ಪೂಜೆ

ಎಲ್ಲಾ ಅಬ್ಬರಗಳ ನಡುವೆ ಮೆಲ್ಲಗೆ
ನಿನ್ನ ಧ್ವನಿ ನಿಟ್ಟುಸಿರು ಕೇಳಿಸುತ್ತದೆ
ಬೆವರ ಹನಿ ಗುಂಟ ಇಳಿದ ಶ್ರಮ
ಬೇಗುದಿಯಲಿ ಮಣ್ಣ ಅರಳಿಸಿ ನೀರು ಹನಿಸಿದೆ.

ಸೋಕಿದ ವ್ಯಾಪಕ ಗಾಳಿ ಎದೆಯೊಳಗೆ
ಇಳಿದು ಉಸಿರಾಡಿದ ಸದ್ದುಗಳು
ಹರಡಿ ಹಾಸಿವೆ ಗೊತ್ತೇ ಆಗದ ಹಾಗೆ
ಜೀವ ಜೋಡು ಅಲೆಯ ಬೆಲೆ ಹೆಣೆದಿವೆ.

ನಿನ್ನ ಬರವಿನಲಿ ತೇಲಿ ಸುಖದುಃಖ
ಒಳಹೊರಗೆ ಹಿತಮಿತ ಹೂವು ಗಂಧ
ಸಂಧಾನದ ಇರುವಿಕೆಯು ಭಾವ ಸುಳಿ
ಸುಳಿದು ಹರಿದು ತೇಲಿ ಜಾರಿದ ನದಿಬಯಲು.

ಸ್ನೇಹ ಮೋಹ ನೀಲಿ ಅಂಬರದ ಪಟ
ವರ್ಗ ವರ್ಣದಲಿ ಅದ್ದಿ ತೇಲಿ ತೂಗಿ
ಸೂತ್ರ ಬಿಗಿದ ಕಾಲು ನೆಲದಡಿ ಹೆಜ್ಜೆಯೂರಿ
ಮರುಕ್ಷಣ ಧ್ಯಾನಕ್ಕೆ ಉಕ್ಕಿದ ಕಡಲು.

ಮನಸ್ಸು ಮುತ್ತು ರತ್ನ ಹವಳದ
ದ್ವೀಪ ಬಿಂಬಗ್ರಾಹಿಗೆ ಜಾಗ ಉಂಟು
ಜಗದ ನಿತ್ಯಾರಾಧನೆಯ ಕಾಯಕದಲಿ
ಹೆಗಲಿಗೇರಿದ ಭಾರ ತಾನೇ ಇಳಿಯುವುದು
ಹೆಗರು ಪೂಜೆಯ ಕಾಯಕದಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಗರ ದೈತ್ಯ: ಆಕ್ಟೋಪಸ್
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೨೭

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…