ಚೈತ್ರ

ಹನಿ ಹನಿ ಬೆವರಿಳಿದ ಹನಿ
ಮನಸ್ಸು ಅಂವ ಹೊರಟಿದ್ದಾನೆ
ಸುಡು ಬಿಸಿಲಿನಲಿ ತುಸುವೇ ದೂರ.
ಯಾರೋ ದುಂಬಾಲು ಬಿದ್ದು
ಬೆನ್ನಟ್ಟಿದವರ ಹಾಗೆ ನಡು ಮಧ್ಯಾಹ್ನದಲಿ.

ಟ್ರಕ್‌ಗಳು ಬಸ್ಸುಗಳು ದಾರಿಯಲಿ
ಹಾಯ್ದು ಹೋಗುತ್ತವೆ ಬಿಸಿಲು ಗುದುರೆಯ
ತಿಳಿ ತಿಳಿ ಜಲದ ಬಿಂಬದಲಿ ಯಾವುದೋ
ಊರು ಯಾರೋ ಸಂಬಂಧಿಕರ ನೆನಪಿನಲಿ,
ಸೂರ್ಯನ ಯಾತ್ರೆ ಸಾಗಿದೆ ದಾರಿಗುಂಟ.

ಸೀಮೆಎಣ್ಣೆ ಹಾಕಿ ಹತ್ತಿಸಿದ
ಒಲೆಯ ಮೇಲೆ ಕಾದ ಹಂಚಿನಲಿ,
ಸೂರ್ಯ ತೆಳು ತೆಳು ರೊಟ್ಟಿಯಾಗಿ
ಮೇಲೇಳುತ್ತಿದ್ದಾಳೆ ಅವ್ವ ಬೆನ್ನಗುಂಟ ಇಳಿದ
ಬೆವರ ಸ್ನಾನ ಎದೆಯ ಬದುವನ್ನೆಲ್ಲಾ ತೋಯಿಸಿದೆ.

ಬಿಸಿ ಕಿರಣಗಳು ಮೈ ಸವರುತ್ತವೆ.
ಒಳಗೂ ಹೊರಗೂ ಅತ್ತ ಇತ್ತ ಕಾಲದ ಚಲನೆ.
ಜೀವನ ಹರಿದು ಮೋಡಗಳ ಗುರಾಣೆ ಹಿಡಿದ ಸೂರ್ಯ,
ಪ್ರತಿಶಬ್ದಗಳ ಸಾಲುಗಳಿಗೆ ಸರಿದ ಕವಿತೆ,
ಭಾಷೆಯ ಸೆಳವಿನಲಿ ಅರಳಿದ ಗುಲ್‌ಮೋಹರ್‍,
ಯಾವ ಗುಟ್ಟೂ ರಟ್ಟು ಮಾಡಿಲ್ಲ ಗಿಡಮರಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೭೦
Next post ಮಾನಸ ವೀಣ

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys