ಶ್ರೀ ಸತ್ಯ ಶಿವಯುಗದ ಕಲ್ಪತರಲಿ

ಓ ಮುಗಿಲ ದೇವತೆಯೆ ಓ ಕಡಲ ರೂಪಸಿಯೆ
ಓ ಹೇಳಿ ಕಿಟ್ಟಣ್ಣನೆಂದು ಬರುವ
ಹೂವಿಗಿಂತಲು ಹೂವು ಮುದ್ದಿಗಿಂತಲು ಮುದ್ದು
ಕೆನೆಹಾಲ ಸವಿಗಲ್ಲ ಎಂದು ತರುವ

ಓ ಗಗನ ಮಲ್ಲಿಗೆಯೆ ಓ ಸಿಡಿಲ ಸಂಪಿಗೆಯೆ
ಆ ನಗೆಯ ಕಂದಯ್ಯನೆಂದು ಬರುವ
ಚನ್ನಯ್ಯ ಚಲುವಯ್ಯ ಚಿನ್ನಯ್ಯ ಚಿಕ್ಕಯ್ಯ
ಓ ಹೇಳಿ ಮಗುವಾಗಿ ಎಂದು ನಗುವ

ಓ ನೋಡು ಪುಟ್ಟಣ್ಣ ಕೆಂಜೆಡೆಯ ಕಿಟ್ಟಣ್ಣ
ನೋಡಿಲ್ಲಿ ಈ ವಿಶ್ವವೇನಾಗಿದೆ
ಗುಡಿಯಲ್ಲಿ ದೇವರಾ ಮಾರಾಟ ಮಾಡಿಹರು
ನೋಡಿಲ್ಲಿ ಕಲಿಕಾಲವೇನಾಗಿದೆ

ಗಿಡಮಂಗ ನಾಚಿಹವು ಮನೆಮಂಗರಾಟಕ್ಕೆ
ಹಾಲೆಂದು ಬಿಳಿಸುಣ್ಣ ಉಣಿಸಾಗಿದೆ
ಧರ್ಮದಾ ಹೆಸರಲ್ಲಿ ಲಂಪಟರ ಕರ್ಮಾಂಡ
ಚರ್ಮದಾ ಚಟಚೀಲ ತುಳಿತುಂಬಿದೆ

ಓ ಸಾಕು ಛೀಸಾಕು ಛೀಯುಗದ ಛೀಪಾಡು
ಚನ್ನ ಸುಂದರ ಚಲುವ ಕಾಲ ಬರಲಿ
ನೀ ಬರಲಿ ಕಾಲ್ಗೆಜ್ಜೆ ಘಲ್ಘಿಲಿಸಿ ಯುಗ ತರಲಿ
ಶ್ರೀ ಸತ್ಯ ಶಿವಯುಗದ ಕಲ್ಬತರಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಊರ್ಮಿಳೆ
Next post ಸಂಗೀತ

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…