Home / ಕವನ / ಕವಿತೆ / ತೋರಣ ಕಟ್ಟೋಣ!

ತೋರಣ ಕಟ್ಟೋಣ!

ಹಬ್ಬ ಬಂತು, ಓ ಹಬ್ಬ! ಕೆಳೆಯರೇ,
ತೋರಣ ಕಟ್ಟೋಣ!
ಹಬ್ಬ ಹಬ್ಬಕೂ ಮನೆಯ ಬಾಗಿಲಿಗೆ
ತೋರಣ ಕಟ್ಟೋಣ!

ಮಾವಿನ ತೋಪಿಗೆ ಬನ್ನಿರಿ, ಕೆಳೆಯರೆ,
ತೋರಣ ಕಟ್ಟೋಣ;
ಬೆಳಗಿನ ಜಾವ ಮುಗಿಯುವ ಮುನ್ನ
ತೋರಣ ಕಟ್ಟೋಣ!

ಚುಕ್ಕಿಯಾಗಸದೆ ಮಾಸುವ ಮುನ್ನ
ತೋರಣ ಕಟ್ಟೋಣ;
ಹಕ್ಕಿ ಗೂಡಿನಲಿ ಎಚ್ಚರುವ ವೇಳೆ
ತೋರಣ ಕಟ್ಟೋಣ!

ಕೆಂಪು ಮೂಡಲಲಿ ಹುಟ್ಟುವ ಹೊತ್ತಿಗೆ
ತೋರಣ ಕಟ್ಟೋಣ;
ತಂಪು ಹೊತ್ತಿನಲೆ ಸೊಂಪು ತಳಿರಿನ
ತೋರಣ ಕಟ್ಟೋಣ!

ಎಲ್ಲರೊಂದಾಗಿ ಉಲ್ಲಸದಿಂದ
ತೋರಣ ಕಟ್ಟೋಣ;
ನಲ್ಲ ನಲ್ಲೆಯರು ಏಳುವ ಮೊದಲೆ
ತೋರಣ ಕಟ್ಟೋಣ!

ಅಕ್ಕ ರಂಗೋಲಿಯಿಕ್ಕುವ ಮೊದಲೆ
ತೋರಣ ಕಟ್ಟೋಣ;
ಚಿಕ್ಕ ಮಕ್ಕಳೇಳುವ ಹೊತ್ತಿಗೆ ಹೊಸ
ತೋರಣ ಕಟ್ಟೋಣ!

ಸುಂದರಾಂಗಿಯರ ಚೆಂದದ ಹಬ್ಬಕೆ
ತೋರಣ ಕಟ್ಟೋಣ;
ನಂದಗೋಕುಲವ ಹೋಲುವ ಮನೆಗೆ
ತೋರಣ ಕಟ್ಟೋಣ!

ದೇವ ದೇವನಾನಂದದ ಹಬ್ಬಕೆ
ತೋರಣ ಕಟ್ಟೋಣ;
ಪಾವನಮೂರ್ತಿ ಮನೆಗೆ ಬರುವನು
ತೋರಣ ಕಟ್ಟೋಣ!

ಹೊಸತು ಹಬ್ಬವಿದೊ ಕನ್ನಡ ಹಬ್ಬಕೆ
ತೋರಣ ಕಟ್ಟೋಣ!
ಒಸಗೆಯಾಗಲಿದೆ ನಾಡು ನಾಡಿಗೇ
ತೋರಣ ಕಟ್ಟೋಣ!

ಸಾಲು ಹಬ್ಬದಲಿ ಸಾಲು ಸಾಲಾಗಿ
ತೋರಣ ಕಟ್ಟೋಣ;
ಸಾಲ ಸೋಲಗಳು ಇದ್ದರೆ ಇರಲಿ
ತೋರಣ ಕಟ್ಟೋಣ!

ಪಂಚ ಭಕ್ಷ್ಯ ಇಲ್ಲಾ ಎನಲೇತಕೆ?
ತೋರಣ ಕಟ್ಟೋಣ!
ವಂಚನೆಯಿಲ್ಲದ ಬದುಕಿನ ಹಬ್ಬಕೆ
ತೋರಣ ಕಟ್ಟೋಣ!

ಮನೋಮಂದಿರಕೆ ನಿಚ್ಚ ಹಸುರಿನಾ
ತೋರಣ ಕಟ್ಟೋಣ!
ಹೃದಯ ಕಲಶದಾ ಮುಂಗಡೆ ಹರುಷದ
ತೋರಣ ಕಟ್ಟೋಣ!

ಬಂದಿತು ಬಿಡುಗಡೆ! ಬಿಡುಗಡೆ ಹಬ್ಬಕೆ
ತೋರಣ ಕಟ್ಟೋಣ!
ನಾಡು ನಗುತಿರಲಿ! ಅಶೋಕನ ತಳಿರಿನ
ತೋರಣ ಕಟ್ಟೋಣ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...