Home / ಕವನ / ಅನುವಾದ / ಥಿಯೇಟರ್ ಇಂಪ್ರೆಶನ್ಸ್

ಥಿಯೇಟರ್ ಇಂಪ್ರೆಶನ್ಸ್

ಟ್ರ್ಯಾಜಿಡಿಯ ಬಹಳ ಮುಖ್ಯವಾದ ಅಂಕವೆಂದರೆ ಆರನೆಯ ಅಂಕ.
ರಂಗಮಂಚದ ಪುನರುಜ್ಜೀವನ.
ವಿಗ್ಗು, ಡ್ರೆಸ್ಸುಗಳನ್ನು ಸರಿಮಾಡಿಕೊಳ್ಳುವುದು,
ಎದೆಗೆ ಚುಚ್ಚಿದ ಚೂರಿಯನ್ನು ಕೀಳುವುದು,
ಕತ್ತಿಗೆ ಬಿಗಿದ ನೇಣು ಹಗ್ಗತೆಗೆಯುವುದು,
ಪ್ರೇಕ್ಷಕರಿಗೆ ಮುಖ ತೋರಿಸಲೆಂದು
ನಾಟಕದಲ್ಲಿ ಬದುಕಿದವರೊಡನೆ ಸತ್ತರೂ ಎದ್ದು ನಿಲ್ಲುವುದು.
ಪ್ರೇಕ್ಷಕರಿಗೆ ನಾಯಕರ ವಂದನೆ
ಸತ್ತನಾಯಕಿ ತನ್ನ ಬಿಳಿಯ ಕೈಯನ್ನು
ಎದೆಯ ಗಾಯಕ್ಕೆ ಮರೆಯಾಗಿ ಇಟ್ಟುಕೊಳ್ಳುತ್ತಾಳೆ.
ನೇಣಿಗೆ ಸಿಕ್ಕ ಕೊರಳು ಬಾಗಿ ನಮಿಸುತ್ತದೆ.
ಪ್ರೇಕ್ಷಕರಿಗೆ ಎಲ್ಲರ ನಮಸ್ಕಾರ…
ದುಷ್ಟತನ ಸಭ್ಯತೆಯ ಕೈ ಹಿಡಿಯುತ್ತದೆ.
ಶೂಲಕ್ಕೇರಿದವನು ಕೊಂದವನ ನೋಡಿ ನಗುತ್ತಾನೆ.
ಕ್ರಾಂತಿಕಾರಿ, ಇಷ್ಟೂ ಕೋಪವಿಲ್ಲದೆ,
ನಿರಂಕುಶನ ಬಳಿ ಸಾರಿ ಬೆನ್ನ ಮೇಲೆ ಕೈ ಇಡುತ್ತಾನೆ.
ಚಿನ್ನದ ಬಣ್ಣದ ಚಪ್ಪಲಿ ಅನಂತತೆಯತ್ತ ಹೆಜ್ಜೆಹಾಕುತ್ತದೆ.
ಬೀಸುತಿರುವ ಕೈಯಲ್ಲಿನ ಹ್ಯಾಟು ನೀತಿಯನ್ನು ಗುಡಿಸಿಹಾಕುತ್ತದೆ.
ನಾಳೆ ಮತ್ತೆಹೊಸದಾಗಲು ಎಲ್ಲ ಸಿದ್ಧ.
ಮೂರು, ನಾಲ್ಕನೆಯ ಅಂಕದಲ್ಲಿ ಮೊದಲು ಸತ್ತವರೆಲ್ಲ
ಒಬ್ಬರ ಹಿಂದೊಬ್ಬರು ಸಾಲಾಗಿ ಬರುತ್ತಾರೆ.
ಇಷ್ಟೂ ಸುಳಿವಿಲ್ಲದಂತೆ ಮಾಯವಾಗಿದ್ದವರು
ಪವಾಡವೆಂಬಂತೆ ಕಾಣಿಸಿಕೊಳ್ಳುತ್ತಾರೆ.
ಈ ಕ್ಷಣಕ್ಕಾಗಿಯೇ ಅವರೆಲ್ಲ
ಕಾಸ್ಟ್ಯೂಮು ತೆಗೆಯದೆ ಮೇಕಪ್ಪು ಅಳಿಸದೆ
ತಾಳ್ಮೆಯಿಂದ ಕಾಯುತ್ತಾ ಮರೆಯಲ್ಲಿ ನಿಂತಿದ್ದರಲ್ಲ
ಅದು ನನ್ನ ಮನಸ್ಸನ್ನು ಕರಗಿಸಿಬಿಡುತ್ತದೆ.
ಪರದೆ ಇಳಿಯುತ್ತಾ
ಇನ್ನೇನು ನೆಲ ಮುಟ್ಟುವ ಮೊದಲು
ಕಣ್ಣಿಗೆ ಒಂದಿಷ್ಟು ಕಾಣುತ್ತದಲ್ಲ
ಅದು ನಿಜವಾದ ರಸಾನುಭವ :
ಉದುರಿದ ಹೂವೆತ್ತಿಕೊಳ್ಳಲು ಆತುರದಿಂದ ಚಾಚುವ ಕೈ,
ಬಿದ್ದ ಕತ್ತಿ ಎತ್ತಿಕೊಳ್ಳಲು ಚಾಚುವ ಇನ್ನೊಂದು ಕೈ.
ಅದೃಶ್ಯವಾದ ಮೂರನೆಯ ಕೈ
ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತದೆ
ನನ್ನ ಕತ್ತು ಹಿಸುಕುತ್ತದೆ.
*****
ಮೂ: ವಿಸ್ಲಾವ ಝ್ಯಿಂಬೋಸ್ಕ

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...