ರಾಧೆ ಗೋವಿಂದ

ಯಶೋಧೆ ಕಂದ ರಾಧೆ ಗೋವಿಂದ
ತೋರು ನಿನ್ನ ದಿವ್ಯರೂಪ
ನನ್ನ ಬಾಳಿನಲಿ ನೀನೊಮ್ಮೆ ಬಂದು
ಕಳೆಯೋ ಎನ್ನ ಕರ್‍ಮಗಳ ಪಾಪ

ನಲುಗಿರುವೆ ನಾ ನಿನ್ನ ಸುಂದರ ಮಾಯೆಗೆ
ನನ್ನ ನಿಜ ಸ್ವರೂಪ ಕಳೆದಿರುವೆ
ಇಂದಿನ ಬಾಳು ವಿಶ್ವಾಸ ವಿಲ್ಲದಿದ್ದರೂ
ನಾಳಿನ ಕನಸುಗಳ ಅಳೆದಿರುವೆ

ನನ್ನ ಅಂತಃಕರಳು ಕರಗಿದೆ ದೇವ
ಕಂಗಳ ನೀರು ಧಾರೆಯಾಗಿವೆ
ಆದರೆ ನಿನ್ನ ಸಾಮಿಪ್ಯವಿಲ್ಲದಿರೆ
ನನ್ನ ಭಾವಗಳು ನೀರಸವಾಗಿವೆ

ನಿನ್ನ ಲೀಲೆಗೆ ಕೊನೆ ಎಲ್ಲಿ ಕೃಷ್ಣ
ಪಾರ್‍ಥ ಸಾರಥಿ ನೀನಾದೆ ರಂಗ
ಗೀತೆಯಿಂದ ಜಗವ ಬೆಳಗಿದೆ
ಮಾಣಿಕ್ಯ ವಿಠಲನಾಗಲಿ ಜನಾಂಗ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೩೧
Next post ಮಲ್ಲಿ – ೯

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…