Home / ಕವನ / ಕವಿತೆ / ನಂಬಿಕೆ

ನಂಬಿಕೆ

ಇಲ್ಲಿ ಹರಿಹರರ ಪರದಾಟ
ಇಂದ್ರಾದಿಗಳ ಬಯಲಾಟ
ಬಂಡಾಟಗಳು ನಡೆಯುತ್ತಿವೆ
ಹಳಸಿ ಹಿಸಿದ ದಾರಗಳ ಸುತ್ತಿಕೊಂಡು
ಕಪ್ಪೆ ವಟಗುಟ್ಟುತ್ತಿವೆ
ನರಿತಂತ್ರ ಮಂತ್ರಿಸುತಿವೆ
ಟ್ರೇಡು ಮಾರ್ಕುಗಳ ಬಳಿದ
ಬಕಧ್ಯಾನ ಸಾಗಿದೆ ಮೀನ ಮಂದೆ ಮುಂದೆ
ಮಡಿ ಮಾಡಿ ಮಾಡಿ ಮೈ ಜಿಡ್ಡುಗಟ್ಟಿದೆ
ಒಳಗೂಡು ಹುಳಹತ್ತಿದೆ
ಪೀಠಗಳಡಿ ಇಲಿ ಹೆಗ್ಗಣಗಳ ರಾಜ್ಯಭಾರ ನಡೆದಿದೆ
ಹಳೆ ಹೆಬ್ಬೊತ್ತಿಗೆಗಳಿಗೆ ಗೆದ್ದಲು ಹತ್ತಿದೆ

ನೆಮ್ಮಿದ ಬಳ್ಳಿ ಬಾಡಿ ಒಣಗಿ ಜೋತಿದೆ
ಅದನ್ನು ನೆಮ್ಮಿದರಂತೂ ಮಣ್ಣೇಗತಿ
ಆಸರೆಗೆಂದು ಗುಡಿ ಹೊಕ್ಕರೆ
ಜೀರ್ಣವಾಗಿ ಕುಸಿದು ಕಲ್ಲು
ತಲೆ ಮೇಲೆ ಬಿದ್ದು ಸಮಾಧಿಯಾದೀತೆಂಬ ಭಯ

ನಂಬಿಕೆಗೆ ಅಂಬರದಿಂಬು ಬೇಕು
ಆಕಾಶದವಕಾಶ ಬೇಕು
ಭೂಮಿಯ ಭಾರಬೇಕು
ಗ್ರಹ ತಾರೆಗಳನಂತತೆ ಬೇಕು
ವಿಶ್ವಗಳನೊಳಗೊಂಡ ಬೇರು ಬುಡ
ಕೈಕಾಲು, ಆಳ ಅಗಲ, ಏರು-ಪಾರ ಬೇಕು

ಅಂಥದೇನಾದರೂ ಇದೆಯೇ? ಇದ್ದರೆ
ಅಳವಿಗಳವಡದುದನ್ನು
ನಂಬಬೇಕು ಹೇಗೆ?
(೨೬-೨-೭೬)
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...