Home / ಕವನ / ಕವಿತೆ / ಕುತ್ತಿಗ್ಗೊಯ್ಕ

ಕುತ್ತಿಗ್ಗೊಯ್ಕ

ಇವರು ನಮ್ಮವರೇ ನೋಡ್ರಿ
ಬಣ್ಣಾ ಸವರಿಕೊಂತ, ಬೆಣ್ಯಾಗೆ ಕೂದ್ಲ ತಗದಂಗೆ
ಮುತ್ತಿನಸರ ಪೋಣಿಸಿದಂತೆ ಪಂಪಿಸಿಗೊಂತ

ನಾವೂ ನೀವೂ ಒಂದೇ ದೋಣ್ಯಾಗೆ ಪೈಣಾಮಾಡೋರು
ನಾವೂ ನೀವೂ ಒಂದೇ ಗರಿಗಳ ಹಕ್ಕಿಗಳು
ಅಂತ ಆಗಾಗ ತಬ್ಬಿಕೊಂಡು ತಬ್ಬಿಬ್ಬು ಮಾಡಿಕೊಂತ
ಉಬ್ಸಿ ನಮ್ಹವಾ ಟಿಸ್ಸೆನಿಸಿಕೊಂತ
ನಮ್ಮ ನಿಮ್ಮ ಮನಿ, ಮನಿಯಾಗಿನೋರು, ಗೆಳ್ಯಾರೂ ಒಂದೇ ಅಂತ
ನಮ್ಮ ಲೈಕಿಂಗೂ ನಿಂಬದರಂಗೆ
ನಿಮಗೆ ಸೇರದ್ದು ನಮಗೂ ಸೇರುದುಲ್ಲ ನೋಡ್ರಿ

….ಇತ್ಯಾದಿಯಾಗಿ ನಮ್ಮೆಲ್ಲಾ ಸಂದುಗೊಂದುಗಳಲ್ಲಿ
ತಮ್ಮ ಅಕ್ಟೋಪಸ್ ಹಸ್ತಗಳ ತೂರಿಸಿ ಜಾಲಾಡಿ
ಬಿಗಿಯಾಗಿ ಹಿಡಕೊಂಡು ಅಲ್ಲಾಡಿಸಿಕೊಂತ
ಕೊನೆಗೆ ತಮ್ಮ ಬಾಯಿಕಡೆ ನಮ್ಮನ್ನೂ ಸೆಳಕೊಂತಾರೆ

ಆಮ್ಯಾಲೆ ಇಂಥಾ ಕಡಿ ಒಯ್ದು ಕುತ್ಗೆ ಕೊಯ್ತಾರೆ
ಅಲ್ಲಿ ಒಂದ್ಹನಿ ನೀರಿರಲ್ಲ
ಇಂಥಾ ಶಿಖರಕ್ಕೊಯ್ದು ನೂಕ್ತಾರೆ
ಕೆಳಗೆ ಬಿದ್ದಮ್ಯಾಲೆ ಚೇತರಿಸಿಕೊಳ್ಳೋದೇ ಸಾದ್ದಿಲ್ಲ

ಆಗ ಮೈಮುಟ್ಟಿಮುಟ್ಟಿ ನೋಡಿಕೊಂತ
ಚಂದ್ರ ಸುಡುವಂಗೆ, ಕಾಗೆ ಬೆಳ್ಳಗಾದಂಗೆ
ಕೊಕ್ರೆ ಕರ್ರಗಾದಂಗೆ, ಹಿಂಗೆಲ್ಲಾ ಷಾಕಾಗಿ ಭ್ರಮಿಸಿದಾಗ
ಅವರು ನಮ್ಮವರು ಕಿಸಕ್ಕೆನುತ್ತಿರ್ತಾರೆ
ಆಗ ಜಗತ್ತಿಗೇ ಸಾರಿ ಹೇಳ್ಬೇಕನಸ್ತಾದೆ
‘ಅಪ್ಪಗೊಳಾ, ಅಣ್ಣುಗೊಳಾ, ಈ ಆಕಳದ ಮಕದ ಹುಲೀನಾ
ಈ ಜಿಂಕೇ ಮಕದ ನರೀನಾ, ಕುದುರೀ ಮಕದ ಕತ್ತೀನ
ಗುಬ್ಬೀಮಕದ ಹದ್ದನ್ನ, ಹೂವಿನ ಮಕದ ಹಾವನ್ನ
ಗೆಳೆಯನ ಮಕದ ಮನಿಹಾಳನ್ನ
ಹಿತೈಷಿ ಮಕದ ಕುತ್ತಿಗ್ಗೊಯ್ಕನ್ನ
ನಂಬನ್ಯಾಡ್ರಪೋ ಅಂತ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...