Home / ಕವನ / ಕವಿತೆ / ವಸ್ತು ಪ್ರದರ್ಶನ

ವಸ್ತು ಪ್ರದರ್ಶನ

ವಸ್ತು ಪ್ರದರ್ಶನದಲ್ಲಿ
ಮುಗಿಯುವ ಹಗಲಿನ ತುದಿಗೆ
ಬಣ್ಣದ ಬೆಳಕಿನ ಹೊಳೆ.
ಸಂಜೆ ಹಾಯಾದ ಹೊತ್ತಲ್ಲೂ
ಇಗೊ ಬಂದೆ ಎಂದು
ಬೆದರಿಕೆ ಹಾಕುವ ಮಳೆ.
ಹೊಳಚುವ ಮೀನಿನ ಹಿಂಡು
ಪ್ರಮೀಳೆಯರ ಹಿಂಡು.
ಅವರನ್ನು ಕಣ್ಣಲ್ಲೇ ಉಣ್ಣುತ್ತ
ಬೀದಿಕಾಮಣ್ಣರ ಗಸ್ತು
ಕಾಯುವ ಪೋಲೀಸರೂ ಸುಸ್ತು
ಹೊಳೆಯುತ್ತಿದೆ ಸುತ್ತ
ಥರಾವರಿ ಸ್ಟಾಲುಗಳಲ್ಲಿ
ಚಿಲಿಪಿಲಿ ಬಣ್ಣಗಳಲ್ಲಿ
ನಾನಾ ಥರ ವಸ್ತು

ಬಂದೇ ಬಿಟ್ಟಿತು ನೋಡಿ
ಬೆದರಿಕೆ ಹಾಕಿದ ಮಳೆ-
ಆಕಾಶ ಅಕ್ಷತೆ ಎರಚಿದಂತೆ
ಸಣ್ಣಗೆ ಪನ್ನೀರ ಹನಿಸಿದಂತೆ
ಮಂಜಿನ ಬೆರಳನ್ನು ಯಾರೋ
ಬೆನ್ನಲ್ಲಿ ಆಡಿಸಿದಂತೆ.
ಬಿಡಿಸಿದಂತೆ ಬಾನಲ್ಲಿ
ಬಣ್ಣದ ರಂಗೋಲಿ
ಬಗೆ ಬಗೆ ನಮೂನೆ ಮುಗಿಲು
ಸಂಜೆ ಬೆಳಕಲ್ಲಿ ಮಿಂಚಿದೆ
ಕನಕಾಂಬರಿ ಹಗಲು.

ಹವೆ ತುಂಬ ಹರಡುತ್ತಿದೆ
ಬೆಚ್ಚನೆ ಹಾಯಾದ ಪರಿಮಳ
ಬಿರಿದಿವೆ ಮೂಗಿನ ಹೊಳ್ಳ
ಮುದುಕರ ನಾಲಿಗೆಯಲ್ಲೂ ತಳಮಳ
ಗಾಲಿಗಾಡಿಗಳಲ್ಲಿ
ಟೆಂಟಿನ ಅಂಗಡಿಗಳಲ್ಲಿ
ಕರಿದ ತಿಂಡಿಗಳ ಭಾಂಡ,
ಅಲ್ಲೇ
ಪಳಕ್ಕನೆ ಜಿಗಿಯುತ್ತಿವೆ
ಬಾಣಲಿಯಿಂದ ತಟ್ಟೆಗೆ
ಬಿಸಿ ಬಿಸಿ ಬೊಂಬಾಯ್ ಬೋಂಡ!
ಕಾಫಿ ಟೀ ಕೋಲಾ
ಐಸ್-ಕ್ರೀಮ್ ಪಾಪ್‌ಕಾರನ್ ಜಾಲ,
ಜಗ್ಗಿ ಎಳೆಯುತ್ತಿವೆ ಮಕ್ಕಳು
ಅಮ್ಮಂದಿರ ಸೆರಗನ್ನು
ಗುರಿಸಾಧಿಸಿ ಕಡೆಗೂ
ಅಂಗಡಿಯವನ ಗಾಳ!

ವಸ್ತು ಪ್ರದರ್ಶನ ನೋಡುತ್ತ
ವಸ್ತು ಪ್ರದರ್ಶನ ಮಾಡುವ ಹುಚ್ಚು
ಬಣ್ಣದ ವಸ್ತ್ರ ಒಡವೆ
ತಿದ್ದಿದ ತುಟಿ ಕಣ್ಣು,
ಪ್ರಾಯದ ದಡ ಕುಸಿದಿದ್ದರೂ
ಮೈಮರೆಸುವ ಹೆಣ್ಣು
ಏರು ಪೇರು, ಮಿದುಬದಿ
ಕಿಬ್ಬೊಟ್ಟೆಯ ಜಾರು ;
ಚಲಿಸಿದೆ ಬಣ್ಣದ ಬಾವುಟ
ಬೆಡಗಿನ ತೇರು.

ಮುಗಿಸಿ ಬರುವಾಗ ಪ್ರದರ್ಶನ
ಏನೋ ತಳಮಳ,
ಮುಗಿದೇ ಹೋಯಿತೆ ಸಂಭ್ರಮ ?
ಏನೋ ಕಳವಳ.
ಒದ್ದುಡುತ್ತಿದೆ ಸುಮ್ಮನೆ
ಯಾಕೋ ಚಡಪಡಿಸಿ
ನೀರಾಚೆಗೆ ಎಸೆದ ಮೀನು ಮನಸ್ಸು ವಿಲವಿಲ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...