ಶ್ರೀ ಸತ್ಯ ಶಿವಯುಗದ ಕಲ್ಪತರಲಿ

ಓ ಮುಗಿಲ ದೇವತೆಯೆ ಓ ಕಡಲ ರೂಪಸಿಯೆ
ಓ ಹೇಳಿ ಕಿಟ್ಟಣ್ಣನೆಂದು ಬರುವ
ಹೂವಿಗಿಂತಲು ಹೂವು ಮುದ್ದಿಗಿಂತಲು ಮುದ್ದು
ಕೆನೆಹಾಲ ಸವಿಗಲ್ಲ ಎಂದು ತರುವ

ಓ ಗಗನ ಮಲ್ಲಿಗೆಯೆ ಓ ಸಿಡಿಲ ಸಂಪಿಗೆಯೆ
ಆ ನಗೆಯ ಕಂದಯ್ಯನೆಂದು ಬರುವ
ಚನ್ನಯ್ಯ ಚಲುವಯ್ಯ ಚಿನ್ನಯ್ಯ ಚಿಕ್ಕಯ್ಯ
ಓ ಹೇಳಿ ಮಗುವಾಗಿ ಎಂದು ನಗುವ

ಓ ನೋಡು ಪುಟ್ಟಣ್ಣ ಕೆಂಜೆಡೆಯ ಕಿಟ್ಟಣ್ಣ
ನೋಡಿಲ್ಲಿ ಈ ವಿಶ್ವವೇನಾಗಿದೆ
ಗುಡಿಯಲ್ಲಿ ದೇವರಾ ಮಾರಾಟ ಮಾಡಿಹರು
ನೋಡಿಲ್ಲಿ ಕಲಿಕಾಲವೇನಾಗಿದೆ

ಗಿಡಮಂಗ ನಾಚಿಹವು ಮನೆಮಂಗರಾಟಕ್ಕೆ
ಹಾಲೆಂದು ಬಿಳಿಸುಣ್ಣ ಉಣಿಸಾಗಿದೆ
ಧರ್ಮದಾ ಹೆಸರಲ್ಲಿ ಲಂಪಟರ ಕರ್ಮಾಂಡ
ಚರ್ಮದಾ ಚಟಚೀಲ ತುಳಿತುಂಬಿದೆ

ಓ ಸಾಕು ಛೀಸಾಕು ಛೀಯುಗದ ಛೀಪಾಡು
ಚನ್ನ ಸುಂದರ ಚಲುವ ಕಾಲ ಬರಲಿ
ನೀ ಬರಲಿ ಕಾಲ್ಗೆಜ್ಜೆ ಘಲ್ಘಿಲಿಸಿ ಯುಗ ತರಲಿ
ಶ್ರೀ ಸತ್ಯ ಶಿವಯುಗದ ಕಲ್ಬತರಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಊರ್ಮಿಳೆ
Next post ಸಂಗೀತ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys