ಆನಿ ಬಂತಾನಿ

ಚಿತ್ರ: ಆಂಡ್ರಿ ಸಂತಾನ
ಚಿತ್ರ: ಆಂಡ್ರಿ ಸಂತಾನ

ಆನಿ ಬಂತಾನಿ
ಯವೂರಾನಿ?
ಸಿದ್ಧಾಪುರದಾನಿ
ಇಲ್ಲಿಗ್ಯಾಕ್ ಬಂತು?
ಹಾದಿ ತಪ್ಪಿ ಬಂತು
ಹಾದಿ ಯಾಕೆ ತಪ್ಪಿತು?
ಕಬ್ಬಿನಾಸೆ ಎಳೆಯಿತು
ಬಾಲ ಬೀಸಿಕೊಂಡು ಊರ
ನಡುವೆ ಬಂದು ಬಿಟ್ಟಿತು?

ಪುಟ್ಟ ಪುಟ್ಟ ಕಣ್ಣು
ಮುಖವೊ ತಟ್ಟೆ ಹೊನ್ನು
ಮುಕ್ಕಿ ಬಿಡಬೇಕೆನಿಸುವಂಥ
ಕಸಿ ಮಾವಿನ ಹಣ್ಣು;
ಹುಡುಗರೆಲ್ಲ ಬನ್ನಿರೊ
ಕಾಯಿ ಬೆಲ್ಲ ತನ್ನಿರೊ
ಅಕ್ಕಿಬುಟ್ಟಿ ಮುಂದೆ ಇಟ್ಟು
ತಿನ್ನೊ ಮುದ್ದು ಎನ್ನಿರೊ,
ಕಾಯಿಬೆಲ್ಲ ತಿನ್ನುತ
ಚೋಟು ಬಾಲ ಬೀಸುತ
ಮೊರದ ಕಿವಿ ಬಡಿಯುವಾಗ
ಆನೆಗೆ ಜೈ ಅನ್ನಿರೊ.

ಅಲ್ಲ ಅಂಥಿಂಥಾನೆ
ವೆಂಕಟರಮಣ ತಾನೆ
ನಮ್ಮ ಪ್ರೀತಿ ಮೆಚ್ಚಿ
ಮನಸ ನಮಗೆ ಬಿಚ್ಚಿ
ಹೀಗೆ ಬಂದಿದ್ದಾನೆ
ಸೇವೆ ಕೊಳುತಿದ್ದಾನೆ
ಮರಳುಗಾಡಿನಂಥ ಬದುಕ
ಸ್ವರ್ಗ ಮಾಡಿದ್ದಾನೆ.

(“ಆನೆ ಬಂತಾನೆ, ಯಾವೂರಾನೆ” ಎಂಬ ಸಾಲಿನಿಂದ ಆರಂಭವಾಗುವ ಹಿಂದಿನ ಗೀತೆಯೊಂದ್ದಿದ್ದು ಅದು ನಾಲ್ಕೈದು ಸಾಲುಗಳಷ್ಟೇ ಉಳಿದಿದೆ.  ಆ ಸಾಲುಗಳನ್ನು ಸೇರಿಸಿಕೊಂಡು ಮುಂದಕ್ಕೆ ಈ ಇಡೀ ಪದ್ಯ ರಚಿಸಲಾಗಿದೆ.)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೯೮
Next post ಒಬ್ಬರಿಗಿಂತ ಒಬ್ಬರು ಮಿಗಿಲು

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…