Home / ಕವನ / ಕವಿತೆ / ನಂಬಿಕೆ

ನಂಬಿಕೆ

ಇಲ್ಲಿ ಹರಿಹರರ ಪರದಾಟ
ಇಂದ್ರಾದಿಗಳ ಬಯಲಾಟ
ಬಂಡಾಟಗಳು ನಡೆಯುತ್ತಿವೆ
ಹಳಸಿ ಹಿಸಿದ ದಾರಗಳ ಸುತ್ತಿಕೊಂಡು
ಕಪ್ಪೆ ವಟಗುಟ್ಟುತ್ತಿವೆ
ನರಿತಂತ್ರ ಮಂತ್ರಿಸುತಿವೆ
ಟ್ರೇಡು ಮಾರ್ಕುಗಳ ಬಳಿದ
ಬಕಧ್ಯಾನ ಸಾಗಿದೆ ಮೀನ ಮಂದೆ ಮುಂದೆ
ಮಡಿ ಮಾಡಿ ಮಾಡಿ ಮೈ ಜಿಡ್ಡುಗಟ್ಟಿದೆ
ಒಳಗೂಡು ಹುಳಹತ್ತಿದೆ
ಪೀಠಗಳಡಿ ಇಲಿ ಹೆಗ್ಗಣಗಳ ರಾಜ್ಯಭಾರ ನಡೆದಿದೆ
ಹಳೆ ಹೆಬ್ಬೊತ್ತಿಗೆಗಳಿಗೆ ಗೆದ್ದಲು ಹತ್ತಿದೆ

ನೆಮ್ಮಿದ ಬಳ್ಳಿ ಬಾಡಿ ಒಣಗಿ ಜೋತಿದೆ
ಅದನ್ನು ನೆಮ್ಮಿದರಂತೂ ಮಣ್ಣೇಗತಿ
ಆಸರೆಗೆಂದು ಗುಡಿ ಹೊಕ್ಕರೆ
ಜೀರ್ಣವಾಗಿ ಕುಸಿದು ಕಲ್ಲು
ತಲೆ ಮೇಲೆ ಬಿದ್ದು ಸಮಾಧಿಯಾದೀತೆಂಬ ಭಯ

ನಂಬಿಕೆಗೆ ಅಂಬರದಿಂಬು ಬೇಕು
ಆಕಾಶದವಕಾಶ ಬೇಕು
ಭೂಮಿಯ ಭಾರಬೇಕು
ಗ್ರಹ ತಾರೆಗಳನಂತತೆ ಬೇಕು
ವಿಶ್ವಗಳನೊಳಗೊಂಡ ಬೇರು ಬುಡ
ಕೈಕಾಲು, ಆಳ ಅಗಲ, ಏರು-ಪಾರ ಬೇಕು

ಅಂಥದೇನಾದರೂ ಇದೆಯೇ? ಇದ್ದರೆ
ಅಳವಿಗಳವಡದುದನ್ನು
ನಂಬಬೇಕು ಹೇಗೆ?
(೨೬-೨-೭೬)
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...