Home / ಕವನ / ಕವಿತೆ / ಕುತ್ತಿಗ್ಗೊಯ್ಕ

ಕುತ್ತಿಗ್ಗೊಯ್ಕ

ಇವರು ನಮ್ಮವರೇ ನೋಡ್ರಿ
ಬಣ್ಣಾ ಸವರಿಕೊಂತ, ಬೆಣ್ಯಾಗೆ ಕೂದ್ಲ ತಗದಂಗೆ
ಮುತ್ತಿನಸರ ಪೋಣಿಸಿದಂತೆ ಪಂಪಿಸಿಗೊಂತ

ನಾವೂ ನೀವೂ ಒಂದೇ ದೋಣ್ಯಾಗೆ ಪೈಣಾಮಾಡೋರು
ನಾವೂ ನೀವೂ ಒಂದೇ ಗರಿಗಳ ಹಕ್ಕಿಗಳು
ಅಂತ ಆಗಾಗ ತಬ್ಬಿಕೊಂಡು ತಬ್ಬಿಬ್ಬು ಮಾಡಿಕೊಂತ
ಉಬ್ಸಿ ನಮ್ಹವಾ ಟಿಸ್ಸೆನಿಸಿಕೊಂತ
ನಮ್ಮ ನಿಮ್ಮ ಮನಿ, ಮನಿಯಾಗಿನೋರು, ಗೆಳ್ಯಾರೂ ಒಂದೇ ಅಂತ
ನಮ್ಮ ಲೈಕಿಂಗೂ ನಿಂಬದರಂಗೆ
ನಿಮಗೆ ಸೇರದ್ದು ನಮಗೂ ಸೇರುದುಲ್ಲ ನೋಡ್ರಿ

….ಇತ್ಯಾದಿಯಾಗಿ ನಮ್ಮೆಲ್ಲಾ ಸಂದುಗೊಂದುಗಳಲ್ಲಿ
ತಮ್ಮ ಅಕ್ಟೋಪಸ್ ಹಸ್ತಗಳ ತೂರಿಸಿ ಜಾಲಾಡಿ
ಬಿಗಿಯಾಗಿ ಹಿಡಕೊಂಡು ಅಲ್ಲಾಡಿಸಿಕೊಂತ
ಕೊನೆಗೆ ತಮ್ಮ ಬಾಯಿಕಡೆ ನಮ್ಮನ್ನೂ ಸೆಳಕೊಂತಾರೆ

ಆಮ್ಯಾಲೆ ಇಂಥಾ ಕಡಿ ಒಯ್ದು ಕುತ್ಗೆ ಕೊಯ್ತಾರೆ
ಅಲ್ಲಿ ಒಂದ್ಹನಿ ನೀರಿರಲ್ಲ
ಇಂಥಾ ಶಿಖರಕ್ಕೊಯ್ದು ನೂಕ್ತಾರೆ
ಕೆಳಗೆ ಬಿದ್ದಮ್ಯಾಲೆ ಚೇತರಿಸಿಕೊಳ್ಳೋದೇ ಸಾದ್ದಿಲ್ಲ

ಆಗ ಮೈಮುಟ್ಟಿಮುಟ್ಟಿ ನೋಡಿಕೊಂತ
ಚಂದ್ರ ಸುಡುವಂಗೆ, ಕಾಗೆ ಬೆಳ್ಳಗಾದಂಗೆ
ಕೊಕ್ರೆ ಕರ್ರಗಾದಂಗೆ, ಹಿಂಗೆಲ್ಲಾ ಷಾಕಾಗಿ ಭ್ರಮಿಸಿದಾಗ
ಅವರು ನಮ್ಮವರು ಕಿಸಕ್ಕೆನುತ್ತಿರ್ತಾರೆ
ಆಗ ಜಗತ್ತಿಗೇ ಸಾರಿ ಹೇಳ್ಬೇಕನಸ್ತಾದೆ
‘ಅಪ್ಪಗೊಳಾ, ಅಣ್ಣುಗೊಳಾ, ಈ ಆಕಳದ ಮಕದ ಹುಲೀನಾ
ಈ ಜಿಂಕೇ ಮಕದ ನರೀನಾ, ಕುದುರೀ ಮಕದ ಕತ್ತೀನ
ಗುಬ್ಬೀಮಕದ ಹದ್ದನ್ನ, ಹೂವಿನ ಮಕದ ಹಾವನ್ನ
ಗೆಳೆಯನ ಮಕದ ಮನಿಹಾಳನ್ನ
ಹಿತೈಷಿ ಮಕದ ಕುತ್ತಿಗ್ಗೊಯ್ಕನ್ನ
ನಂಬನ್ಯಾಡ್ರಪೋ ಅಂತ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...