ಶ್ರೀ ಸತ್ಯ ಶಿವಯುಗದ ಕಲ್ಪತರಲಿ

ಓ ಮುಗಿಲ ದೇವತೆಯೆ ಓ ಕಡಲ ರೂಪಸಿಯೆ
ಓ ಹೇಳಿ ಕಿಟ್ಟಣ್ಣನೆಂದು ಬರುವ
ಹೂವಿಗಿಂತಲು ಹೂವು ಮುದ್ದಿಗಿಂತಲು ಮುದ್ದು
ಕೆನೆಹಾಲ ಸವಿಗಲ್ಲ ಎಂದು ತರುವ

ಓ ಗಗನ ಮಲ್ಲಿಗೆಯೆ ಓ ಸಿಡಿಲ ಸಂಪಿಗೆಯೆ
ಆ ನಗೆಯ ಕಂದಯ್ಯನೆಂದು ಬರುವ
ಚನ್ನಯ್ಯ ಚಲುವಯ್ಯ ಚಿನ್ನಯ್ಯ ಚಿಕ್ಕಯ್ಯ
ಓ ಹೇಳಿ ಮಗುವಾಗಿ ಎಂದು ನಗುವ

ಓ ನೋಡು ಪುಟ್ಟಣ್ಣ ಕೆಂಜೆಡೆಯ ಕಿಟ್ಟಣ್ಣ
ನೋಡಿಲ್ಲಿ ಈ ವಿಶ್ವವೇನಾಗಿದೆ
ಗುಡಿಯಲ್ಲಿ ದೇವರಾ ಮಾರಾಟ ಮಾಡಿಹರು
ನೋಡಿಲ್ಲಿ ಕಲಿಕಾಲವೇನಾಗಿದೆ

ಗಿಡಮಂಗ ನಾಚಿಹವು ಮನೆಮಂಗರಾಟಕ್ಕೆ
ಹಾಲೆಂದು ಬಿಳಿಸುಣ್ಣ ಉಣಿಸಾಗಿದೆ
ಧರ್ಮದಾ ಹೆಸರಲ್ಲಿ ಲಂಪಟರ ಕರ್ಮಾಂಡ
ಚರ್ಮದಾ ಚಟಚೀಲ ತುಳಿತುಂಬಿದೆ

ಓ ಸಾಕು ಛೀಸಾಕು ಛೀಯುಗದ ಛೀಪಾಡು
ಚನ್ನ ಸುಂದರ ಚಲುವ ಕಾಲ ಬರಲಿ
ನೀ ಬರಲಿ ಕಾಲ್ಗೆಜ್ಜೆ ಘಲ್ಘಿಲಿಸಿ ಯುಗ ತರಲಿ
ಶ್ರೀ ಸತ್ಯ ಶಿವಯುಗದ ಕಲ್ಬತರಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಊರ್ಮಿಳೆ
Next post ಸಂಗೀತ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…