ದಾಂಪತ್ಯ

ಹರಿದ ಸಂಜೆಯ ಗುಂಗು
ಪರಿಮಳಕ್ಕೆ ಅರಳಿದ ಹೂ
ಸುಳಿಸುಳಿದ ಬಯಲ ಬೆಟ್ಟಗಾಳಿ
ನಾನಿನ್ನ ನೋಟದೊಳಗೆ ಇಳಿದು
ನೀಲ ಬಾನಲಿ ಕಾಮನಬಿಲ್ಲು.

ಅತ್ತ ಕಂದನ ಮೃದು ಕೆನ್ನೆಯಲಿ
ಇಳಿದ ಹನಿಬಿಂದು ಎದೆಯ ಹಾಲು
ನಿನ್ನುಸಿರು ತಾಗಿದ ನವಜೀವ
ನಗುತ ಪ್ರೇಮದೌತಣ ಉಂಡು
ಘನವಾಗಿ ಇಳಿದ ರಮ್ಯ ಚೇತನ.

ಚಿತ್ರ ವಿಚಿತ್ರ ಲೋಕ ಸಂಸಾರದಲಿ
ತೇಲಿದ ಗಾಳಿಪಟ ಹರಿದ ನದಿ
ದಟ್ಟಕಾಡು ದಾಟಿ ಬಯಲು ಹಸಿರು
ತಂಗಾಳಿಯ ಒರೆತ ಅಂಗಳದ
ರಂಗೋಲಿ ಚಿಕ್ಕಿ ನಕ್ಷತ್ರಗಳ ಸಂಧ್ಯೆ.

ಎಲ್ಲಾ ಪುಟಗಳಲಿ ನಾನು ನೀನು
ಬರದ ಮಹಾ ಖಂಡ ಕಾವ್ಯ
ಇಲ್ಲ ಹೌದು ಎಂಬ ಅಹಂಕಾರ
ಭಾಷೆ ಒದ್ದೆಯ ಕಣ್ಣಿವೆಗಳು
ಎದೆಯ ತುಂಬ ಮೀಟಿದ ನಾಲ್ಕು ತಂತಿ.

ಬೆಳದಿಂಗಳ ಕೆನೆಮೊಸರ ಅನ್ನ
ಪ್ರತಿ ರಾತ್ರಿ ನೆರಳು ಕರಳು ಆಟ
ಅದು ಕಳ್ಳುಬಳ್ಳಿ ದುಮ್ಮಾನ ಓಟ
ಉಳಿಯುವ ನೋಟದಲಿ ನನ್ನನಿನ್ನ
ಗರಿಕೆ ಬೇರು ಬೆಸೆದ ಸಂಬಂದ ಅನುಬಂಧ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೆಳೆತ
Next post ಗಾಜಿನ ಹೃದಯ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…