ನನ್ನ-ನಿನ್ನ ಅಂತರ!

ನಿನ್ನದು ಆ ತೀರ-ನನ್ನದು ಈ ತೀರ
ನಟ್ಟನಡುವಿನಂತರ, ತೆರೆಯ ಅಭ್ಯಂತರ
ಕಿರಿದಹುದು ಕಿರಿದಲ್ಲ-ಹಿರಿದಲ್ಲ ಹಿರಿದಹುದು
ಕಿರುತೊರೆಯ ಅಂತರ-ಕಡಲಿನಂತರ!

ಹರಿಯುವಲೆಗಳಂತೆನ್ನ ಮನಸಿನಾತುರ
ಹರಿಯುತಿದೆ, ಕೊರೆಯುತಿದೆ ಒಲವ ಕಾತರ
ಮೌನದಲ್ಲೆ ಮರುಗಿಸಿದೆ ಹೃದಯದ ಭಾರ
ಕಿರುತೊರೆಯ ಅಂತರ-ಕಡಲಿನಂತರ!

ಮುಗಿಲಿನ ಮಡಿಲಿನಲ್ಲಿ ಮೋಡದ ಮರೆಗೆ
ಮಿಣುಕುತಿರುವ ತಾರೆಗಿಂತ ದೂರ ಆಚೆಗೆ
ಸಾಗುವಾಸೆ ಆಗಿಹೋಯ್ತು-ಎದೆಯ ಸುಡುಹೊಗೆ!
ಕಿರುತೊರೆಯ ಅಂತರ-ಕಡಲಿನಂತರ!

ಈ ತೀರ-ಆತೀರ-ಎಂದೆಂದು ಬಲುದೂರ
ಸಂಧಿಸಲು ಹವಣುಂಟು-ನಟ್ಟನಡುವಿನಂತರ
ಬಲು ಕಿರಿದು ನಾಲ್ಕುಗೇಣು, ಹವಣೆಲ್ಲ ಹುಡಿದಾರ
ಕಿರುತೊರೆಯ ಅಂತರ-ಕಡಲಿನಂತರ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರು ಹಿತವರು?
Next post ಲಿಂಗಮ್ಮನ ವಚನಗಳು – ೮

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…