Home / ಕವನ / ಕವಿತೆ / ಈ ಹುಚ್ಚ ಚಿಮಣಿಗಳ ಚಲ್ಲಿಬಿಡಿರಿ

ಈ ಹುಚ್ಚ ಚಿಮಣಿಗಳ ಚಲ್ಲಿಬಿಡಿರಿ

ಪಂಚ ಕಳ್ಳರ ತಂದು ಮಂಚದಾ ಮೇಲಿರಿಸಿ
ಈ ಮುಗ್ಧ ಗೋವುಗಳು ಮೆರೆಸಿರುವವು
ಪಂಚ ಪೀಠವ ಕಟ್ಟಿ ಪಂಚ ಪಾಲಕಿ ಕಟ್ಟಿ
ಅಡ್ಡಾಗಿ ಉದ್ದಾಗಿ ಎತ್ತಿರುವವು

ಓ ಮುಗ್ಧ ಸೋದರರೆ ಅತಿಮುಗ್ಧ ಭಾವುಕರೆ
ಈ ಚರ್ಮ ಚೀಲಗಳ ಹೊರುವಿರೇಕೆ
ಆರತಿಯ ತಂದಿರುವ ಓ ಅಕ್ಕ ತಾಯಿಗಳೆ
ಈ ಹೆಣದ ಕುಂಡಗಳ ಪೂಜೆಯೇಕೆ

ಪಾಲಕಿಯ ಹೊತ್ತಿರುವ ಶಿವಭಕ್ತ ಗೋಪುಗಳೆ
ಶಿವನ ಹೆಸರಿಲೆ ಶವದ ಯಾತ್ರೆಯೇಕೆ
ಹೊಗಳಿಕೆಯನುಣಬಂದ ಹಣರಾಶಿ ಬೇಕೆಂದ
ಈ ಪಂಚ ವಂಚಕರ ತೇರುಯೇಕೆ

ತೋರಿಕೆಯ ಯೋಗಿಗಳ ಸೋರಿಕೆಯ ಕಾಮಿಗಳ
ಓ ತಾಯಿ ತಂದೆಗಳ ಸೇರಬೇಡಿ
ಹಾಲು ಕುಡಿಯಲು ಹೋಗಿ ವಿಷವ ಕುಡಿಯಲು ಬೇಡಿ
ಹಗಲು ಸುಲಿಗೆಗೆ ಹೆಗಲು ನೀಡಬೇಡಿ

ಕಾವಿಯುಡುಗರೆಯುಟ್ಟ ಕರಿಯ ಹೆಗ್ಗಣರಿವರು
ಇವರೆದೆಯ ಅಂಗಳದಿ ಪ್ರೀತಿಯಿಲ್ಲ
ಎದೆತೆರೆದ ಹೂವುಗಳ ದನವಾಗಿ ತಿಂದಿಹರು
ಇವರೆದೆಯ ಗುಡಿಯಲ್ಲಿ ದೇವರಿಲ್ಲ

ಶಿವನೊಬ್ಬನೇ ಸತ್ಯ ಸತ್ಯವೊಂದೇ ಶಿವನು
ಈ ಶವದ ಚಟ್ಟಗಳ ಚಲ್ಲಿಬಿಡಿರಿ
ನೀವು ಆತ್ಮನ ದೀಪ ದೇವದೇವನ ದೀಪ
ಈ ಹುಚ್ಚ ಚಿಮಣಿಗಳ ಚಲ್ಲಿಬಿಡಿರಿ


Tagged:

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ