ದೂರ ದೂರ ದೂರ

ದೂರ ದೂರ ದೂರ ಮುಗಿಲ
ದೂರ ದೂರ ನೋಡುವಾ
ಆಳ ಆಳ ಆಳ ಕಡಲ
ಆಳ ಆಳ ಸೇರುವಾ

ದಂಡೆ ಇಲ್ಲ ಬಂಡೆ ಇಲ್ಲ
ಆದಿ ಅಂತ ದಾಟುವಾ
ನಾದವಿಲ್ಲ ನೋಟವಿಲ್ಲ
ಮೌನವೀಣೆ ಮೀಟುವಾ

ರಸದ ವಿಶ್ವ ಋತದ ವಿಶ್ವ
ಸತ್ಯ ಶಾಂತಿಯನುಪಮಾ
ಶಿವನ ಜ್ಯೋತಿ ಶಿವನ ಪ್ರೀತಿ
ತಂಪು ತನನ ನಿರುಪಮಾ

ನಾನು ಬಿಂದು ನೀನು ಬಿಂದು
ರಸದ ಸಿಂಧು ಜೇನ್ಮಳೆ
ನಾನು ತಂಪು ನೀನು ಇಂಪು
ಸೊಂಪು ಸುಖದ ಶಾಮಲೆ

ಹಂಚು ದೇಹ ಬಿಚ್ಚಿ ಹೋಗಿ
ವಿಮಲ ಕಮಲ ತೆರೆಯಿತು
ಆತ್ಮ ದೀಪ ದೀಪ್ತಿ ಚಿಮ್ಮಿ
ದೇವ ಬುಗ್ಗೆ ಸುರಿಯಿತು

ತಲೆಯ ಸೊಟ್ಟೆ ಒಡೆದು ಹೋಗಿ
ದಿವ್ಯ ರತ್ನ ತೋರಿತು
ಶೂನ್ಯ ಶೂನ್ಯ ಶೂನ್ಯದಾಚೆ
ಶಿವನ ಚೆಲುವು ಚಿಗುರಿತು


Previous post ಜಗದ್ಗುರು
Next post ಆಸೆ – ೧

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys