ನೀರು ಕಾಯುತ ನೋಡಲು
ಬಚ್ಚಲಿಗೆ ಹೋದೆ
ಉರಿ ಕೊನೆತನಕ ಬಂದು
ಕಟ್ಟಿಗೆ ಕೈಹಿಡಿಯಷ್ಟು ಉಳಿದು
ಒಲೆಯಿಂದ ಹೊರಗೆ ಬಿದ್ದಿದೆ;
ಥಟ್ಟನೆ ವಯಸ್ಸಾಯಿತೆನ್ನಿಸಿತು
ಸರಿದ ಬದುಕ ತಲೆಗೆ ಕರೆದು
ದುರ್ಬೀನಡಿಗೆ ದಬ್ಬಿ ಹುಡುಕಿದೆ.
ಒಂದು ಮಲ್ಲಿಗೆ
ಒಂದು ಗುಲಾಬಿ
ಇಲ್ಲದಿದ್ದರೆ ಸಾಯಲಿ
ಗಾಯ ಮಾಯಲಿ
ಎಂದು ತೇಯ್ದು ಹಚ್ಚಲು ಎಂಥದೋ ಮೂಲಿಕೆ-
ಇಪ್ಪೇ ಸಿಕ್ಕು ಉಳಿದೆಲ್ಲ ಸುಟ್ಟರೂ
ಅಷ್ಟೇ ಗಳಿಕೆ ಎಂದು
ಕಣ್ಣು ತಿಕ್ಕಿ ತಿಕ್ಕಿ
ಹೆಣದ ಮೈಯ ಪ್ರತಿಕಣ ಹೆಕ್ಕಿ ಹೆಕ್ಕಿ ಹುಡುಕಿದೆ
ಮೂವತ್ತು ಗ್ರೀಷ್ಮಗಳ ಭೀಷ್ಮ ಬಯಲಲ್ಲಿ
ಸುಟ್ಟ ಕವಿಸಮಯಗಳ ಎಷ್ಟೋ ಹಾಳೆ
ಆ ಕೂಳೆಗೇ ಬಾಯಿಟ್ಟು ತಡಕುವ
ಹಸು ಹೆಸರಿನ ಹಿಂಡುಮೂಳೆ
ಕಂಡು ರಕ್ತ ಛಿಲ್ಲೆನಿಸಿತು. ಮಿಂದೆ
ಕಾದ ನೀರ ಹನಿ ಹನಿಯೂ ಮಣ ಉಪಕಾರವೆನಿಸಿತು
ಬಾಳು ಕೊರಡಲ್ಲ ಎಂದು ನಾಚಿದೆ.
*****
Related Post
ಸಣ್ಣ ಕತೆ
-
ಪ್ರಥಮ ದರ್ಶನದ ಪ್ರೇಮ
ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…
-
ಕರಿಗಾಲಿನ ಗಿರಿರಾಯರು
ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…
-
ಹಳ್ಳಿ…
ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…
-
ಎರಡು ಪರಿವಾರಗಳು
ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…
-
ಮೌನವು ಮುದ್ದಿಗಾಗಿ!
ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…