ಶವಪರೀಕ್ಷೆ

ನೀರು ಕಾಯುತ ನೋಡಲು
ಬಚ್ಚಲಿಗೆ ಹೋದೆ
ಉರಿ ಕೊನೆತನಕ ಬಂದು
ಕಟ್ಟಿಗೆ ಕೈಹಿಡಿಯಷ್ಟು ಉಳಿದು
ಒಲೆಯಿಂದ ಹೊರಗೆ ಬಿದ್ದಿದೆ;
ಥಟ್ಟನೆ ವಯಸ್ಸಾಯಿತೆನ್ನಿಸಿತು
ಸರಿದ ಬದುಕ ತಲೆಗೆ ಕರೆದು
ದುರ್ಬೀನಡಿಗೆ ದಬ್ಬಿ ಹುಡುಕಿದೆ.
ಒಂದು ಮಲ್ಲಿಗೆ
ಒಂದು ಗುಲಾಬಿ
ಇಲ್ಲದಿದ್ದರೆ ಸಾಯಲಿ
ಗಾಯ ಮಾಯಲಿ
ಎಂದು ತೇಯ್ದು ಹಚ್ಚಲು ಎಂಥದೋ ಮೂಲಿಕೆ-
ಇಪ್ಪೇ ಸಿಕ್ಕು ಉಳಿದೆಲ್ಲ ಸುಟ್ಟರೂ
ಅಷ್ಟೇ ಗಳಿಕೆ ಎಂದು
ಕಣ್ಣು ತಿಕ್ಕಿ ತಿಕ್ಕಿ
ಹೆಣದ ಮೈಯ ಪ್ರತಿಕಣ ಹೆಕ್ಕಿ ಹೆಕ್ಕಿ ಹುಡುಕಿದೆ
ಮೂವತ್ತು ಗ್ರೀಷ್ಮಗಳ ಭೀಷ್ಮ ಬಯಲಲ್ಲಿ
ಸುಟ್ಟ ಕವಿಸಮಯಗಳ ಎಷ್ಟೋ ಹಾಳೆ
ಆ ಕೂಳೆಗೇ ಬಾಯಿಟ್ಟು ತಡಕುವ
ಹಸು ಹೆಸರಿನ ಹಿಂಡುಮೂಳೆ
ಕಂಡು ರಕ್ತ ಛಿಲ್ಲೆನಿಸಿತು. ಮಿಂದೆ
ಕಾದ ನೀರ ಹನಿ ಹನಿಯೂ ಮಣ ಉಪಕಾರವೆನಿಸಿತು
ಬಾಳು ಕೊರಡಲ್ಲ ಎಂದು ನಾಚಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತ್ಯಾಗ
Next post ಲಕ್ಷ್ಮೀಶ ಕವಿ

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…