ಅರಿವು

ಮೋಹ ಮದ ಮತ್ಸರತುಂಬಿ
ಹೂಂಕರಿಸಿದ ಮನುಷ್ಯ
ವಯಸಾದಂತೆ ಸುಸ್ತಾಗಿ
ಮೋಡಕಾ ಬಜಾರದಂಗಡಿಗೆ ಬಂದು ಬೀಳುತ್ತಾನೆ.
ಕೊಳ್ಳುವವರು ಯಾರೂ ಇಲ್ಲ
ಜಂಗು ಹತ್ತಿ ಕಾಲ್ತುಳಿತಕೆ ಒಳಗಾಗಿ
ಕತ್ತಲು ಕೋಣೆ ಸೇರುವ ದುಃಖ.

ದೂರದೆಲ್ಲಿಂದಲೋ ದಯಾಮಯಿಗಳ
ಮೃದುಮಾತು, ಕೊಳ್ಳುವಿಕೆ
ಆಶ್ರಯದಾತರ ಪ್ರೀತಿ ಕರುಣಾಳು
ಕ್ಷಮಿಸಿತ್ತು.
ತಪ್ಪೊಪ್ಪಿಗೆಯ ಅವರವರ ಅಂತರಂಗಕೆ
ಹೊತ್ತಿತು ಬೆಳಕಿನ ಕಿರಣ.

ಮೋಡಕಾ ಬಜಾರದಂಗಡಿಗಳು ಮುಚ್ಚಿ
ವೃದ್ಧಾಶ್ರಮದ ಬಾಗಿಲು ತೆರೆದು
ಒಳಹೊಗುವಾಗ ಕಣ್ತುಂಬ ತಿಳಿನೀರು
ತುಳುಕಗೊಡದೇ ಅದರೊಳಗೇ
ತನ್ನ ತಾ ಪ್ರತಿಫಲಿಸಿಕೊಂಡ ಅರಿವು
ಅನಂತದೆಡೆಗೆ ಕಣ್ಮುಚ್ಚುವ
ಪ್ರಶಾಂತತೆಯ ಚಿತ್ರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಶ್ವಲೀಲೆ
Next post ಒಂದೇ ‘ವರ’

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys