ಕಟ್ಟು ಆತ್ಮದ ಓಂ ಮಠಾ

ಮುಗಿಲ ಯೋಗದ ಗಾನ ಹೂಗಳು
ಜ್ಯೋತಿ ಚಿಮ್ಮುತ ಸುರಿಯಲಿ
ಆತ್ಮ ಪರ್ವತ ಶಾಂತಿ ಹೊಳೆಗಳು
ಕಲ್ಲು ನೆಲದಲಿ ಹರಿಯಲಿ

ಮಣ್ಣು ನೆನೆಯಲಿ ಬೆಣ್ಣೆಯಾಗಲಿ
ಕಲ್ಲು ಮಲ್ಲಿಗೆಯಾಗಲಿ
ಮುಳ್ಳು ಬೇಲಿಗೆ ತಾಯಿ ಚುಂಬಿಸಿ
ಭುವನ ಲಿಂಗವ ಮಾಡಲಿ

ಮುಗಿಲು ಮುಗಿಲಿಗೆ ಶೂನ್ಯ ಶೂನ್ಯಕೆ
ಆತ್ಮ ಮಂಚವು ಜೀಕಲಿ
ತೊಗಲ ಹಲಿಗೆಯು ಮಂತ್ರವಾಗಲಿ
ಶಿವನ ಡಂಗುರ ಡಮಿಸಲಿ

ತಾಯಿ ಬಂದಳು ತುಂಬಿ ನಿಂದಳು
ಪೂರ್ಣ ಕುಂಕುಮ ದೇವತೆ
ಭುವನ ದೇವತೆ ಶಿವನೆ ಮಾತೆಯು
ವಿಶ್ವಶಂಕರ ಪೂರ್ಣತೆ

ನೋಡು ಕಳವಳ ಕಾಣು ಉಪಟಳ
ಭುವನ ಹಸಿದಿದೆ ಉತ್ಕಟಾ
ದೇಹ ಕೆಟ್ಟಿದೆ ಆತ್ಮ ಸುಟ್ಟಿದೆ
ಕಟ್ಟು ಆತ್ಮದ ಓಂ ಮಠಾ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಖಗಳು
Next post ವರ್ಗಿನೋರು

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಜಂಬದ ಕೋಳಿ

    ಪ್ರಕರಣ ೩ ಜನಾರ್ದನ ಪುರದ ಹಳೆಯ ಇನ್ಸ್‍ಪೆಕ್ಟರಿಗೆ ಮೇಷ್ಟರುಗಳೆಲ್ಲ ಬೀಳ್ಕೊಡುವ ಔತಣವನ್ನು ಏರ್ಪಾಟು ಮಾಡಿದ್ದಾರೆ. ಹಳೆಯ ಇನ್‍ಸ್ಪೆಕ್ಟರು ಒಂದು ಸಾಮಾನ್ಯ ಪಂಚೆಯನ್ನು ಉಟ್ಟು ಕೊಂಡು, ಒಂದು ಚೆಕ್ಕು… Read more…