ಕೃಪಾ ಸಾಗರ

ಕೇಳಲಾರೆಯೂ ಹರಿ ನನ್ನ ಆಲಾಪ
ನಿನಗಾಗಿ ನಾನು ಪರಿತಪಿಸಿರುವೆ
ನನ್ನ ಬಾಳಿನಾಂಗಳದಲಿ ನಿನ್ನ ರೂಪ
ಕಂಡು ನಾನು ಮೋಹಿಸಬೇಕೆಂದಿರುವೆ

ಕೊಳಲಿನ ಧನಿ ಹರಿಯಲಿ ಎಲ್ಲೆಲ್ಲೂ
ತುಂಬಲಿ ಎನ್ನ ಎದೆಯ ಬಾನಲಿ
ಮನದ ಮೂಲೆಯಲ್ಲೂ ನಿನ್ನ ಪ್ರೀತಿ ಚೆಲ್ಲು
ನಾಶಗೊಳ್ಳಲಿ ವಿಷಯ ಸುಖ ಬೇಲಿ

ಎಷ್ಟು ಆರಾಧಿಸಿಲಿ ನಿನ್ನ ಸ್ನೇಹ
ಪ್ರಸನ್ನ ನಾಗೆಯೂ ನೀನೊಮ್ಮೆ ನನ್ನ
ತುಂಬಿ ತುಳುಕಲು ಬಾಳ ಬಸಿರಲಿ ನೇಹ
ಅಂಧಕಾರ ಕರಗಿ ಆಗಲಿ ಜೊನ್ನ

ನಿನ್ನ ತೇಜೊ ಥಳಕಿನ ವದನಾರವಿಂದ
ಕಂಡು ಪುಲಕಿತ ಗೊಂಡಿದೆ ನನ್ನ ದೇಹ
ಎತ್ತೆತ್ತ ನೋಡಲೆಲ್ಲಿ ನೀನೆ ಗೋವಿಂದ
ಎನ್ನ ಬಾಳಿನ ತುಂಬ ನಿನ್ನದೆ ಮೋಹ

ಭಾಗ್ಯದ ದಿನವೆಂದು ನನಗೆ ಬಂದಿತು
ಅನುಭವಿಸಬೇಕೆಂದಿರುವೆ ಆ ದಿವ್ಯಸಂಗ
ಅದಕ್ಕಾಗಿ ನನ್ನ ಮನ ನಿತ್ಯವೂ ಬೇಡಿತು
ಮಾಣಿಕ್ಯ ವಿಠಲ ಹರಿಸಾಗರದಿಂದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೩೩
Next post ಮಲ್ಲಿ – ೧೧

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…