ಮೌನದಲಿ

ಮೌನದಲಿ ಮರ ಕಂಪಿಸಿ
ಒಡಲೊಳು ಜೀವಿಗಳು ಝಲ್ಲನೆ
ಮುಲುಕಾಡಿ ಮರು ಮುಂಜಾನೆ
ಯಾವ ಹಂಗಿಲ್ಲದೇ ಚಿಗಿರಿದ ಹಸಿರು

ಮೌನದಲಿ ಮಾತುಗಳು ಸುಮ್ಮನೆ
ಒಂದಕ್ಕೊಂದು ಡಿಕ್ಕೀ ಹೊಡೆದುಕೊಂಡು
ಮೆಲ್ಲನೆ ಚಲಿಸಿದ ಭಾವ ಒಡಲು
ಗರ್ಭದ ಕತ್ತಲೆ ರಾತ್ರಿ ಕನಸುಗಳರಳಿದವು.

ಮೌನದಲಿ ಹಂಗಿಲ್ಲದೇ ಅಕ್ಷರಗಳು
ಒಂದು ಗೂಡಿದವು ತವಾಗಿ ಸುಮ್ಮನೆ
ಅಲಂಕಾರದ ಕಿಟಕಿಯಲಿ ಚಂದಿರ
ಹರಡಿದ ಬೆಳದಿಂಗಳು ಕವಿತೆಗಳಾದವು.

ಮೌನದಲಿ ಒಲವಿನ ಹಾಡು
ಸುಮ್ಮನೆ ಗುನುಗುಟ್ಟಿದವು.
ಸಂತರ ಪಾಡು ಬಯಲಲಿ ಹರಡಿ
ಗಾಳಿಗಂಧ ಸುಳಿದು ಭಜನೆಗಳಾದವು.

ಮೌನದಲಿ ಆಳ ನಾಭಿಯ
ಭಿತ್ತಿಯಲಿ ಹುಟ್ಟು ಪಟ್ಟು
ಪಾಡಾಗಿ ಒಮ್ಮೆಲೇ ಮುಳುಗಿದ ನಾವೆ
ದಟ್ಟವಾಯ್ತು ಪ್ರತಿಯೊಬ್ಬರ ಸಾವಿರ ವಾಸನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಓ ತಾಯಿ!
Next post ಅಮರ‘ಶಿಲ್ಪಿ’

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

cheap jordans|wholesale air max|wholesale jordans|wholesale jewelry|wholesale jerseys