Home / ಕವನ / ಕವಿತೆ / ಕುತ್ತಿಗ್ಗೊಯ್ಕ

ಕುತ್ತಿಗ್ಗೊಯ್ಕ

ಇವರು ನಮ್ಮವರೇ ನೋಡ್ರಿ
ಬಣ್ಣಾ ಸವರಿಕೊಂತ, ಬೆಣ್ಯಾಗೆ ಕೂದ್ಲ ತಗದಂಗೆ
ಮುತ್ತಿನಸರ ಪೋಣಿಸಿದಂತೆ ಪಂಪಿಸಿಗೊಂತ

ನಾವೂ ನೀವೂ ಒಂದೇ ದೋಣ್ಯಾಗೆ ಪೈಣಾಮಾಡೋರು
ನಾವೂ ನೀವೂ ಒಂದೇ ಗರಿಗಳ ಹಕ್ಕಿಗಳು
ಅಂತ ಆಗಾಗ ತಬ್ಬಿಕೊಂಡು ತಬ್ಬಿಬ್ಬು ಮಾಡಿಕೊಂತ
ಉಬ್ಸಿ ನಮ್ಹವಾ ಟಿಸ್ಸೆನಿಸಿಕೊಂತ
ನಮ್ಮ ನಿಮ್ಮ ಮನಿ, ಮನಿಯಾಗಿನೋರು, ಗೆಳ್ಯಾರೂ ಒಂದೇ ಅಂತ
ನಮ್ಮ ಲೈಕಿಂಗೂ ನಿಂಬದರಂಗೆ
ನಿಮಗೆ ಸೇರದ್ದು ನಮಗೂ ಸೇರುದುಲ್ಲ ನೋಡ್ರಿ

….ಇತ್ಯಾದಿಯಾಗಿ ನಮ್ಮೆಲ್ಲಾ ಸಂದುಗೊಂದುಗಳಲ್ಲಿ
ತಮ್ಮ ಅಕ್ಟೋಪಸ್ ಹಸ್ತಗಳ ತೂರಿಸಿ ಜಾಲಾಡಿ
ಬಿಗಿಯಾಗಿ ಹಿಡಕೊಂಡು ಅಲ್ಲಾಡಿಸಿಕೊಂತ
ಕೊನೆಗೆ ತಮ್ಮ ಬಾಯಿಕಡೆ ನಮ್ಮನ್ನೂ ಸೆಳಕೊಂತಾರೆ

ಆಮ್ಯಾಲೆ ಇಂಥಾ ಕಡಿ ಒಯ್ದು ಕುತ್ಗೆ ಕೊಯ್ತಾರೆ
ಅಲ್ಲಿ ಒಂದ್ಹನಿ ನೀರಿರಲ್ಲ
ಇಂಥಾ ಶಿಖರಕ್ಕೊಯ್ದು ನೂಕ್ತಾರೆ
ಕೆಳಗೆ ಬಿದ್ದಮ್ಯಾಲೆ ಚೇತರಿಸಿಕೊಳ್ಳೋದೇ ಸಾದ್ದಿಲ್ಲ

ಆಗ ಮೈಮುಟ್ಟಿಮುಟ್ಟಿ ನೋಡಿಕೊಂತ
ಚಂದ್ರ ಸುಡುವಂಗೆ, ಕಾಗೆ ಬೆಳ್ಳಗಾದಂಗೆ
ಕೊಕ್ರೆ ಕರ್ರಗಾದಂಗೆ, ಹಿಂಗೆಲ್ಲಾ ಷಾಕಾಗಿ ಭ್ರಮಿಸಿದಾಗ
ಅವರು ನಮ್ಮವರು ಕಿಸಕ್ಕೆನುತ್ತಿರ್ತಾರೆ
ಆಗ ಜಗತ್ತಿಗೇ ಸಾರಿ ಹೇಳ್ಬೇಕನಸ್ತಾದೆ
‘ಅಪ್ಪಗೊಳಾ, ಅಣ್ಣುಗೊಳಾ, ಈ ಆಕಳದ ಮಕದ ಹುಲೀನಾ
ಈ ಜಿಂಕೇ ಮಕದ ನರೀನಾ, ಕುದುರೀ ಮಕದ ಕತ್ತೀನ
ಗುಬ್ಬೀಮಕದ ಹದ್ದನ್ನ, ಹೂವಿನ ಮಕದ ಹಾವನ್ನ
ಗೆಳೆಯನ ಮಕದ ಮನಿಹಾಳನ್ನ
ಹಿತೈಷಿ ಮಕದ ಕುತ್ತಿಗ್ಗೊಯ್ಕನ್ನ
ನಂಬನ್ಯಾಡ್ರಪೋ ಅಂತ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...