Home / ಕವನ / ಕವಿತೆ / ಕಲ್ಯಾಣನಗರದಲಿ ಎಲ್ಲಾ ಗಣಂಗಳು

ಕಲ್ಯಾಣನಗರದಲಿ ಎಲ್ಲಾ ಗಣಂಗಳು

ಕಲ್ಯಾಣನಗರದಲಿ ಎಲ್ಲಾ ಗಣಂಗಳು
ನಲ್ಮೆಯಲಿ ಕೇಳುತ್ತಲೀ
ಅಲ್ಲಿಗಲ್ಲಿಗೆ ಶಿವಶರಣರಾಗ ಕೂಡುತಲಿ
ಬಲ್ಲಿದ ಬಸವನ ಮಹಿಮೆ ಪಾಡುತಲಿ
ಎಲ್ಲಾ ಜನರು ಕೈಮುಗಿದು ಕೇಳುತ್ತಲಿ ||೧||

ಬಿಜ್ಜಳರಾಜಗೆ ಉರಿಬಾಳ ಬಿದ್ದಿತ್ತು
ಮಜ್ಜಿಗೆ ಮಾರುವ ಕೃಷ್ಣನು ಬಂದಾ
ಸೋಜಿಗದೀ ಮಾತು
ಸಾಜವು ತಿಳಿಲಿಲ್ಲಾ
ಇದರರ್ಥ ಬಲ್ಲವನೆ ಬಲ್ಲಾ ||೨||

ಬತ್ತೀಸಾಯೆಂಬುವ
ನೆತ್ತಿಯೊಳು ಬಿರಿದಿತ್ತು
ನೆತ್ತಿಯೊಳದರ ವಸುಗೆ
ಉತ್ತಮ ಶರಧಿಯೊಳೊತ್ತಿಟ್ಟು ನೋಡಲು
ಎತ್ತನೋಡಲು ಬೈಲು ಬೈಲದು ಕೂಡದೆ ||೩||

ಕರಿಯ ಮಲ್ಲಿಗೆ ಹೂವು ಅರಳಿ ಕಲ್ಯಾಣದಲಿ
ಅಲ್ಲಮಪುಭುವಿನ ಕಾಣುತಲಿ
ಗೊಲ್ಲತೇರು ಹಾಲ್ಬೆಣ್ಣಿ ಮಾರುತಲಿ
ಬಿಲ್ವ ಪತ್ರಿದಳ ಹುಟ್ಟುತಲಿ
ಲೋಕಕೆ ಆಶ್ಚರ್ಯ ತೋರುತಲಿ ||೪||

ಬನ್ನಿಯ ಮರದೊಳು ಬೇವಿನ ಮರ ಹುಟ್ಟಿ
ಚನ್ನಾಗಿ ಹಾಲ್ಗರಿಯುವದು ಕಲ್ಯಾಣನಗರದಲಿ
ಸಾಲ ದೀವಿಗಿ ಬೆಳಕಿನಲಿ ನಲಿನಲಿದಾಡುತಲಿ
ಶಿಶುನಾಳಧೀಶನು ಕೇಳುತಲಿ ಗುರುಗೋವಿಂದನ ಧ್ಯಾನದಲಿ
ಕರ್ಪುರ ಬೆಳಗುತಲೀ ಬೆಳಗಾಗುತಲಿ ||೫||
*****

 

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...