Home / ಕವನ / ಕವಿತೆ / ರಣರಂಗ

ರಣರಂಗ

ಇದು ನಿರಂತರವೂ ರಣರಂಗ, ಇಲ್ಲಿ ಯಾವುದೇ ಒಂದು ಆಯುಧ, ಒಬ್ಬ ವೀರನಾಯಕ, ಒಂದು ವಾಹನ, ಒಂದು ರೀತಿಯ ಕವಚ, ಒಂದು ತಂತ್ರ, ಒಂದು ಕೈಚಳಕ, ಒಂದು ವ್ಯೂಹ, ಒಂದು ಬಗೆಯ ಸೈನ್ಯ, ಒಂದು ನೆರೆಬೆಂಬಲ, ಒಂದು ತಯಾರಿ, ಒಂದು ಯುದ್ಧ ಘೋಷಣೆ, ಒಂದು ಅವಧಿ…. ಯಾವಾಗ್ಯೂ ಗೆಲುವಿಗೆ ಕಾರಣವಾಗಲಾರವು. ಒಮ್ಮೊಮ್ಮೆ ಇಲ್ಲಿಯವರೆಗೆ ಗೊತ್ತಿರುವ ಸಾಧ್ಯತೆಗಳೆಲ್ಲಾ ವಿಫಲವಾಗಿ ಹೊಸ ಸಾಹಸ ಸೃಷ್ಟಿಗೆ ವೀಳ್ಯಕೊಡುವುದಾಗುತ್ತದೆ. ಚರಿತ್ರೆಯ ಚಕ್ರ ಪುನರಾವರ್ತಿಸುವುದಿಲ್ಲ.

ಈ ರಣರಂಗದಲ್ಲಿ ಒಮ್ಮೆ ಪ್ರಬಲಾಸ್ತ್ರವಾಗಿದ್ದದ್ದು ಇನ್ನೊಮ್ಮೆ ಮೊಂಡ ಪೊರಕೆಯಂತಾದೀತು.

ಒಮ್ಮೆ ಸುಸಜ್ಜಿತವಾಹನವಾದದ್ದು ಇನ್ನೊಮ್ಮೆ ಹಳೆ ಬಂಡಿಯಾದೀತು
ಒಮ್ಮೆ ಮೆರೆದ ಧೀರ ನಾಯಕ ಇನ್ನೊಮ್ಮೆ ಅಯೋಗ್ಯನಾದಾನು,
ಒಮ್ಮೆ ರಕ್ಷಸಿದ ಕವಚ ಇನ್ನೊಮ್ಮೆ ಮೃತ್ಯು ಕವಾಟವಾದೀತು
ಒಮ್ಮೆ ಬಳಸಿದ ತಂತ್ರ ಇನ್ನೊಮ್ಮೆ ಹುಡುಗಾಟವಾದೀತು
ಒಮ್ಮೆ ರಚಿಸಿದ ವ್ಯೂಹ ಇನ್ನೊಮ್ಮೆ ಮರುಳುಗೂಡಾದೀತು,

ಒಮ್ಮೆ ತೋರಿದ ಲಾಘವ ಇನ್ನೊಮ್ಮೆ ಅರುಳು ಮರುಳಾದೀತು,
ಒಮ್ಮೆ ಅಜೇಯವೆನಿಸಿದ ಸೈನ್ಯ ಇನ್ನೊಮ್ಮೆ ದನಜಂಗುಳಿಯಾದೀತು,
ಒಮ್ಮೆ ಮೆರೆದ ದೈರ್ಯ ಶೌರ್ಯ ಇನ್ನೊಮ್ಮೆ ಪುಂಡು ಬಂಡಾಟವಾದಾವು,
ಒಮ್ಮೆ ನಂಬಿದ ನೆರೆ ಬೆಂಬಲ ಇನ್ನೊಮ್ಮೆ ಬರಿ ನೆರಿಕೆಯಾದೀತು
ಒಮ್ಮೆ ಕೂಡಿದ ಒಪ್ಪಂದ ಇನ್ನೊಮ್ಮೆ ಚಕ್ಕಂದವಾದೀತು
ಒಮ್ಮೆ ಹರಿದ ಹುಮ್ಮಸ್ಸು ಇನ್ನೊಮ್ಮೆ ಹುಚ್ಚು ಎನಿಸೀತು
ಒಮ್ಮೆ ನಡೆಸಿದ ತಯ್ಯಾರಿ ಇನ್ನೊಮ್ಮೆ ವಯ್ಯಾರವಾದೀತು
ಒಮ್ಮೆ ದೊರೆತ ಬಿರುದಿನ ಪುಚ್ಚ ಒಣರವುದೆಯಾದೀತು ಇನ್ನೊಮ್ಮೆ
ಒಮ್ಮೆ ದೂರೆತ ಬಹುಮಾನಪದಕ ಖೋಟಾ ಪೈಸಾವಾದೀತು
ಇನ್ನೊಮ್ಮೆ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...