Home / ಬಾಲ ಚಿಲುಮೆ / ಕವಿತೆ / ಆನಿ ಬಂತಾನಿ

ಆನಿ ಬಂತಾನಿ

ಚಿತ್ರ: ಆಂಡ್ರಿ ಸಂತಾನ
ಚಿತ್ರ: ಆಂಡ್ರಿ ಸಂತಾನ

ಆನಿ ಬಂತಾನಿ
ಯವೂರಾನಿ?
ಸಿದ್ಧಾಪುರದಾನಿ
ಇಲ್ಲಿಗ್ಯಾಕ್ ಬಂತು?
ಹಾದಿ ತಪ್ಪಿ ಬಂತು
ಹಾದಿ ಯಾಕೆ ತಪ್ಪಿತು?
ಕಬ್ಬಿನಾಸೆ ಎಳೆಯಿತು
ಬಾಲ ಬೀಸಿಕೊಂಡು ಊರ
ನಡುವೆ ಬಂದು ಬಿಟ್ಟಿತು?

ಪುಟ್ಟ ಪುಟ್ಟ ಕಣ್ಣು
ಮುಖವೊ ತಟ್ಟೆ ಹೊನ್ನು
ಮುಕ್ಕಿ ಬಿಡಬೇಕೆನಿಸುವಂಥ
ಕಸಿ ಮಾವಿನ ಹಣ್ಣು;
ಹುಡುಗರೆಲ್ಲ ಬನ್ನಿರೊ
ಕಾಯಿ ಬೆಲ್ಲ ತನ್ನಿರೊ
ಅಕ್ಕಿಬುಟ್ಟಿ ಮುಂದೆ ಇಟ್ಟು
ತಿನ್ನೊ ಮುದ್ದು ಎನ್ನಿರೊ,
ಕಾಯಿಬೆಲ್ಲ ತಿನ್ನುತ
ಚೋಟು ಬಾಲ ಬೀಸುತ
ಮೊರದ ಕಿವಿ ಬಡಿಯುವಾಗ
ಆನೆಗೆ ಜೈ ಅನ್ನಿರೊ.

ಅಲ್ಲ ಅಂಥಿಂಥಾನೆ
ವೆಂಕಟರಮಣ ತಾನೆ
ನಮ್ಮ ಪ್ರೀತಿ ಮೆಚ್ಚಿ
ಮನಸ ನಮಗೆ ಬಿಚ್ಚಿ
ಹೀಗೆ ಬಂದಿದ್ದಾನೆ
ಸೇವೆ ಕೊಳುತಿದ್ದಾನೆ
ಮರಳುಗಾಡಿನಂಥ ಬದುಕ
ಸ್ವರ್ಗ ಮಾಡಿದ್ದಾನೆ.

(“ಆನೆ ಬಂತಾನೆ, ಯಾವೂರಾನೆ” ಎಂಬ ಸಾಲಿನಿಂದ ಆರಂಭವಾಗುವ ಹಿಂದಿನ ಗೀತೆಯೊಂದ್ದಿದ್ದು ಅದು ನಾಲ್ಕೈದು ಸಾಲುಗಳಷ್ಟೇ ಉಳಿದಿದೆ.  ಆ ಸಾಲುಗಳನ್ನು ಸೇರಿಸಿಕೊಂಡು ಮುಂದಕ್ಕೆ ಈ ಇಡೀ ಪದ್ಯ ರಚಿಸಲಾಗಿದೆ.)
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...