ಕಲ್ಯಾಣನಗರದಲಿ ಎಲ್ಲಾ ಗಣಂಗಳು

ಕಲ್ಯಾಣನಗರದಲಿ ಎಲ್ಲಾ ಗಣಂಗಳು
ನಲ್ಮೆಯಲಿ ಕೇಳುತ್ತಲೀ
ಅಲ್ಲಿಗಲ್ಲಿಗೆ ಶಿವಶರಣರಾಗ ಕೂಡುತಲಿ
ಬಲ್ಲಿದ ಬಸವನ ಮಹಿಮೆ ಪಾಡುತಲಿ
ಎಲ್ಲಾ ಜನರು ಕೈಮುಗಿದು ಕೇಳುತ್ತಲಿ ||೧||

ಬಿಜ್ಜಳರಾಜಗೆ ಉರಿಬಾಳ ಬಿದ್ದಿತ್ತು
ಮಜ್ಜಿಗೆ ಮಾರುವ ಕೃಷ್ಣನು ಬಂದಾ
ಸೋಜಿಗದೀ ಮಾತು
ಸಾಜವು ತಿಳಿಲಿಲ್ಲಾ
ಇದರರ್ಥ ಬಲ್ಲವನೆ ಬಲ್ಲಾ ||೨||

ಬತ್ತೀಸಾಯೆಂಬುವ
ನೆತ್ತಿಯೊಳು ಬಿರಿದಿತ್ತು
ನೆತ್ತಿಯೊಳದರ ವಸುಗೆ
ಉತ್ತಮ ಶರಧಿಯೊಳೊತ್ತಿಟ್ಟು ನೋಡಲು
ಎತ್ತನೋಡಲು ಬೈಲು ಬೈಲದು ಕೂಡದೆ ||೩||

ಕರಿಯ ಮಲ್ಲಿಗೆ ಹೂವು ಅರಳಿ ಕಲ್ಯಾಣದಲಿ
ಅಲ್ಲಮಪುಭುವಿನ ಕಾಣುತಲಿ
ಗೊಲ್ಲತೇರು ಹಾಲ್ಬೆಣ್ಣಿ ಮಾರುತಲಿ
ಬಿಲ್ವ ಪತ್ರಿದಳ ಹುಟ್ಟುತಲಿ
ಲೋಕಕೆ ಆಶ್ಚರ್ಯ ತೋರುತಲಿ ||೪||

ಬನ್ನಿಯ ಮರದೊಳು ಬೇವಿನ ಮರ ಹುಟ್ಟಿ
ಚನ್ನಾಗಿ ಹಾಲ್ಗರಿಯುವದು ಕಲ್ಯಾಣನಗರದಲಿ
ಸಾಲ ದೀವಿಗಿ ಬೆಳಕಿನಲಿ ನಲಿನಲಿದಾಡುತಲಿ
ಶಿಶುನಾಳಧೀಶನು ಕೇಳುತಲಿ ಗುರುಗೋವಿಂದನ ಧ್ಯಾನದಲಿ
ಕರ್ಪುರ ಬೆಳಗುತಲೀ ಬೆಳಗಾಗುತಲಿ ||೫||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಲವೇ… ಭಾಗ – ೩
Next post ಕಲ್ಯಾಣನಗರದಲಿ ಅಲ್ಲಮಪ್ರಭುವಿನ

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

cheap jordans|wholesale air max|wholesale jordans|wholesale jewelry|wholesale jerseys