಾಳಿಯ ಬೆರಳು
ತುಟಿಯನು ತಿದ್ದಿತು ನೀರಿನ ಬೆರಳು
ಕಿವಿ ನಾಲಗೆಯನು ನಭದಾ ಬೆರಳು
ಮೈಯ ಮೂಡಿಸಿತು ಭೂಮಿಯ ಬೆರಳು

ಮೋಹ ಮದ ಮತ್ಸರಗಳನೂ
ಪ್ರೀತಿ ಕರುಣೆ ಕಾಮನೆಗಳನೂ
ಸಂಚು ವಂಚನೆ ಛಲ ಬಲಗಳನೂ
ಹಿಡಿಹಿಡಿ ಅಂದಿತು ಮಾಯೆಯ ಬೆರಳು

ಚಿಮ್ಮಿತು ಚಾಚಿತು ಚಲಿಸಿತು
ಬೀಜದ ಬೆರಳು
ತತ್ತಿಯನಪ್ಪಿತು ತುತ್ತನು ಉಣಿಸಿತು
ತಟ್ಟಿ ಮಲಗಿಸಿತು ತಾಯಿಯ ಬೆರಳು

ಚಂದ್ರನ ಕರೆಯಿತು ಚಪ್ಪಾಳೆ ತಟ್ಟಿತು
ತುತ್ತೂರಿ ಹಿಡಿಯಿತು ಪುಟವದು ತೆರೆಯಿತು
ಚಿತ್ರವ ಬರೆಯಿತು ಮಗುವಿನ ಬೆರಳು

ಮಲ್ಲನ ಮಣಿಸಿತು ಮಲ್ಲಿಗೆ ಮುಡಿಸಿತು
ಕೆನ್ನೆಯ ಸವರಿತು ಕಣ್ಣೀರ ಒರೆಸಿತು
ಕನಸನು ಹೆಣೆಯಿತು ಕವಿತೆಯ ಬರೆಯಿತು
ಬಿನ್ನಾಣ ಮಾಡಿತು ಪ್ರೇಮಿಯ ಬೆರಳು

ಕೋವಿಯ ಹಿಡಿಯಿತು ಮದ್ದನು ಸಿಡಿಸಿತು
ತಕ್ಕಡಿ ಹಿಡಿಯಿತು ತಿಜೋರಿ ತುಂಬಿತು
ಮಕುಟವ ಕಸಿಯಿತು ಮರಳನು ಅಳೆಯಿತು
ಯೌವನದರಳನು ಹುರಿಯಿತು ಬೆರಳು

ಮಣಿಯನು ಎಣಿಸಿತು ಕಪ್ಪರ ಹಿಡಿಯಿತು
ತಾಳವ ಹಾಕಿತು ತಂತಿಯ ಮೀಟಿತು
ಗೀತೆಯ ನುಡಿಸಿತು ಧೂಪವ ಹಚ್ಚಿತು
ನಡುಗಿತು ನರಳಿತು ಮಾಗಿಯ ಬೆರಳು

ಹುಟ್ಟದು ಸವೆಯಿತು ಹಾಯಿಯು ಹರಿಯಿತು
ಹತ್ತೂ ದಿಕ್ಕಿಗೆ ಬೊಂಬಿನ ನೆರಳು
ಕಾಣದ ಬೆರಳೊಂದು ಕೊಳಲನು ನುಡಿಸಿತು
ಹಂಸೆಯ ಹಿಡಿದೆತ್ತಿ ಗಗನಕೆ ಚಿಮ್ಮಿತು
ಝಗ್ಗೆಂದು ಹೊಳೆಯಿತು ಮಿಂಚಿನ ಬೆರಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡಕ್ಕಾಗಿ ಕಂಠ ಕಟ್ಟಿದರು
Next post ವ್ಯಾಮೋಹ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys