ಪೂಜೆ

ಎಲ್ಲಾ ಅಬ್ಬರಗಳ ನಡುವೆ ಮೆಲ್ಲಗೆ
ನಿನ್ನ ಧ್ವನಿ ನಿಟ್ಟುಸಿರು ಕೇಳಿಸುತ್ತದೆ
ಬೆವರ ಹನಿ ಗುಂಟ ಇಳಿದ ಶ್ರಮ
ಬೇಗುದಿಯಲಿ ಮಣ್ಣ ಅರಳಿಸಿ ನೀರು ಹನಿಸಿದೆ.

ಸೋಕಿದ ವ್ಯಾಪಕ ಗಾಳಿ ಎದೆಯೊಳಗೆ
ಇಳಿದು ಉಸಿರಾಡಿದ ಸದ್ದುಗಳು
ಹರಡಿ ಹಾಸಿವೆ ಗೊತ್ತೇ ಆಗದ ಹಾಗೆ
ಜೀವ ಜೋಡು ಅಲೆಯ ಬೆಲೆ ಹೆಣೆದಿವೆ.

ನಿನ್ನ ಬರವಿನಲಿ ತೇಲಿ ಸುಖದುಃಖ
ಒಳಹೊರಗೆ ಹಿತಮಿತ ಹೂವು ಗಂಧ
ಸಂಧಾನದ ಇರುವಿಕೆಯು ಭಾವ ಸುಳಿ
ಸುಳಿದು ಹರಿದು ತೇಲಿ ಜಾರಿದ ನದಿಬಯಲು.

ಸ್ನೇಹ ಮೋಹ ನೀಲಿ ಅಂಬರದ ಪಟ
ವರ್ಗ ವರ್ಣದಲಿ ಅದ್ದಿ ತೇಲಿ ತೂಗಿ
ಸೂತ್ರ ಬಿಗಿದ ಕಾಲು ನೆಲದಡಿ ಹೆಜ್ಜೆಯೂರಿ
ಮರುಕ್ಷಣ ಧ್ಯಾನಕ್ಕೆ ಉಕ್ಕಿದ ಕಡಲು.

ಮನಸ್ಸು ಮುತ್ತು ರತ್ನ ಹವಳದ
ದ್ವೀಪ ಬಿಂಬಗ್ರಾಹಿಗೆ ಜಾಗ ಉಂಟು
ಜಗದ ನಿತ್ಯಾರಾಧನೆಯ ಕಾಯಕದಲಿ
ಹೆಗಲಿಗೇರಿದ ಭಾರ ತಾನೇ ಇಳಿಯುವುದು
ಹೆಗರು ಪೂಜೆಯ ಕಾಯಕದಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಗರ ದೈತ್ಯ: ಆಕ್ಟೋಪಸ್
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೨೭

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

cheap jordans|wholesale air max|wholesale jordans|wholesale jewelry|wholesale jerseys