ಯಾರೂ ತಿಳಿಯರು ನಿನ್ನ

ಯಾರೂ ತಿಳಿಯರು ನಿನ್ನ
ಮನದ ಮಾಯ ಜಾಲ |
ಮಾಧವ ನಿನಗಲ್ಲದೇ ಇನ್ನಾರಿಗಿದೆ
ಈ ಪರಿಯ ಪ್ರಭೆಯು||

ಪಂಚಪಾಂಡವರಿಗೆ ನೀನೊಲಿದು
ಧರ್ಮವನು ಕೈ ಹಿಡಿದೆ|
ಸೋದರಿ ದ್ರೌಪದಿಯ
ಮಾನಾಪಮಾನವನು ಕಾಯ್ದೆ|
ದರ್ಪ ದುರಾಂಕಾರ ದುರ್ಬುದ್ಧೀಯ
ನೀನಳಿಸಿ ಅಧರ್ಮವ ಅಡಗಿಸಿದೆ||

ಜನ್ಮಜನ್ಮಾಂತರದ
ಪಾಪಕರ್ಮವನುನೀ ಕಳೆದು
ದಟ್ಟ ದರಿದ್ರರಿಗೋಲಿದು
ಸಕಲ ಸಂಪದವಿಯನಿತ್ತೆ|
ಮತ್ತೆ ಪಾಮರರಿಗೆ ನೀ ಒಲಿದು
ಮಂಗಳ ಪದವಿಗಳನಿತ್ತೆ||

ಸತ್ಯ ಧರ್ಮ ನಿಷ್ಠೆಯಲಿ
ನಡೆವ ಸದ್ಭಕ್ತರಿಗೆ ನೀನೊಲಿದು|
ತಂದೆ ನೀನಾಗಿ ಕರುಣದಿ ಕಣ್ಣತೆರೆದು
ಮುಕ್ತಿ ದಯಪಾಲಿಸು ದೀನಬಂಧು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೈವಿಕ ತಂತ್ರಜ್ಞಾನದ ಮೈಲುಗಲ್ಲುಗಳು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೮೮

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…