Home / ಕವನ / ಕವಿತೆ / ಸಹಜವಾಗಿದ್ದದ್ದು ಸರಿಯಾಗೂ ಇದ್ದೀತು

ಸಹಜವಾಗಿದ್ದದ್ದು ಸರಿಯಾಗೂ ಇದ್ದೀತು

ಹೂ ಬಿಡುತ್ತದೆ ಹಣ್ಣುಕೊಡುತ್ತದೆ
ಸಸ್ಯಶಾಸ್ತ್ರ ಓದದೆಯೇ ಮರ;
ಮೊಟ್ಟೆಯಿಡುತ್ತದೆ ಮರಿ ಮಾಡುತ್ತದೆ
ಜೀವಶಾಸ್ತ್ರ ಓದದೆಯೇ ಖಗ
ವ್ಯಾಕರಣ ಯಾಕೆ, ಅಲಂಕಾರ ಬೇಕೆ
ಮಾತಿನ ಮರ್ಮ ಬಲ್ಲ ವಾಗ್ಮಿಗೆ ?
ವಾತ್ಸ್ಯಾಯನನ ಸೂತ್ರ ಪಾಠವಾಗಿರಬೇಕೆ
ನಲ್ಲೆಗೆ ಬೇಯುತ್ತಿರುವ ಪ್ರೇಮಿಗೆ ?

ಫಲಿಸುವ ಮರಕ್ಕೆ ಬೇಲಿ ಯಾತಕ್ಕೆ ?
ಸಾಕು ಬೀಜದ ಪುಣ್ಯ;
ಬೆಳಕಿಗೆ, ಮಳೆಗೆ, ಬಿಸಿಲಿಗೆ
ಎಲ್ಲಿದೆ ಯಾರ ದಾಕ್ಷಿಣ್ಯ ?
ಬಾಟಲಿಯ ಹಂಗು ಯಾಕೆ ಮಗುವಿಗೆ ?
ಉಕ್ಕುತ್ತಿದೆ ಧಾರೆ ತಾಯ ಎದೆಯಿಂದ;
ಲಕ್ಷ್ಯವೆ ಪಂಡಿತನ ಅಂಕೆ ? ಅವನನ್ನೇ
ಶಿಕ್ಷಿಸುತ್ತದೆ ಪ್ರತಿಭೆ ಹೊಸ ಚಲನೆಗಳಿಂದ.

ತಪ್ಪಿಲ್ಲ ಕಟ್ಟಾದರೆ ಕೂದಲು
ಕ್ರಾಪ್, ಬಾಬ್, ಕುಣಿಯುವ ಪೋನೀಟೈಲಾಗಿ,
ಬಾಧಕವೇನಲ್ಲ ಚಿನ್ನದ ಡಾಬು,
ತಬ್ಬಿದ್ದರೆ ಹೂಸೊಂಟವನ್ನ ಹಗುರಾಗಿ,
ಕಿವಿಗೆ ಲೋಲಕ್, ಹಣೆಗೆ ತಿಲಕ,
ಶೃಂಖಲೆಯಲ್ಲ ಕೈಗೆ ಬಳೆ, ಅಲಂಕಾರ ಮಾತ್ರ.
ಸಹಜವಾಗಿದ್ದದ್ದು ಸರಿಯಾಗೂ ಇದ್ದೀತು,
ತಾನೇ ನಿರ್ಮಿಸಿಕೊಂಡಂತೆ ನದಿ ಪಾತ್ರ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...