ಆನಿ ಬಂತಾನಿ

ಚಿತ್ರ: ಆಂಡ್ರಿ ಸಂತಾನ
ಚಿತ್ರ: ಆಂಡ್ರಿ ಸಂತಾನ

ಆನಿ ಬಂತಾನಿ
ಯವೂರಾನಿ?
ಸಿದ್ಧಾಪುರದಾನಿ
ಇಲ್ಲಿಗ್ಯಾಕ್ ಬಂತು?
ಹಾದಿ ತಪ್ಪಿ ಬಂತು
ಹಾದಿ ಯಾಕೆ ತಪ್ಪಿತು?
ಕಬ್ಬಿನಾಸೆ ಎಳೆಯಿತು
ಬಾಲ ಬೀಸಿಕೊಂಡು ಊರ
ನಡುವೆ ಬಂದು ಬಿಟ್ಟಿತು?

ಪುಟ್ಟ ಪುಟ್ಟ ಕಣ್ಣು
ಮುಖವೊ ತಟ್ಟೆ ಹೊನ್ನು
ಮುಕ್ಕಿ ಬಿಡಬೇಕೆನಿಸುವಂಥ
ಕಸಿ ಮಾವಿನ ಹಣ್ಣು;
ಹುಡುಗರೆಲ್ಲ ಬನ್ನಿರೊ
ಕಾಯಿ ಬೆಲ್ಲ ತನ್ನಿರೊ
ಅಕ್ಕಿಬುಟ್ಟಿ ಮುಂದೆ ಇಟ್ಟು
ತಿನ್ನೊ ಮುದ್ದು ಎನ್ನಿರೊ,
ಕಾಯಿಬೆಲ್ಲ ತಿನ್ನುತ
ಚೋಟು ಬಾಲ ಬೀಸುತ
ಮೊರದ ಕಿವಿ ಬಡಿಯುವಾಗ
ಆನೆಗೆ ಜೈ ಅನ್ನಿರೊ.

ಅಲ್ಲ ಅಂಥಿಂಥಾನೆ
ವೆಂಕಟರಮಣ ತಾನೆ
ನಮ್ಮ ಪ್ರೀತಿ ಮೆಚ್ಚಿ
ಮನಸ ನಮಗೆ ಬಿಚ್ಚಿ
ಹೀಗೆ ಬಂದಿದ್ದಾನೆ
ಸೇವೆ ಕೊಳುತಿದ್ದಾನೆ
ಮರಳುಗಾಡಿನಂಥ ಬದುಕ
ಸ್ವರ್ಗ ಮಾಡಿದ್ದಾನೆ.

(“ಆನೆ ಬಂತಾನೆ, ಯಾವೂರಾನೆ” ಎಂಬ ಸಾಲಿನಿಂದ ಆರಂಭವಾಗುವ ಹಿಂದಿನ ಗೀತೆಯೊಂದ್ದಿದ್ದು ಅದು ನಾಲ್ಕೈದು ಸಾಲುಗಳಷ್ಟೇ ಉಳಿದಿದೆ.  ಆ ಸಾಲುಗಳನ್ನು ಸೇರಿಸಿಕೊಂಡು ಮುಂದಕ್ಕೆ ಈ ಇಡೀ ಪದ್ಯ ರಚಿಸಲಾಗಿದೆ.)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೯೮
Next post ಒಬ್ಬರಿಗಿಂತ ಒಬ್ಬರು ಮಿಗಿಲು

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…