ದೂರ ದೂರ ದೂರ

ದೂರ ದೂರ ದೂರ ಮುಗಿಲ
ದೂರ ದೂರ ನೋಡುವಾ
ಆಳ ಆಳ ಆಳ ಕಡಲ
ಆಳ ಆಳ ಸೇರುವಾ

ದಂಡೆ ಇಲ್ಲ ಬಂಡೆ ಇಲ್ಲ
ಆದಿ ಅಂತ ದಾಟುವಾ
ನಾದವಿಲ್ಲ ನೋಟವಿಲ್ಲ
ಮೌನವೀಣೆ ಮೀಟುವಾ

ರಸದ ವಿಶ್ವ ಋತದ ವಿಶ್ವ
ಸತ್ಯ ಶಾಂತಿಯನುಪಮಾ
ಶಿವನ ಜ್ಯೋತಿ ಶಿವನ ಪ್ರೀತಿ
ತಂಪು ತನನ ನಿರುಪಮಾ

ನಾನು ಬಿಂದು ನೀನು ಬಿಂದು
ರಸದ ಸಿಂಧು ಜೇನ್ಮಳೆ
ನಾನು ತಂಪು ನೀನು ಇಂಪು
ಸೊಂಪು ಸುಖದ ಶಾಮಲೆ

ಹಂಚು ದೇಹ ಬಿಚ್ಚಿ ಹೋಗಿ
ವಿಮಲ ಕಮಲ ತೆರೆಯಿತು
ಆತ್ಮ ದೀಪ ದೀಪ್ತಿ ಚಿಮ್ಮಿ
ದೇವ ಬುಗ್ಗೆ ಸುರಿಯಿತು

ತಲೆಯ ಸೊಟ್ಟೆ ಒಡೆದು ಹೋಗಿ
ದಿವ್ಯ ರತ್ನ ತೋರಿತು
ಶೂನ್ಯ ಶೂನ್ಯ ಶೂನ್ಯದಾಚೆ
ಶಿವನ ಚೆಲುವು ಚಿಗುರಿತು


Previous post ಜಗದ್ಗುರು
Next post ಆಸೆ – ೧

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…