ನಾನೆ ಮಾಮರ ನಾನೆ ಇಂಚರ

ನಾನೆ ಮಾಮರ ನಾನೆ ಇಂಚರ
ನಾನೆ ಮುಳ್ಳಿನ ಪಂಜರ
ನಾನೆ ನೂಪುರ ನಾನೆ ಕರ್‍ಪುರ
ನಾನೆ ನಿಗಿನಿಗಿ ನಾಗರ ||೧||

ಎದೆಯ ತೊಟ್ಟಿಲು ಹಾಲು ಬಟ್ಟಲು
ಏಕೆ ಕೋಪದ ಕರಗಸಾ
ನಾನೆ ಸಕ್ಕರೆ ನಗೆಯ ಕೊಕ್ಕರೆ
ಏಕೆ ಕಾಗೆಯ ಕಸಮಸಾ ||೨||

ಚಿಪ್ಪು ಒಡೆಯಲಿ ಚಲುವು ಸಿಡಿಯಲಿ
ಸಾಕು ಕರ್‍ಮದ ಕಟಮಟಾ
ಜಾತಿ ಕೋತಿಯ ಪಾತಿ ಪೈಜಣ
ಜಾರಿ ಹೋಗಲಿ ಲಟಲಟಾ ||೩||

ಕಟ್ಟು ಕಂಕಣ ಮುಟ್ಟು ಮುಂಕಣ
ತಟ್ಟು ಕೊಂಕಣ ಠಂಠಣಾ
ಬದುಕು ಸತ್ಯಾ ಸಾವು ಮಿಥ್ಯಾ
ಆಗು ದೇವನ ರಿಂಗಣಾ ||೪||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂತರ್ ಧ್ವನಿ
Next post ಚಪ್ಪಾಳೆ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…