Home / ಕವನ / ಕವಿತೆ / ರಣರಂಗ

ರಣರಂಗ

ಇದು ನಿರಂತರವೂ ರಣರಂಗ, ಇಲ್ಲಿ ಯಾವುದೇ ಒಂದು ಆಯುಧ, ಒಬ್ಬ ವೀರನಾಯಕ, ಒಂದು ವಾಹನ, ಒಂದು ರೀತಿಯ ಕವಚ, ಒಂದು ತಂತ್ರ, ಒಂದು ಕೈಚಳಕ, ಒಂದು ವ್ಯೂಹ, ಒಂದು ಬಗೆಯ ಸೈನ್ಯ, ಒಂದು ನೆರೆಬೆಂಬಲ, ಒಂದು ತಯಾರಿ, ಒಂದು ಯುದ್ಧ ಘೋಷಣೆ, ಒಂದು ಅವಧಿ…. ಯಾವಾಗ್ಯೂ ಗೆಲುವಿಗೆ ಕಾರಣವಾಗಲಾರವು. ಒಮ್ಮೊಮ್ಮೆ ಇಲ್ಲಿಯವರೆಗೆ ಗೊತ್ತಿರುವ ಸಾಧ್ಯತೆಗಳೆಲ್ಲಾ ವಿಫಲವಾಗಿ ಹೊಸ ಸಾಹಸ ಸೃಷ್ಟಿಗೆ ವೀಳ್ಯಕೊಡುವುದಾಗುತ್ತದೆ. ಚರಿತ್ರೆಯ ಚಕ್ರ ಪುನರಾವರ್ತಿಸುವುದಿಲ್ಲ.

ಈ ರಣರಂಗದಲ್ಲಿ ಒಮ್ಮೆ ಪ್ರಬಲಾಸ್ತ್ರವಾಗಿದ್ದದ್ದು ಇನ್ನೊಮ್ಮೆ ಮೊಂಡ ಪೊರಕೆಯಂತಾದೀತು.

ಒಮ್ಮೆ ಸುಸಜ್ಜಿತವಾಹನವಾದದ್ದು ಇನ್ನೊಮ್ಮೆ ಹಳೆ ಬಂಡಿಯಾದೀತು
ಒಮ್ಮೆ ಮೆರೆದ ಧೀರ ನಾಯಕ ಇನ್ನೊಮ್ಮೆ ಅಯೋಗ್ಯನಾದಾನು,
ಒಮ್ಮೆ ರಕ್ಷಸಿದ ಕವಚ ಇನ್ನೊಮ್ಮೆ ಮೃತ್ಯು ಕವಾಟವಾದೀತು
ಒಮ್ಮೆ ಬಳಸಿದ ತಂತ್ರ ಇನ್ನೊಮ್ಮೆ ಹುಡುಗಾಟವಾದೀತು
ಒಮ್ಮೆ ರಚಿಸಿದ ವ್ಯೂಹ ಇನ್ನೊಮ್ಮೆ ಮರುಳುಗೂಡಾದೀತು,

ಒಮ್ಮೆ ತೋರಿದ ಲಾಘವ ಇನ್ನೊಮ್ಮೆ ಅರುಳು ಮರುಳಾದೀತು,
ಒಮ್ಮೆ ಅಜೇಯವೆನಿಸಿದ ಸೈನ್ಯ ಇನ್ನೊಮ್ಮೆ ದನಜಂಗುಳಿಯಾದೀತು,
ಒಮ್ಮೆ ಮೆರೆದ ದೈರ್ಯ ಶೌರ್ಯ ಇನ್ನೊಮ್ಮೆ ಪುಂಡು ಬಂಡಾಟವಾದಾವು,
ಒಮ್ಮೆ ನಂಬಿದ ನೆರೆ ಬೆಂಬಲ ಇನ್ನೊಮ್ಮೆ ಬರಿ ನೆರಿಕೆಯಾದೀತು
ಒಮ್ಮೆ ಕೂಡಿದ ಒಪ್ಪಂದ ಇನ್ನೊಮ್ಮೆ ಚಕ್ಕಂದವಾದೀತು
ಒಮ್ಮೆ ಹರಿದ ಹುಮ್ಮಸ್ಸು ಇನ್ನೊಮ್ಮೆ ಹುಚ್ಚು ಎನಿಸೀತು
ಒಮ್ಮೆ ನಡೆಸಿದ ತಯ್ಯಾರಿ ಇನ್ನೊಮ್ಮೆ ವಯ್ಯಾರವಾದೀತು
ಒಮ್ಮೆ ದೊರೆತ ಬಿರುದಿನ ಪುಚ್ಚ ಒಣರವುದೆಯಾದೀತು ಇನ್ನೊಮ್ಮೆ
ಒಮ್ಮೆ ದೂರೆತ ಬಹುಮಾನಪದಕ ಖೋಟಾ ಪೈಸಾವಾದೀತು
ಇನ್ನೊಮ್ಮೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...