Home / ಕವನ / ಕವಿತೆ / ಚೈತ್ರ

ಚೈತ್ರ

ಹನಿ ಹನಿ ಬೆವರಿಳಿದ ಹನಿ
ಮನಸ್ಸು ಅಂವ ಹೊರಟಿದ್ದಾನೆ
ಸುಡು ಬಿಸಿಲಿನಲಿ ತುಸುವೇ ದೂರ.
ಯಾರೋ ದುಂಬಾಲು ಬಿದ್ದು
ಬೆನ್ನಟ್ಟಿದವರ ಹಾಗೆ ನಡು ಮಧ್ಯಾಹ್ನದಲಿ.

ಟ್ರಕ್‌ಗಳು ಬಸ್ಸುಗಳು ದಾರಿಯಲಿ
ಹಾಯ್ದು ಹೋಗುತ್ತವೆ ಬಿಸಿಲು ಗುದುರೆಯ
ತಿಳಿ ತಿಳಿ ಜಲದ ಬಿಂಬದಲಿ ಯಾವುದೋ
ಊರು ಯಾರೋ ಸಂಬಂಧಿಕರ ನೆನಪಿನಲಿ,
ಸೂರ್ಯನ ಯಾತ್ರೆ ಸಾಗಿದೆ ದಾರಿಗುಂಟ.

ಸೀಮೆಎಣ್ಣೆ ಹಾಕಿ ಹತ್ತಿಸಿದ
ಒಲೆಯ ಮೇಲೆ ಕಾದ ಹಂಚಿನಲಿ,
ಸೂರ್ಯ ತೆಳು ತೆಳು ರೊಟ್ಟಿಯಾಗಿ
ಮೇಲೇಳುತ್ತಿದ್ದಾಳೆ ಅವ್ವ ಬೆನ್ನಗುಂಟ ಇಳಿದ
ಬೆವರ ಸ್ನಾನ ಎದೆಯ ಬದುವನ್ನೆಲ್ಲಾ ತೋಯಿಸಿದೆ.

ಬಿಸಿ ಕಿರಣಗಳು ಮೈ ಸವರುತ್ತವೆ.
ಒಳಗೂ ಹೊರಗೂ ಅತ್ತ ಇತ್ತ ಕಾಲದ ಚಲನೆ.
ಜೀವನ ಹರಿದು ಮೋಡಗಳ ಗುರಾಣೆ ಹಿಡಿದ ಸೂರ್ಯ,
ಪ್ರತಿಶಬ್ದಗಳ ಸಾಲುಗಳಿಗೆ ಸರಿದ ಕವಿತೆ,
ಭಾಷೆಯ ಸೆಳವಿನಲಿ ಅರಳಿದ ಗುಲ್‌ಮೋಹರ್‍,
ಯಾವ ಗುಟ್ಟೂ ರಟ್ಟು ಮಾಡಿಲ್ಲ ಗಿಡಮರಗಳು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...