ಕೃಪಾ ಸಾಗರ

ಕೇಳಲಾರೆಯೂ ಹರಿ ನನ್ನ ಆಲಾಪ
ನಿನಗಾಗಿ ನಾನು ಪರಿತಪಿಸಿರುವೆ
ನನ್ನ ಬಾಳಿನಾಂಗಳದಲಿ ನಿನ್ನ ರೂಪ
ಕಂಡು ನಾನು ಮೋಹಿಸಬೇಕೆಂದಿರುವೆ

ಕೊಳಲಿನ ಧನಿ ಹರಿಯಲಿ ಎಲ್ಲೆಲ್ಲೂ
ತುಂಬಲಿ ಎನ್ನ ಎದೆಯ ಬಾನಲಿ
ಮನದ ಮೂಲೆಯಲ್ಲೂ ನಿನ್ನ ಪ್ರೀತಿ ಚೆಲ್ಲು
ನಾಶಗೊಳ್ಳಲಿ ವಿಷಯ ಸುಖ ಬೇಲಿ

ಎಷ್ಟು ಆರಾಧಿಸಿಲಿ ನಿನ್ನ ಸ್ನೇಹ
ಪ್ರಸನ್ನ ನಾಗೆಯೂ ನೀನೊಮ್ಮೆ ನನ್ನ
ತುಂಬಿ ತುಳುಕಲು ಬಾಳ ಬಸಿರಲಿ ನೇಹ
ಅಂಧಕಾರ ಕರಗಿ ಆಗಲಿ ಜೊನ್ನ

ನಿನ್ನ ತೇಜೊ ಥಳಕಿನ ವದನಾರವಿಂದ
ಕಂಡು ಪುಲಕಿತ ಗೊಂಡಿದೆ ನನ್ನ ದೇಹ
ಎತ್ತೆತ್ತ ನೋಡಲೆಲ್ಲಿ ನೀನೆ ಗೋವಿಂದ
ಎನ್ನ ಬಾಳಿನ ತುಂಬ ನಿನ್ನದೆ ಮೋಹ

ಭಾಗ್ಯದ ದಿನವೆಂದು ನನಗೆ ಬಂದಿತು
ಅನುಭವಿಸಬೇಕೆಂದಿರುವೆ ಆ ದಿವ್ಯಸಂಗ
ಅದಕ್ಕಾಗಿ ನನ್ನ ಮನ ನಿತ್ಯವೂ ಬೇಡಿತು
ಮಾಣಿಕ್ಯ ವಿಠಲ ಹರಿಸಾಗರದಿಂದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೩೩
Next post ಮಲ್ಲಿ – ೧೧

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…