ನಮ್ಮ ಊರು ಕನ್ನಡ

ನಮ್ಮ ಊರು ಕನ್ನಡ
ನಮ್ಮ ನೆಲವು ಕನ್ನಡ
ನಾವೇ ನಾವು ಕನ್ನಡಿಗರು||

ಹಚ್ಚಿರಿ ಹಣತೆಯ
ಹಣತೆಯಿಂದ ಹಣತೆಗೆ
ಸಾಲು ಸಾಲು ಬೆಳಗಿರಿ
ನಾವೆ ನಾವು ಆಶಾಕಿರಣಗಳು||

ಸ್ವಾಭಿಮಾನದ ನೆಲವು
ಆತ್ಮಾಭಿಮಾನದ ಬೀಡು
ಕೆಚ್ಚೆದೆಯ ಮಣ್ಣಿನ ಮಕ್ಕಳು
ಕನ್ನಡಾಂಬೆಯ ಕುಲಜರು||

ಸಾವಿರಾರು ಭಾಷೆ ಇರಲಿ
ಯಾರ ತಾಯಿ ಯಾವ ಮಡಿಲು
ಭಾಷೆ ರೀತಿ ನೀತಿ ಇರಲಿ
ಕತ್ತಲು ಬೆಳಕು ಒಂದೇ
ಜಗದಿ ಬೆಳಗುವುದೊಂದೆ ಜ್ಯೋತಿಯು||

ಸುಪ್ರಭಾತ ರವಿಯ ಕಿರಣ
ಕನ್ನಡಮ್ಮ ನೆಲದ ಕರುಣ
ಅನಂತ ದಿಗಂತದಿಂ ಸಾರುತ
ಸಾಗುವ ಕನ್ನಡ ಕನ್ನಡ
ನಾವು ಕನ್ನಡಿಗರೆಂದು
ಕನ್ನಡವು ನಮ್ಮ ಉಸಿರೆಂದೂ ಬಾಳಲಿ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಸ್ತಕದಂಗಡಿಗಳು
Next post ದುಡ್ಡು

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…