Home / ಕವನ / ಹನಿಗವನ / ಮಣ್ಣ ಗರಿಕೆ ನಸು ನಕ್ಕಿತು

ಮಣ್ಣ ಗರಿಕೆ ನಸು ನಕ್ಕಿತು

-೧-
ಮಳೆ ಧ್ಯಾನಿಸುತ್ತಿದೆ
ಗರಿಕೆ ನಗುತ್ತಿದೆ
ಆಕೆ ಎದೆಯಲ್ಲಿ
ತಣ್ಣಗೆ ನಕ್ಕ ನೆ‌ನಪು
****
-೨-
ಪಂಜರದ ಪಕ್ಷಿಗಳು
ಬೆಳಗಿಂದ ಸುರಿವ
ಮಳೆ ಕಂಡು
ಮೊದಲ ಮಿಲನ
ನೆನಪಿಸಿಕೊಂಡವು
***
-೩-
ಮಳೆಗೆ ಮೈಯೊಡ್ಡಿದ
ಮರ
ಬೇಸಿಗೆಯ ಬಿಸಿಲ ನೆನೆಯಿತು
ಕೊಣೆ ಸೇರಿದ್ದ
ಆಕೆ
ಮಳೆ ಬಿಸಿಲು ಚಳಿಯ
ಮೈಥುನಗಳ
ನೆನೆದು
ನಿಟ್ಟುಸಿರಾದಳು
****
-೪-
ಸದಾ ಸುಳ್ಳು ಹೇಳುವ
ಮನುಷ್ಯ
ಮಳೆಯಲ್ಲೂ
ಸುಳ್ಳು ಹೇಳಿ ಬಂದ
ಶಬ್ದಗಳು ಹರಿವ
ನೀರಲ್ಲಿ ತೇಲಿದವು
****
-೫-
ಬೇಸಿಗೆಯ
ವಿರಹ ಮರೆಯಾಯ್ತು
ಗೋಡೆಗಳ ಮಧ್ಯೆ
ಪಿಸುಮಾತುಗಳು
ಮೊಳಕೆಯೊಡೆದವು
****
-೬-
ಮಳೆಗೂ ಮೈಥುನಕ್ಕೂ
ಸಂಬಂಧ ಇದೆ
 ವಾದಿಸಿದ ;
ಕನ್ನಡಿಯ ಮುಂದೆ
ನಗ್ನವಾಗಿ ಕುಳಿತು
ನಗುತ್ತಿದ್ದಳು
****
-೭-
ಭೂಮಿ ಮಳೆ
ಮಧ್ಯೆ  ಗಾಳಿ ಸುಳಿಯಿತು
ಗಿಡಮರ ಹಕ್ಕಿಗಳು
ಆಡಿಕೊಂಡವು
****
-೮-
ಮಳೆ
ಕಡಲು ದಂಡೆ
ಬದಿಯ ಹೋಟೆಲ್
ಟೇಬಲ್ ಮೇಲೆ ಓಡ್ಕಾ
ಗ್ಲಾಸ್ ನಲ್ಲಿ ನಗುತ್ತಿದೆ
ವಿರಹಿ
ಎದುರು ಕುಳಿತಿದ್ದಾನೆ
****
-೯-
ಶಬ್ದಗಳು
ಕರಗುತ್ತಿವೆ
ತಣ್ಣಗೆ ಸುರಿವ ಮಳೆಯಲ್ಲಿ
****
-೧೦-
ಈ ಮಳೆಗಾಲದಲ್ಲಿ
ಕೂಡೋಣ
ಕವಿತೆ ಕಟ್ಟಲು
ಕನಸು ಕಳುಸಿದ
ಮರಳಿ ಬಂದ ಶಬ್ದ
ಹೇಳಿತು
ಮನುಷ್ಯರ ಮಾತು ನಂಬಲಾಗದು
ಮಳೆಗೆ ಉತ್ತರಿಸುವ
ಮಣ್ಣ ಗರಿಕೆ ನಸು ನಕ್ಕಿತು
****
Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...