Home / ಕವನ / ಕವಿತೆ / ಬೆರಳು

ಬೆರಳು

ಮೊಗ್ಗಿನ ಹಾಗೆ ಬಾಲ್ಯದ ಬೆರಳು
ಮದಗಜದಂತೆ ಮಧ್ಯದ ಬೆರಳು
ಮಾಗಿತು ಬಾಗಿತು ಮುಪ್ಪಿನ ಬೆರಳು
ಯಾವುದು ಹಿರಿದು? ಯಾವುದು ಕಿರಿದು?
ಹುಟ್ಟಿನ ಬೆರಳು? ಸಾವಿನ ಬೆರಳು?

ಕಣ್ಣನು ಉರಿಸಿತು ಬೆಂಕಿಯ ಬೆರಳು
ಮೂಗನು ಇರಿಸಿತು ಗಾಳಿಯ ಬೆರಳು
ತುಟಿಯನು ತಿದ್ದಿತು ನೀರಿನ ಬೆರಳು
ಕಿವಿ ನಾಲಗೆಯನು ನಭದಾ ಬೆರಳು
ಮೈಯ ಮೂಡಿಸಿತು ಭೂಮಿಯ ಬೆರಳು

ಮೋಹ ಮದ ಮತ್ಸರಗಳನೂ
ಪ್ರೀತಿ ಕರುಣೆ ಕಾಮನೆಗಳನೂ
ಸಂಚು ವಂಚನೆ ಛಲ ಬಲಗಳನೂ
ಹಿಡಿಹಿಡಿ ಅಂದಿತು ಮಾಯೆಯ ಬೆರಳು

ಚಿಮ್ಮಿತು ಚಾಚಿತು ಚಲಿಸಿತು
ಬೀಜದ ಬೆರಳು
ತತ್ತಿಯನಪ್ಪಿತು ತುತ್ತನು ಉಣಿಸಿತು
ತಟ್ಟಿ ಮಲಗಿಸಿತು ತಾಯಿಯ ಬೆರಳು

ಚಂದ್ರನ ಕರೆಯಿತು ಚಪ್ಪಾಳೆ ತಟ್ಟಿತು
ತುತ್ತೂರಿ ಹಿಡಿಯಿತು ಪುಟವದು ತೆರೆಯಿತು
ಚಿತ್ರವ ಬರೆಯಿತು ಮಗುವಿನ ಬೆರಳು

ಮಲ್ಲನ ಮಣಿಸಿತು ಮಲ್ಲಿಗೆ ಮುಡಿಸಿತು
ಕೆನ್ನೆಯ ಸವರಿತು ಕಣ್ಣೀರ ಒರೆಸಿತು
ಕನಸನು ಹೆಣೆಯಿತು ಕವಿತೆಯ ಬರೆಯಿತು
ಬಿನ್ನಾಣ ಮಾಡಿತು ಪ್ರೇಮಿಯ ಬೆರಳು

ಕೋವಿಯ ಹಿಡಿಯಿತು ಮದ್ದನು ಸಿಡಿಸಿತು
ತಕ್ಕಡಿ ಹಿಡಿಯಿತು ತಿಜೋರಿ ತುಂಬಿತು
ಮಕುಟವ ಕಸಿಯಿತು ಮರಳನು ಅಳೆಯಿತು
ಯೌವನದರಳನು ಹುರಿಯಿತು ಬೆರಳು

ಮಣಿಯನು ಎಣಿಸಿತು ಕಪ್ಪರ ಹಿಡಿಯಿತು
ತಾಳವ ಹಾಕಿತು ತಂತಿಯ ಮೀಟಿತು
ಗೀತೆಯ ನುಡಿಸಿತು ಧೂಪವ ಹಚ್ಚಿತು
ನಡುಗಿತು ನರಳಿತು ಮಾಗಿಯ ಬೆರಳು

ಹುಟ್ಟದು ಸವೆಯಿತು ಹಾಯಿಯು ಹರಿಯಿತು
ಹತ್ತೂ ದಿಕ್ಕಿಗೆ ಬೊಂಬಿನ ನೆರಳು
ಕಾಣದ ಬೆರಳೊಂದು ಕೊಳಲನು ನುಡಿಸಿತು
ಹಂಸೆಯ ಹಿಡಿದೆತ್ತಿ ಗಗನಕೆ ಚಿಮ್ಮಿತು
ಝಗ್ಗೆಂದು ಹೊಳೆಯಿತು ಮಿಂಚಿನ ಬೆರಳು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...