ನಂಬಿಕೆ

ಇಲ್ಲಿ ಹರಿಹರರ ಪರದಾಟ
ಇಂದ್ರಾದಿಗಳ ಬಯಲಾಟ
ಬಂಡಾಟಗಳು ನಡೆಯುತ್ತಿವೆ
ಹಳಸಿ ಹಿಸಿದ ದಾರಗಳ ಸುತ್ತಿಕೊಂಡು
ಕಪ್ಪೆ ವಟಗುಟ್ಟುತ್ತಿವೆ
ನರಿತಂತ್ರ ಮಂತ್ರಿಸುತಿವೆ
ಟ್ರೇಡು ಮಾರ್ಕುಗಳ ಬಳಿದ
ಬಕಧ್ಯಾನ ಸಾಗಿದೆ ಮೀನ ಮಂದೆ ಮುಂದೆ
ಮಡಿ ಮಾಡಿ ಮಾಡಿ ಮೈ ಜಿಡ್ಡುಗಟ್ಟಿದೆ
ಒಳಗೂಡು ಹುಳಹತ್ತಿದೆ
ಪೀಠಗಳಡಿ ಇಲಿ ಹೆಗ್ಗಣಗಳ ರಾಜ್ಯಭಾರ ನಡೆದಿದೆ
ಹಳೆ ಹೆಬ್ಬೊತ್ತಿಗೆಗಳಿಗೆ ಗೆದ್ದಲು ಹತ್ತಿದೆ

ನೆಮ್ಮಿದ ಬಳ್ಳಿ ಬಾಡಿ ಒಣಗಿ ಜೋತಿದೆ
ಅದನ್ನು ನೆಮ್ಮಿದರಂತೂ ಮಣ್ಣೇಗತಿ
ಆಸರೆಗೆಂದು ಗುಡಿ ಹೊಕ್ಕರೆ
ಜೀರ್ಣವಾಗಿ ಕುಸಿದು ಕಲ್ಲು
ತಲೆ ಮೇಲೆ ಬಿದ್ದು ಸಮಾಧಿಯಾದೀತೆಂಬ ಭಯ

ನಂಬಿಕೆಗೆ ಅಂಬರದಿಂಬು ಬೇಕು
ಆಕಾಶದವಕಾಶ ಬೇಕು
ಭೂಮಿಯ ಭಾರಬೇಕು
ಗ್ರಹ ತಾರೆಗಳನಂತತೆ ಬೇಕು
ವಿಶ್ವಗಳನೊಳಗೊಂಡ ಬೇರು ಬುಡ
ಕೈಕಾಲು, ಆಳ ಅಗಲ, ಏರು-ಪಾರ ಬೇಕು

ಅಂಥದೇನಾದರೂ ಇದೆಯೇ? ಇದ್ದರೆ
ಅಳವಿಗಳವಡದುದನ್ನು
ನಂಬಬೇಕು ಹೇಗೆ?
(೨೬-೨-೭೬)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಡೈರಿ
Next post ಚಂದ್ರಾ ನಿನಗೆ ಹೊತ್ತಿಲ್ಲ ಗೊತ್ತಿಲ್ಲ

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

cheap jordans|wholesale air max|wholesale jordans|wholesale jewelry|wholesale jerseys