ಈ ಹುಚ್ಚ ಚಿಮಣಿಗಳ ಚಲ್ಲಿಬಿಡಿರಿ

ಪಂಚ ಕಳ್ಳರ ತಂದು ಮಂಚದಾ ಮೇಲಿರಿಸಿ
ಈ ಮುಗ್ಧ ಗೋವುಗಳು ಮೆರೆಸಿರುವವು
ಪಂಚ ಪೀಠವ ಕಟ್ಟಿ ಪಂಚ ಪಾಲಕಿ ಕಟ್ಟಿ
ಅಡ್ಡಾಗಿ ಉದ್ದಾಗಿ ಎತ್ತಿರುವವು

ಓ ಮುಗ್ಧ ಸೋದರರೆ ಅತಿಮುಗ್ಧ ಭಾವುಕರೆ
ಈ ಚರ್ಮ ಚೀಲಗಳ ಹೊರುವಿರೇಕೆ
ಆರತಿಯ ತಂದಿರುವ ಓ ಅಕ್ಕ ತಾಯಿಗಳೆ
ಈ ಹೆಣದ ಕುಂಡಗಳ ಪೂಜೆಯೇಕೆ

ಪಾಲಕಿಯ ಹೊತ್ತಿರುವ ಶಿವಭಕ್ತ ಗೋಪುಗಳೆ
ಶಿವನ ಹೆಸರಿಲೆ ಶವದ ಯಾತ್ರೆಯೇಕೆ
ಹೊಗಳಿಕೆಯನುಣಬಂದ ಹಣರಾಶಿ ಬೇಕೆಂದ
ಈ ಪಂಚ ವಂಚಕರ ತೇರುಯೇಕೆ

ತೋರಿಕೆಯ ಯೋಗಿಗಳ ಸೋರಿಕೆಯ ಕಾಮಿಗಳ
ಓ ತಾಯಿ ತಂದೆಗಳ ಸೇರಬೇಡಿ
ಹಾಲು ಕುಡಿಯಲು ಹೋಗಿ ವಿಷವ ಕುಡಿಯಲು ಬೇಡಿ
ಹಗಲು ಸುಲಿಗೆಗೆ ಹೆಗಲು ನೀಡಬೇಡಿ

ಕಾವಿಯುಡುಗರೆಯುಟ್ಟ ಕರಿಯ ಹೆಗ್ಗಣರಿವರು
ಇವರೆದೆಯ ಅಂಗಳದಿ ಪ್ರೀತಿಯಿಲ್ಲ
ಎದೆತೆರೆದ ಹೂವುಗಳ ದನವಾಗಿ ತಿಂದಿಹರು
ಇವರೆದೆಯ ಗುಡಿಯಲ್ಲಿ ದೇವರಿಲ್ಲ

ಶಿವನೊಬ್ಬನೇ ಸತ್ಯ ಸತ್ಯವೊಂದೇ ಶಿವನು
ಈ ಶವದ ಚಟ್ಟಗಳ ಚಲ್ಲಿಬಿಡಿರಿ
ನೀವು ಆತ್ಮನ ದೀಪ ದೇವದೇವನ ದೀಪ
ಈ ಹುಚ್ಚ ಚಿಮಣಿಗಳ ಚಲ್ಲಿಬಿಡಿರಿ


Previous post ಮಕ್ಕಳು
Next post ರಾಮ ರಾಮ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

cheap jordans|wholesale air max|wholesale jordans|wholesale jewelry|wholesale jerseys