Home / ಕವನ / ಕವಿತೆ / ವಸ್ತು ಪ್ರದರ್ಶನ

ವಸ್ತು ಪ್ರದರ್ಶನ

ವಸ್ತು ಪ್ರದರ್ಶನದಲ್ಲಿ
ಮುಗಿಯುವ ಹಗಲಿನ ತುದಿಗೆ
ಬಣ್ಣದ ಬೆಳಕಿನ ಹೊಳೆ.
ಸಂಜೆ ಹಾಯಾದ ಹೊತ್ತಲ್ಲೂ
ಇಗೊ ಬಂದೆ ಎಂದು
ಬೆದರಿಕೆ ಹಾಕುವ ಮಳೆ.
ಹೊಳಚುವ ಮೀನಿನ ಹಿಂಡು
ಪ್ರಮೀಳೆಯರ ಹಿಂಡು.
ಅವರನ್ನು ಕಣ್ಣಲ್ಲೇ ಉಣ್ಣುತ್ತ
ಬೀದಿಕಾಮಣ್ಣರ ಗಸ್ತು
ಕಾಯುವ ಪೋಲೀಸರೂ ಸುಸ್ತು
ಹೊಳೆಯುತ್ತಿದೆ ಸುತ್ತ
ಥರಾವರಿ ಸ್ಟಾಲುಗಳಲ್ಲಿ
ಚಿಲಿಪಿಲಿ ಬಣ್ಣಗಳಲ್ಲಿ
ನಾನಾ ಥರ ವಸ್ತು

ಬಂದೇ ಬಿಟ್ಟಿತು ನೋಡಿ
ಬೆದರಿಕೆ ಹಾಕಿದ ಮಳೆ-
ಆಕಾಶ ಅಕ್ಷತೆ ಎರಚಿದಂತೆ
ಸಣ್ಣಗೆ ಪನ್ನೀರ ಹನಿಸಿದಂತೆ
ಮಂಜಿನ ಬೆರಳನ್ನು ಯಾರೋ
ಬೆನ್ನಲ್ಲಿ ಆಡಿಸಿದಂತೆ.
ಬಿಡಿಸಿದಂತೆ ಬಾನಲ್ಲಿ
ಬಣ್ಣದ ರಂಗೋಲಿ
ಬಗೆ ಬಗೆ ನಮೂನೆ ಮುಗಿಲು
ಸಂಜೆ ಬೆಳಕಲ್ಲಿ ಮಿಂಚಿದೆ
ಕನಕಾಂಬರಿ ಹಗಲು.

ಹವೆ ತುಂಬ ಹರಡುತ್ತಿದೆ
ಬೆಚ್ಚನೆ ಹಾಯಾದ ಪರಿಮಳ
ಬಿರಿದಿವೆ ಮೂಗಿನ ಹೊಳ್ಳ
ಮುದುಕರ ನಾಲಿಗೆಯಲ್ಲೂ ತಳಮಳ
ಗಾಲಿಗಾಡಿಗಳಲ್ಲಿ
ಟೆಂಟಿನ ಅಂಗಡಿಗಳಲ್ಲಿ
ಕರಿದ ತಿಂಡಿಗಳ ಭಾಂಡ,
ಅಲ್ಲೇ
ಪಳಕ್ಕನೆ ಜಿಗಿಯುತ್ತಿವೆ
ಬಾಣಲಿಯಿಂದ ತಟ್ಟೆಗೆ
ಬಿಸಿ ಬಿಸಿ ಬೊಂಬಾಯ್ ಬೋಂಡ!
ಕಾಫಿ ಟೀ ಕೋಲಾ
ಐಸ್-ಕ್ರೀಮ್ ಪಾಪ್‌ಕಾರನ್ ಜಾಲ,
ಜಗ್ಗಿ ಎಳೆಯುತ್ತಿವೆ ಮಕ್ಕಳು
ಅಮ್ಮಂದಿರ ಸೆರಗನ್ನು
ಗುರಿಸಾಧಿಸಿ ಕಡೆಗೂ
ಅಂಗಡಿಯವನ ಗಾಳ!

ವಸ್ತು ಪ್ರದರ್ಶನ ನೋಡುತ್ತ
ವಸ್ತು ಪ್ರದರ್ಶನ ಮಾಡುವ ಹುಚ್ಚು
ಬಣ್ಣದ ವಸ್ತ್ರ ಒಡವೆ
ತಿದ್ದಿದ ತುಟಿ ಕಣ್ಣು,
ಪ್ರಾಯದ ದಡ ಕುಸಿದಿದ್ದರೂ
ಮೈಮರೆಸುವ ಹೆಣ್ಣು
ಏರು ಪೇರು, ಮಿದುಬದಿ
ಕಿಬ್ಬೊಟ್ಟೆಯ ಜಾರು ;
ಚಲಿಸಿದೆ ಬಣ್ಣದ ಬಾವುಟ
ಬೆಡಗಿನ ತೇರು.

ಮುಗಿಸಿ ಬರುವಾಗ ಪ್ರದರ್ಶನ
ಏನೋ ತಳಮಳ,
ಮುಗಿದೇ ಹೋಯಿತೆ ಸಂಭ್ರಮ ?
ಏನೋ ಕಳವಳ.
ಒದ್ದುಡುತ್ತಿದೆ ಸುಮ್ಮನೆ
ಯಾಕೋ ಚಡಪಡಿಸಿ
ನೀರಾಚೆಗೆ ಎಸೆದ ಮೀನು ಮನಸ್ಸು ವಿಲವಿಲ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...