Home / ಕವನ / ಕವಿತೆ / ವಸ್ತು ಪ್ರದರ್ಶನ

ವಸ್ತು ಪ್ರದರ್ಶನ

ವಸ್ತು ಪ್ರದರ್ಶನದಲ್ಲಿ
ಮುಗಿಯುವ ಹಗಲಿನ ತುದಿಗೆ
ಬಣ್ಣದ ಬೆಳಕಿನ ಹೊಳೆ.
ಸಂಜೆ ಹಾಯಾದ ಹೊತ್ತಲ್ಲೂ
ಇಗೊ ಬಂದೆ ಎಂದು
ಬೆದರಿಕೆ ಹಾಕುವ ಮಳೆ.
ಹೊಳಚುವ ಮೀನಿನ ಹಿಂಡು
ಪ್ರಮೀಳೆಯರ ಹಿಂಡು.
ಅವರನ್ನು ಕಣ್ಣಲ್ಲೇ ಉಣ್ಣುತ್ತ
ಬೀದಿಕಾಮಣ್ಣರ ಗಸ್ತು
ಕಾಯುವ ಪೋಲೀಸರೂ ಸುಸ್ತು
ಹೊಳೆಯುತ್ತಿದೆ ಸುತ್ತ
ಥರಾವರಿ ಸ್ಟಾಲುಗಳಲ್ಲಿ
ಚಿಲಿಪಿಲಿ ಬಣ್ಣಗಳಲ್ಲಿ
ನಾನಾ ಥರ ವಸ್ತು

ಬಂದೇ ಬಿಟ್ಟಿತು ನೋಡಿ
ಬೆದರಿಕೆ ಹಾಕಿದ ಮಳೆ-
ಆಕಾಶ ಅಕ್ಷತೆ ಎರಚಿದಂತೆ
ಸಣ್ಣಗೆ ಪನ್ನೀರ ಹನಿಸಿದಂತೆ
ಮಂಜಿನ ಬೆರಳನ್ನು ಯಾರೋ
ಬೆನ್ನಲ್ಲಿ ಆಡಿಸಿದಂತೆ.
ಬಿಡಿಸಿದಂತೆ ಬಾನಲ್ಲಿ
ಬಣ್ಣದ ರಂಗೋಲಿ
ಬಗೆ ಬಗೆ ನಮೂನೆ ಮುಗಿಲು
ಸಂಜೆ ಬೆಳಕಲ್ಲಿ ಮಿಂಚಿದೆ
ಕನಕಾಂಬರಿ ಹಗಲು.

ಹವೆ ತುಂಬ ಹರಡುತ್ತಿದೆ
ಬೆಚ್ಚನೆ ಹಾಯಾದ ಪರಿಮಳ
ಬಿರಿದಿವೆ ಮೂಗಿನ ಹೊಳ್ಳ
ಮುದುಕರ ನಾಲಿಗೆಯಲ್ಲೂ ತಳಮಳ
ಗಾಲಿಗಾಡಿಗಳಲ್ಲಿ
ಟೆಂಟಿನ ಅಂಗಡಿಗಳಲ್ಲಿ
ಕರಿದ ತಿಂಡಿಗಳ ಭಾಂಡ,
ಅಲ್ಲೇ
ಪಳಕ್ಕನೆ ಜಿಗಿಯುತ್ತಿವೆ
ಬಾಣಲಿಯಿಂದ ತಟ್ಟೆಗೆ
ಬಿಸಿ ಬಿಸಿ ಬೊಂಬಾಯ್ ಬೋಂಡ!
ಕಾಫಿ ಟೀ ಕೋಲಾ
ಐಸ್-ಕ್ರೀಮ್ ಪಾಪ್‌ಕಾರನ್ ಜಾಲ,
ಜಗ್ಗಿ ಎಳೆಯುತ್ತಿವೆ ಮಕ್ಕಳು
ಅಮ್ಮಂದಿರ ಸೆರಗನ್ನು
ಗುರಿಸಾಧಿಸಿ ಕಡೆಗೂ
ಅಂಗಡಿಯವನ ಗಾಳ!

ವಸ್ತು ಪ್ರದರ್ಶನ ನೋಡುತ್ತ
ವಸ್ತು ಪ್ರದರ್ಶನ ಮಾಡುವ ಹುಚ್ಚು
ಬಣ್ಣದ ವಸ್ತ್ರ ಒಡವೆ
ತಿದ್ದಿದ ತುಟಿ ಕಣ್ಣು,
ಪ್ರಾಯದ ದಡ ಕುಸಿದಿದ್ದರೂ
ಮೈಮರೆಸುವ ಹೆಣ್ಣು
ಏರು ಪೇರು, ಮಿದುಬದಿ
ಕಿಬ್ಬೊಟ್ಟೆಯ ಜಾರು ;
ಚಲಿಸಿದೆ ಬಣ್ಣದ ಬಾವುಟ
ಬೆಡಗಿನ ತೇರು.

ಮುಗಿಸಿ ಬರುವಾಗ ಪ್ರದರ್ಶನ
ಏನೋ ತಳಮಳ,
ಮುಗಿದೇ ಹೋಯಿತೆ ಸಂಭ್ರಮ ?
ಏನೋ ಕಳವಳ.
ಒದ್ದುಡುತ್ತಿದೆ ಸುಮ್ಮನೆ
ಯಾಕೋ ಚಡಪಡಿಸಿ
ನೀರಾಚೆಗೆ ಎಸೆದ ಮೀನು ಮನಸ್ಸು ವಿಲವಿಲ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...