ನವವಸಂತ

ದಾವಾನಲ ಧಾರಿಣಿ ಜಲ ಆಗಸ ಅನಿಲದಲಿ,
ಮಾಯದ ಗಾಯದ ಮಣ್ಣಿನ ಕಾಯದ ಹಂಗಿನಲಿ,
ಸಾರದ ಸೇರದ ಎಂದೂ ಆರದ ಘನತರಣಿ,
ಇರುಳಾಳುವ ಮನದಾಳಕೆ ಸುರಿ ಕಿರಣವ ಕರುಣಿ.

ಎದೆಯಾಳದಿ ಎವೆತೆರೆದಿವೆ ಗತಭವಗಳು ಹೊರಳಿ,
ಎಂದಿನ ಸ್ಮರಣೆಯ ಅರಣಿಯೊ ಹೊಗೆಯಾಡಿದೆ ನರಳಿ,
ಮೇಲೀಳುವ ಬಿಳಿಧೂಮದ ಜಾಲದ ಬಂಧದಲಿ
ಎಡವಿದೆ ಮತಿ, ವಾದದ ಗತಿ ಸುಳಿಬಿಚ್ಚಿದೆ ಕದಳಿ.

ಗಿರಿಹುತ್ತದ ತುದಿಗೆತ್ತಿದೆ ದಿಙ್ನಾಗರ ಭೋಗ
ಸೆಳೆಯುತ್ತಿದೆ ಅಳೆಯುತ್ತಿದೆ ಅನುರಾಗದ ಅಳ,
ಕರೆಯುತ್ತಿದೆ ಬಾರೇ ಬಾ ನೀರೇ ನಿಧಿ ಸಾರೇ
ಇಡಿಚಿತ್ತದ ಮಧುಭಾಂಡದಿ ಏನೇನಿದೆ ತಾರೇ.

ಗಣಿಯಾಳದ ಜಲ ಮೇಲಕೆ ಜುಳು ಜುಳು ಜುಳು ಹರಿದು
ಯೋಗದ ಕಡಲಿಗೆ ಎಚ್ಚರ ನಿದ್ದೆಯ ತೊರೆ ಹರಿದು,
ಸಾಗುವ ಡೊಂಕಿನಲಾಗಲಿ ತೂಗಾಟದ ರಾಗ
ಹಾಲಿನ ಹರವಿಯ ಸಿಡಿಸುವ ಬೃಂದಾವನಭೋಗ.

ಮಾಗಿಯ ರಾತ್ರಿಯ ಮಂಜಿನ ಮಬ್ಬಿನ ತೆರೆ ಸರಿದು
ಕಾಣದ ನಿಜವಿಶ್ವದ ಹೊಸ ದರ್ಶನಗಳು ತೆರೆದು
ಸಾವಿರದಾ ನವವಸಂತ ಮಾವಿನ ಹರೆಯೇರಿ
ಕೂಗುವ ಕೋಗಿಲೆಯಾಗಲಿ ಜೀವವು ತೃಷೆಯಾರಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೧೭
Next post ನೀಲ ಮುಗಿಲಿನ ಮಾವ!

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys