ಓ ಎನ್ನ ಸೋದರಿ !

ಓ ಎನ್ನ ಸೋದರಿ! ವೀರ ಭಾರತದ ನಾರಿ !
ಬಾ ಇಲ್ಲಿ ಹೊರಜಗಕೆ, ಶಾಂತಿ ಸಮತೆಯ ಎಡೆಗೆ
ಹೋಗುವಾ ನಾವೆಲ್ಲ ಗಗನ ಗಡಿಯ ಮೀರಿ
ಕರೆಯುತಿಹುದು ನೋಡಲ್ಲಿ ! ಬಾ ಭಾವಿನಾಡಿನೆಡೆಗೆ

ನಿನಗಂದರವರಾರು ಅಬಲೆ ನೀನಿರುವಿ ಎಂದು
ಅರಿಯಲಾರರೇ ಆದಿ ಅವತಾರ ಶಕ್ತಿ ಯಾರು ?
ಕೂರಸಿಗಳಾಟೋಪದಲಿ ಇದಿರಾದರಾರು ಅಂದು
ನಿನ್ನ ನೀ ತಿಳಿದು ಏಳು, ನಿನ್ನ ಆ ಹೃದಯವೆಮಗೆ ತೋರು

ಸಹನೆ ಸಹಕಾರ ಶಾಂತಿ ದೀಪ್ತಿಯ ಜ್ಯೋತಿ
ಹೃದಯ ತೈಲ ಹಾಕುತೆ ನಾಡದೀವಿಗೆ ಪ್ರಜ್ವಲಿಸಲಿ
ಎನ್ನ ಸೋದರಿ ನೀನು; ಕೂಡಿ ನಡೆ ಸುಮತಿ
ಭಾರತಾಂಬೆಯ ವೀರಮಕ್ಕಳ ಬಾಳು ಬೆಳಗಲಿ

ಮನೆಯ ಕೋಣೆಯ ಮರೆಯ ಸೆರೆಯಲ್ಲಿ !
ಒಲೆಯ ಮುಂದಣ ಝಳವೆ ನಿನ್ನದೋ ನೆಲೆಯು ?
ನಿನ್ನ ಕಲೆಯಲ್ಲಿ ಬಲಿಯಾಗಿಹುದೇನು ಅಲ್ಲಿ
ಓ ನಿಲ್ಲದಿರು ನಿಂತಲ್ಲಿ, ಕೇಳದೋ ಭಾರತಿಯ ಕರೆಯು !

ಮಿಂಚಿ ಮೇಲೇಳು; ನಿನ್ನ ಹೃದಯ ಹೇಳು
ನಿನ್ನೊಳಡಗಿದ ಸತ್ವ ಸತ್ಯದಾಗರವನರುಹು
ಮನವನಾವರಿಸಿಹ ಅಬಲತೆಯ ಶೀಳು
ನೀನಹುದು ಭಾವಿವಾಣಿಯ ನಾಂದಿ ಜೀವನ ಕುರುಹು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡಮ್ಮ
Next post ಎಂಕು ಪಣಂಬೂರಿಗೆ

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…