ಥಿಯೇಟರ್ ಇಂಪ್ರೆಶನ್ಸ್

ಟ್ರ್ಯಾಜಿಡಿಯ ಬಹಳ ಮುಖ್ಯವಾದ ಅಂಕವೆಂದರೆ ಆರನೆಯ ಅಂಕ.
ರಂಗಮಂಚದ ಪುನರುಜ್ಜೀವನ.
ವಿಗ್ಗು, ಡ್ರೆಸ್ಸುಗಳನ್ನು ಸರಿಮಾಡಿಕೊಳ್ಳುವುದು,
ಎದೆಗೆ ಚುಚ್ಚಿದ ಚೂರಿಯನ್ನು ಕೀಳುವುದು,
ಕತ್ತಿಗೆ ಬಿಗಿದ ನೇಣು ಹಗ್ಗತೆಗೆಯುವುದು,
ಪ್ರೇಕ್ಷಕರಿಗೆ ಮುಖ ತೋರಿಸಲೆಂದು
ನಾಟಕದಲ್ಲಿ ಬದುಕಿದವರೊಡನೆ ಸತ್ತರೂ ಎದ್ದು ನಿಲ್ಲುವುದು.
ಪ್ರೇಕ್ಷಕರಿಗೆ ನಾಯಕರ ವಂದನೆ
ಸತ್ತನಾಯಕಿ ತನ್ನ ಬಿಳಿಯ ಕೈಯನ್ನು
ಎದೆಯ ಗಾಯಕ್ಕೆ ಮರೆಯಾಗಿ ಇಟ್ಟುಕೊಳ್ಳುತ್ತಾಳೆ.
ನೇಣಿಗೆ ಸಿಕ್ಕ ಕೊರಳು ಬಾಗಿ ನಮಿಸುತ್ತದೆ.
ಪ್ರೇಕ್ಷಕರಿಗೆ ಎಲ್ಲರ ನಮಸ್ಕಾರ…
ದುಷ್ಟತನ ಸಭ್ಯತೆಯ ಕೈ ಹಿಡಿಯುತ್ತದೆ.
ಶೂಲಕ್ಕೇರಿದವನು ಕೊಂದವನ ನೋಡಿ ನಗುತ್ತಾನೆ.
ಕ್ರಾಂತಿಕಾರಿ, ಇಷ್ಟೂ ಕೋಪವಿಲ್ಲದೆ,
ನಿರಂಕುಶನ ಬಳಿ ಸಾರಿ ಬೆನ್ನ ಮೇಲೆ ಕೈ ಇಡುತ್ತಾನೆ.
ಚಿನ್ನದ ಬಣ್ಣದ ಚಪ್ಪಲಿ ಅನಂತತೆಯತ್ತ ಹೆಜ್ಜೆಹಾಕುತ್ತದೆ.
ಬೀಸುತಿರುವ ಕೈಯಲ್ಲಿನ ಹ್ಯಾಟು ನೀತಿಯನ್ನು ಗುಡಿಸಿಹಾಕುತ್ತದೆ.
ನಾಳೆ ಮತ್ತೆಹೊಸದಾಗಲು ಎಲ್ಲ ಸಿದ್ಧ.
ಮೂರು, ನಾಲ್ಕನೆಯ ಅಂಕದಲ್ಲಿ ಮೊದಲು ಸತ್ತವರೆಲ್ಲ
ಒಬ್ಬರ ಹಿಂದೊಬ್ಬರು ಸಾಲಾಗಿ ಬರುತ್ತಾರೆ.
ಇಷ್ಟೂ ಸುಳಿವಿಲ್ಲದಂತೆ ಮಾಯವಾಗಿದ್ದವರು
ಪವಾಡವೆಂಬಂತೆ ಕಾಣಿಸಿಕೊಳ್ಳುತ್ತಾರೆ.
ಈ ಕ್ಷಣಕ್ಕಾಗಿಯೇ ಅವರೆಲ್ಲ
ಕಾಸ್ಟ್ಯೂಮು ತೆಗೆಯದೆ ಮೇಕಪ್ಪು ಅಳಿಸದೆ
ತಾಳ್ಮೆಯಿಂದ ಕಾಯುತ್ತಾ ಮರೆಯಲ್ಲಿ ನಿಂತಿದ್ದರಲ್ಲ
ಅದು ನನ್ನ ಮನಸ್ಸನ್ನು ಕರಗಿಸಿಬಿಡುತ್ತದೆ.
ಪರದೆ ಇಳಿಯುತ್ತಾ
ಇನ್ನೇನು ನೆಲ ಮುಟ್ಟುವ ಮೊದಲು
ಕಣ್ಣಿಗೆ ಒಂದಿಷ್ಟು ಕಾಣುತ್ತದಲ್ಲ
ಅದು ನಿಜವಾದ ರಸಾನುಭವ :
ಉದುರಿದ ಹೂವೆತ್ತಿಕೊಳ್ಳಲು ಆತುರದಿಂದ ಚಾಚುವ ಕೈ,
ಬಿದ್ದ ಕತ್ತಿ ಎತ್ತಿಕೊಳ್ಳಲು ಚಾಚುವ ಇನ್ನೊಂದು ಕೈ.
ಅದೃಶ್ಯವಾದ ಮೂರನೆಯ ಕೈ
ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತದೆ
ನನ್ನ ಕತ್ತು ಹಿಸುಕುತ್ತದೆ.
*****
ಮೂ: ವಿಸ್ಲಾವ ಝ್ಯಿಂಬೋಸ್ಕ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾ ಸೈ ನೀ ಸೈ
Next post ಟಿ ಎಸ್ ಏಲಿಯಟ್ ನ “ದಿ ವೇಸ್ಟ್ ಲ್ಯಾಂಡ್” ನಿಸ್ಸಾರ ಬದುಕಿನ ವ್ಯಾಖ್ಯಾನ

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…