ಶವಪರೀಕ್ಷೆ

ನೀರು ಕಾಯುತ ನೋಡಲು
ಬಚ್ಚಲಿಗೆ ಹೋದೆ
ಉರಿ ಕೊನೆತನಕ ಬಂದು
ಕಟ್ಟಿಗೆ ಕೈಹಿಡಿಯಷ್ಟು ಉಳಿದು
ಒಲೆಯಿಂದ ಹೊರಗೆ ಬಿದ್ದಿದೆ;
ಥಟ್ಟನೆ ವಯಸ್ಸಾಯಿತೆನ್ನಿಸಿತು
ಸರಿದ ಬದುಕ ತಲೆಗೆ ಕರೆದು
ದುರ್ಬೀನಡಿಗೆ ದಬ್ಬಿ ಹುಡುಕಿದೆ.
ಒಂದು ಮಲ್ಲಿಗೆ
ಒಂದು ಗುಲಾಬಿ
ಇಲ್ಲದಿದ್ದರೆ ಸಾಯಲಿ
ಗಾಯ ಮಾಯಲಿ
ಎಂದು ತೇಯ್ದು ಹಚ್ಚಲು ಎಂಥದೋ ಮೂಲಿಕೆ-
ಇಪ್ಪೇ ಸಿಕ್ಕು ಉಳಿದೆಲ್ಲ ಸುಟ್ಟರೂ
ಅಷ್ಟೇ ಗಳಿಕೆ ಎಂದು
ಕಣ್ಣು ತಿಕ್ಕಿ ತಿಕ್ಕಿ
ಹೆಣದ ಮೈಯ ಪ್ರತಿಕಣ ಹೆಕ್ಕಿ ಹೆಕ್ಕಿ ಹುಡುಕಿದೆ
ಮೂವತ್ತು ಗ್ರೀಷ್ಮಗಳ ಭೀಷ್ಮ ಬಯಲಲ್ಲಿ
ಸುಟ್ಟ ಕವಿಸಮಯಗಳ ಎಷ್ಟೋ ಹಾಳೆ
ಆ ಕೂಳೆಗೇ ಬಾಯಿಟ್ಟು ತಡಕುವ
ಹಸು ಹೆಸರಿನ ಹಿಂಡುಮೂಳೆ
ಕಂಡು ರಕ್ತ ಛಿಲ್ಲೆನಿಸಿತು. ಮಿಂದೆ
ಕಾದ ನೀರ ಹನಿ ಹನಿಯೂ ಮಣ ಉಪಕಾರವೆನಿಸಿತು
ಬಾಳು ಕೊರಡಲ್ಲ ಎಂದು ನಾಚಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತ್ಯಾಗ
Next post ಲಕ್ಷ್ಮೀಶ ಕವಿ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

cheap jordans|wholesale air max|wholesale jordans|wholesale jewelry|wholesale jerseys