Home / ಕವನ / ಕವಿತೆ / ಕುತ್ತಿಗ್ಗೊಯ್ಕ

ಕುತ್ತಿಗ್ಗೊಯ್ಕ

ಇವರು ನಮ್ಮವರೇ ನೋಡ್ರಿ
ಬಣ್ಣಾ ಸವರಿಕೊಂತ, ಬೆಣ್ಯಾಗೆ ಕೂದ್ಲ ತಗದಂಗೆ
ಮುತ್ತಿನಸರ ಪೋಣಿಸಿದಂತೆ ಪಂಪಿಸಿಗೊಂತ

ನಾವೂ ನೀವೂ ಒಂದೇ ದೋಣ್ಯಾಗೆ ಪೈಣಾಮಾಡೋರು
ನಾವೂ ನೀವೂ ಒಂದೇ ಗರಿಗಳ ಹಕ್ಕಿಗಳು
ಅಂತ ಆಗಾಗ ತಬ್ಬಿಕೊಂಡು ತಬ್ಬಿಬ್ಬು ಮಾಡಿಕೊಂತ
ಉಬ್ಸಿ ನಮ್ಹವಾ ಟಿಸ್ಸೆನಿಸಿಕೊಂತ
ನಮ್ಮ ನಿಮ್ಮ ಮನಿ, ಮನಿಯಾಗಿನೋರು, ಗೆಳ್ಯಾರೂ ಒಂದೇ ಅಂತ
ನಮ್ಮ ಲೈಕಿಂಗೂ ನಿಂಬದರಂಗೆ
ನಿಮಗೆ ಸೇರದ್ದು ನಮಗೂ ಸೇರುದುಲ್ಲ ನೋಡ್ರಿ

….ಇತ್ಯಾದಿಯಾಗಿ ನಮ್ಮೆಲ್ಲಾ ಸಂದುಗೊಂದುಗಳಲ್ಲಿ
ತಮ್ಮ ಅಕ್ಟೋಪಸ್ ಹಸ್ತಗಳ ತೂರಿಸಿ ಜಾಲಾಡಿ
ಬಿಗಿಯಾಗಿ ಹಿಡಕೊಂಡು ಅಲ್ಲಾಡಿಸಿಕೊಂತ
ಕೊನೆಗೆ ತಮ್ಮ ಬಾಯಿಕಡೆ ನಮ್ಮನ್ನೂ ಸೆಳಕೊಂತಾರೆ

ಆಮ್ಯಾಲೆ ಇಂಥಾ ಕಡಿ ಒಯ್ದು ಕುತ್ಗೆ ಕೊಯ್ತಾರೆ
ಅಲ್ಲಿ ಒಂದ್ಹನಿ ನೀರಿರಲ್ಲ
ಇಂಥಾ ಶಿಖರಕ್ಕೊಯ್ದು ನೂಕ್ತಾರೆ
ಕೆಳಗೆ ಬಿದ್ದಮ್ಯಾಲೆ ಚೇತರಿಸಿಕೊಳ್ಳೋದೇ ಸಾದ್ದಿಲ್ಲ

ಆಗ ಮೈಮುಟ್ಟಿಮುಟ್ಟಿ ನೋಡಿಕೊಂತ
ಚಂದ್ರ ಸುಡುವಂಗೆ, ಕಾಗೆ ಬೆಳ್ಳಗಾದಂಗೆ
ಕೊಕ್ರೆ ಕರ್ರಗಾದಂಗೆ, ಹಿಂಗೆಲ್ಲಾ ಷಾಕಾಗಿ ಭ್ರಮಿಸಿದಾಗ
ಅವರು ನಮ್ಮವರು ಕಿಸಕ್ಕೆನುತ್ತಿರ್ತಾರೆ
ಆಗ ಜಗತ್ತಿಗೇ ಸಾರಿ ಹೇಳ್ಬೇಕನಸ್ತಾದೆ
‘ಅಪ್ಪಗೊಳಾ, ಅಣ್ಣುಗೊಳಾ, ಈ ಆಕಳದ ಮಕದ ಹುಲೀನಾ
ಈ ಜಿಂಕೇ ಮಕದ ನರೀನಾ, ಕುದುರೀ ಮಕದ ಕತ್ತೀನ
ಗುಬ್ಬೀಮಕದ ಹದ್ದನ್ನ, ಹೂವಿನ ಮಕದ ಹಾವನ್ನ
ಗೆಳೆಯನ ಮಕದ ಮನಿಹಾಳನ್ನ
ಹಿತೈಷಿ ಮಕದ ಕುತ್ತಿಗ್ಗೊಯ್ಕನ್ನ
ನಂಬನ್ಯಾಡ್ರಪೋ ಅಂತ
*****

Tagged:

Leave a Reply

Your email address will not be published. Required fields are marked *

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...