Home / ಕವನ / ಕವಿತೆ / ಸ್ಥಾಪನೆ

ಸ್ಥಾಪನೆ

ಒಂಟಿಕಾಲಿನ ಬಕದಂತೆ
ನೀರಿನಲ್ಲಿ ನಿನ್ನ ನೆರಳನೋಡುತ್ತ
ಧ್ಯಾನದ ಮೌನದಲಿ ಬಿಂಬ ಬಯಲಲಿ ಮೂಡಲೆಂದು.

ಕನಸು ಕಾಣುವುದಕ್ಕೆ ಮನಸ್ಸು
ಅರಳಿ ಹೂವಾಗಿ ನೀರ ಮೇಲೆಗಾಳಿ
ತೇಲಿ ಮೈದಡವಿ ಹಾಯ್ದು
ಹಾಯಿಗಳು ತೆರೆದುಕೊಂಡವು
ಬರುವ ಸಪ್ಪಳ ನಿನ್ನಯ ಹೆಜ್ಜೆಗಳೆಂದು.

ದೂರದಲಿ ಹಕ್ಕಿ ಹಾಡು ಕೇಳಿ
ಅರಳಿ ಘಮ್ಮೆಂದು ಸೌರಭಸೂಸಿ
ಪಾರಿಜಾತ ಗಂಧ ತೀಡಿ ಎದೆಯ
ನದಿಯ ತುಂಬ ಅಲೆಗಳು ಅರಳಿದವು
ನಿನ್ನ ಧ್ವನಿ ತೇಲಿತೇಲಿ ಮೋಡಗಳಾದವು ಎಂದು.

ಬಿಸಿಲ ಕುದುರೆ ಏರಿ ಹೊರಟ
ಕನಸುಗಳ ರಾಜ ಅರಮನೆಯ
ಅಂಗಳದಿ ಹಸಿ ಚಿಗುರು ಹಾಡಿ
ಹಾಡಿ ತೇಲಿದ ಹಕ್ಕಿಗಳ ರಾಗದಲಿ
ಮೂಡಿ ಮೊಳಕೆ ಒಡೆಯಿತು ನಿನ್ನ ಇರುವು.

ಮೋಡದ ಆದ್ರತೆ ಮಳೆಯ ತಂಪು
ಹಕ್ಕಿಗಳ ಧ್ವನಿ ಇಂಪು ಹರಿದ ಹೊಳೆಯ
ಕಂಪು ಎಲ್ಲವೂ ತೀಡಿದ ಬಿಂಬದ
ಪ್ರತಿಬಿಂಬ ಅಂಗೈಯಲಿ ಲಿಂಗ
ನಿನ್ನ ನೆರಳು ನನ್ನೆದುರು ಕಂತದೇ ನಿಂತಿದೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...