Home / ಕವನ / ಕವಿತೆ / ಅಖಿಟೋಪ

ಅಖಿಟೋಪ

ಮೆಸಪೊಟೇಮಿಯಾದ ಒಬ್ಬ ರಾಜ
ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿಯಬೇಕೆಂದು
ಕೆತ್ತಿಸಿದ ತನ್ನ ಹೆಸರನ್ನು
ಹೆಸರು ಅಖಿಟೋಪನೆಂದು
ಹೆಬ್ಬಂಡೆಗಳ ಮೇಲೆ
ಮೃತ್ತಿಕೆಗಳ ಮೇಲೆ
ಮರದ ಕಾಂಡಗಳ ಮೇಲೆ
ಬರೆಸಿದ ಪಠ್ಯ ಪುಸ್ತಕಗಳಲ್ಲಿ
ಸೇರಿಸಿದ ಧರ್ಮಗ್ರ೦ಥಗಳಲ್ಲಿ
ಪೂಜಾರಿಗಳ ಮಂತ್ರಗಳಲ್ಲಿ
ಎಲ್ಲೆಲ್ಲು ಅಖಿಟೋಪ ಅಖಿಟೋಪ
ಎಷ್ಟೆಂದರವನ ಕೋಪ
ಕುದುರೆಗಳು ಕೆನೆಯುವುದೂ
ಕಪ್ಪೆಗಳು ವಟಗುಟ್ಟುವುದೂ
ಆದವು ಅಖಿಟೋಪ
ಅಖಿಟೋಪನೆಂದರ ಅಂದಿನ ಭಾಷೆಯಲ್ಲಿ
ಅನೇಕ ಸೂರ್ಯರ ತಾಪ-
ವೆಂದು ಅರ್ಥ

ಆದರೆ ಮೊಂಗೋಲರೆಂಬವರು
ಮಹಾ ನಿರ್ದಯರು
ಅವರು ಮಾಂಸ ಬೇಯಿಸದೆ ತಿನ್ನುತ್ತಿದ್ದರು
ಕಳ್ಳಿನ ಭಾಂಡಿ ಕುಡಿಯುತ್ತಿದ್ದರು
ಕುಡಿದು ಢರ್ರನೆ ತೇಗುತಿದ್ದರು
ದೊಡ್ಡದಾಗಿ ನಗುತಿದ್ದರು
ಅವರು ಚೀನಾ ದೇಶದಿಂದ
ಸಿಡಿಮದ್ದನ್ನು ತಂದರು
ಕುದುರೆಗಳ ಮೇಲೆ ಬಂದರು

ಸಂತೆಗೆಂದು ಹೋದ ದೋಣಿಗಳು
ಸಂಜೆಯಾದರೂ ಮರಳಲಿಲ್ಲ
ನಗರದ ಬಾಗಿಲುಗಳು
ಹೊತ್ತಿಗೆ ಮೊದಲೇ ಮುಚ್ಚಿದುವು
ದೀಪಗಳೂ ಆರಿದುವು
ಯಾವಾಗಲೂ ಹಾಡುತಿದ್ದವರು
ಯಾಕೆ ಹಾಡಲಿಲ್ಲ?
ಮತ್ತೆ ಬೆಳಗಾಯಿತು?
ವರ್ಷಗಳು ಉರುಳಿದುವೆ?
ಯಾರಾದರೂ ಸುದ್ದಿಯನು ತಂದರೆ?
ಮೆಸಪೊಟೇಮಿಯಾ!
ಹರಿವ ನೀರಿನಲಿ
ಕೆತ್ತಿರುವುದೆ ಚರಿತ್ರೆ?
ಹೇಳೀಗ ನಮ್ಮ ಮೆಚ್ಚಿನ ಅಖಿಟೋಪನೆಲ್ಲಿ?
ಎಲ್ಲಿ ಆ ಮಂತ್ರಗಳು
ಹೆಸರು ಬರೆಸಿದ ಗ್ರಂಥಗಳು
ಎಲ್ಲಿ ಕುದುರೆಗಳು ಎಲ್ಲಿ ಕಪ್ಪೆಗಳು
ಎಲ್ಲಿ ಆ ಹೆಬ್ಬಂಡೆ
ಸಿಡಿದ ನದಿ ದಂಡೆ
ಅನೇಕ ಸೂರ್ಯರ ತಾಪ
ಅಖಿಟೋಪ
ಯಾವ ಸಮುದ್ರದಲಿ ಬಿದ್ದ
ಹೇಳು ಮೆಸಪೊಟೇಮಿಯಾ
ಅಂಥ ಪತನಕ್ಕೆ
ಇಂಥ ಸಾಲುಗಳು ಸಾಕೆ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...