Home / ಕವನ / ಕವಿತೆ / ರಣರಂಗ

ರಣರಂಗ

ಇದು ನಿರಂತರವೂ ರಣರಂಗ, ಇಲ್ಲಿ ಯಾವುದೇ ಒಂದು ಆಯುಧ, ಒಬ್ಬ ವೀರನಾಯಕ, ಒಂದು ವಾಹನ, ಒಂದು ರೀತಿಯ ಕವಚ, ಒಂದು ತಂತ್ರ, ಒಂದು ಕೈಚಳಕ, ಒಂದು ವ್ಯೂಹ, ಒಂದು ಬಗೆಯ ಸೈನ್ಯ, ಒಂದು ನೆರೆಬೆಂಬಲ, ಒಂದು ತಯಾರಿ, ಒಂದು ಯುದ್ಧ ಘೋಷಣೆ, ಒಂದು ಅವಧಿ…. ಯಾವಾಗ್ಯೂ ಗೆಲುವಿಗೆ ಕಾರಣವಾಗಲಾರವು. ಒಮ್ಮೊಮ್ಮೆ ಇಲ್ಲಿಯವರೆಗೆ ಗೊತ್ತಿರುವ ಸಾಧ್ಯತೆಗಳೆಲ್ಲಾ ವಿಫಲವಾಗಿ ಹೊಸ ಸಾಹಸ ಸೃಷ್ಟಿಗೆ ವೀಳ್ಯಕೊಡುವುದಾಗುತ್ತದೆ. ಚರಿತ್ರೆಯ ಚಕ್ರ ಪುನರಾವರ್ತಿಸುವುದಿಲ್ಲ.

ಈ ರಣರಂಗದಲ್ಲಿ ಒಮ್ಮೆ ಪ್ರಬಲಾಸ್ತ್ರವಾಗಿದ್ದದ್ದು ಇನ್ನೊಮ್ಮೆ ಮೊಂಡ ಪೊರಕೆಯಂತಾದೀತು.

ಒಮ್ಮೆ ಸುಸಜ್ಜಿತವಾಹನವಾದದ್ದು ಇನ್ನೊಮ್ಮೆ ಹಳೆ ಬಂಡಿಯಾದೀತು
ಒಮ್ಮೆ ಮೆರೆದ ಧೀರ ನಾಯಕ ಇನ್ನೊಮ್ಮೆ ಅಯೋಗ್ಯನಾದಾನು,
ಒಮ್ಮೆ ರಕ್ಷಸಿದ ಕವಚ ಇನ್ನೊಮ್ಮೆ ಮೃತ್ಯು ಕವಾಟವಾದೀತು
ಒಮ್ಮೆ ಬಳಸಿದ ತಂತ್ರ ಇನ್ನೊಮ್ಮೆ ಹುಡುಗಾಟವಾದೀತು
ಒಮ್ಮೆ ರಚಿಸಿದ ವ್ಯೂಹ ಇನ್ನೊಮ್ಮೆ ಮರುಳುಗೂಡಾದೀತು,

ಒಮ್ಮೆ ತೋರಿದ ಲಾಘವ ಇನ್ನೊಮ್ಮೆ ಅರುಳು ಮರುಳಾದೀತು,
ಒಮ್ಮೆ ಅಜೇಯವೆನಿಸಿದ ಸೈನ್ಯ ಇನ್ನೊಮ್ಮೆ ದನಜಂಗುಳಿಯಾದೀತು,
ಒಮ್ಮೆ ಮೆರೆದ ದೈರ್ಯ ಶೌರ್ಯ ಇನ್ನೊಮ್ಮೆ ಪುಂಡು ಬಂಡಾಟವಾದಾವು,
ಒಮ್ಮೆ ನಂಬಿದ ನೆರೆ ಬೆಂಬಲ ಇನ್ನೊಮ್ಮೆ ಬರಿ ನೆರಿಕೆಯಾದೀತು
ಒಮ್ಮೆ ಕೂಡಿದ ಒಪ್ಪಂದ ಇನ್ನೊಮ್ಮೆ ಚಕ್ಕಂದವಾದೀತು
ಒಮ್ಮೆ ಹರಿದ ಹುಮ್ಮಸ್ಸು ಇನ್ನೊಮ್ಮೆ ಹುಚ್ಚು ಎನಿಸೀತು
ಒಮ್ಮೆ ನಡೆಸಿದ ತಯ್ಯಾರಿ ಇನ್ನೊಮ್ಮೆ ವಯ್ಯಾರವಾದೀತು
ಒಮ್ಮೆ ದೊರೆತ ಬಿರುದಿನ ಪುಚ್ಚ ಒಣರವುದೆಯಾದೀತು ಇನ್ನೊಮ್ಮೆ
ಒಮ್ಮೆ ದೂರೆತ ಬಹುಮಾನಪದಕ ಖೋಟಾ ಪೈಸಾವಾದೀತು
ಇನ್ನೊಮ್ಮೆ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...