ಸಪ್ನ

ಮಲಗಿದಾಗಲೆಲ್ಲಾ ಅವೇ
ಕನಸುಗಳು ಮರುಕಳಿಸಿ
ಅಂಕು ಡೊಂಕು ಕತ್ತಲೆದಾರಿ
ಕಂದರದಲಿ ನನ್ನೊಗಿದು ಬಿಡುತ್ತದೆ
ಬೆಚ್ಚಿ ಬಿದ್ದು ಎದ್ದು ಕೂರುತ್ತೇನೆ.

ಮುಳುಗಿದನೋ ತೇಲಿದನೋ
ಈಜಿದನೋ ಕಿತ್ತು ಕಿತ್ತು
ಕಿಬ್ಬೊಟ್ಟೆಯ ನರಗಳೆಲ್ಲಾ
ಪರ್ವತದ ಗುಡ್ಡೆ ರಾಶಿ
ಕತ್ತಲ ಲೋಕದಲಿ ನಾನೀಗಿ ಬತ್ತಲೆ.

ಸರ್ವಸ್ವ ಎಲ್ಲವೂ ಎಲ್ಲೋ ಕಳೆದ
ಕಳವಳ ಭವಬಂಧನ
ದಾರಿ ತುಂಬ ಹಬ್ಬಿದ ಸೀಕುಜಾಲಿ
ಕೇಳಿ ಆಲಿಸಿದ ಶಬ್ದಗಳೆಲ್ಲಾ
ಕೆಸರಲ್ಲಿ ಸಿಲುಕಿ ನನ್ನೊಳಗೆ ಗದ್ದಲದ ಕಾಡು,

ಪದೇ ಪದೇ ಚಕ್ಕಂದವಾಡಿದ
ಜೋಕಾಲಿ ಜೇಕು ಎದೆ ಅಂಗಳದಲಿ
ಬಿರುಗಾಳಿ ಬೀಸಿ ಮುರಿದ ಮಲ್ಲಿಗೆ ಚಪ್ಪರ
ಹೂಹಸಿರಿಗಳಿಲ್ಲದ ಮರಭೂಮಿ
ಏನಹೇಳ ಬೇಕೆಂದರೂ ಶಬ್ದಗಳಗೆ ಸಿಗದ ಸಪ್ನಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವನ ರಸ
Next post ನಿಶಬ್ದದ ತಂಗಾಳಿ ತಾಗಿ ಹೋಯಿತು

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…